ಬ್ರೇಕಿಂಗ್ ನ್ಯೂಸ್
19-04-24 09:27 am HK NEWS ಕ್ರೈಂ
ಗದಗ, ಏ 19: ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಮನೆಯಲ್ಲಿ ಮಲಗಿದಲ್ಲೇ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಬರ್ಬರ ಘಟನೆ ಗದಗ ನಗರದ ದಾಸರ ಓಣಿಯಲ್ಲಿ ನಡೆದಿದ್ದು, ಕೃತ್ಯದ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಕೊಲೆಯಾದವರಲ್ಲಿ ನಗರಸಭೆ ಉಪಾಧ್ಯಕ್ಷೆಯ ಪುತ್ರನೊಬ್ಬ ಸೇರಿದ್ದಾನೆ. ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಯಾದವರು. ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ದರೋಡೆ ಸೇರಿದಂತೆ ವಿವಿಧ ಆಯಾಮಗಳನ್ನು ತನಿಖೆ ನಡೆಸಲಾಗುತ್ತಿದೆ.
ಮೊದಲನೇ ಮಹಡಿಯ ಕೋಣೆಯಲ್ಲಿ ಮಲಗಿದ್ದ ಪತಿ, ಪತ್ನಿ, ಮಗಳನ್ನು ಕೊಲೆ ಮಾಡಲಾಗಿದೆ. ಈ ಮೂವರೂ ಕೊಪ್ಪಳ ಮೂಲದವರಾಗಿದ್ದು, ಏಪ್ರಿಲ್ 17ರಂದು ನಡೆದ ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್ನ ಮದುವೆ ಫಿಕ್ಸ್ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಸಂಬಂಧಿಗಳಾಗಿದ್ದಾರೆ.
ಮೇಲಿನ ಮಹಡಿಯ ಬಾಗಿಲು ಸದ್ದು ಕೇಳಿ ಅನುಮಾನಗೊಂಡು ಕುಟುಂಬಸ್ಥರು ಪೊಲೀಸರಿಗೆ ಫೋನ್ ಮಾಡಿದ್ದರು. ಪೊಲೀಸರಿಗೆ ಫೋನ್ ಮಾಡುತ್ತಿದ್ದಂತೆ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಬಾಗಿಲು ತೆಗೆದಿದ್ದರೆ ನಮ್ಮನ್ನೂ ಕೊಲೆ ಮಾಡುವ ಸಾಧ್ಯತೆಯಿತ್ತು ಎಂದು ಮನೆ ಮಾಲೀಕ ಪ್ರಕಾಶ್ ಬಾಕಳೆ ಹೇಳಿಕೆ ನೀಡಿದ್ದಾರೆ.
ಶ್ವಾನದಳ, ಫಾರೆನ್ಸಿಕ್ ತಂಡಗಳು ಆಗಮಿಸಿದ್ದು, ಮನೆಯ ಇಂಚಿಂಚೂ ಪರಿಶೀಲನೆ ಮಾಡಲಾಗಿದೆ. ಸ್ಥಳಕ್ಕೆ ಎಸ್ಪಿ ಬಿ.ಎಸ್ ನೇಮಗೌಡ, ಹೆಚ್ಚುವರಿ ಎಸ್ಪಿ ಎಂ.ಬಿ ಸಂಕದ, ಡಿವೈಎಸ್ಪಿ, ಸಿಪಿಐ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೇಲ್ನೋಟಕ್ಕೆ ದರೋಡೆಗೆ ಬಂದ ತಂಡ ನಡೆಸಿರುವ ಕೃತ್ಯದಂತೆ ಕಂಡುಬಂದಿದ್ದರೂ, ಪ್ರಕರಣದ ಹಲವು ಮಗ್ಗಲುಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
4 of Family Murdered in Gadag District, including son of city council president. The murder of three took place in the first floor of the building and have fleed from the spot throwing away weapons near by the building. Police are now investigating the case in various angle.
03-05-24 10:34 am
Bangalore Correspondent
DK Suresh, HD Devegowda, Prajwal: ಪೆನ್ಡ್ರೈವ್...
02-05-24 10:54 pm
Karnataka Legislative Council Election date:...
02-05-24 10:23 pm
Prajwal Revanna mass rapist, Rahul Gandhi, Mo...
02-05-24 09:18 pm
CT Ravi, Prajwal Ravanna: ಪ್ರಜ್ವಲ್ ರೇವಣ್ಣ ಸೆಕ...
02-05-24 08:54 pm
03-05-24 10:28 am
HK News Desk
Dubai Rain: ದುಬೈನಲ್ಲಿ ಮತ್ತೆ ಭಾರಿ ಮಳೆ ; ಶಾಲೆ,...
03-05-24 10:20 am
Narendra Modi, Rahul Gandhi: ರಾಹುಲ್ ಬಗ್ಗೆ ಪಾಕ...
02-05-24 10:07 pm
Hindu Marriage, Supreme court: ಹಿಂದು ವಿವಾಹ ಎನ...
02-05-24 09:25 pm
Senator Danesh Kumar Palyani ; ಪಾಕಿಸ್ತಾನದಲ್ಲಿ...
01-05-24 10:25 pm
02-05-24 07:52 pm
Mangalore Correspondent
Mangalore Yesuraj, AEO, Kukke Subrahmanya Tem...
02-05-24 02:24 pm
Mangalore News, Konaje, Baby: ಐದು ತಿಂಗಳ ಹಸುಗೂ...
01-05-24 08:55 pm
Hot sun heat, Mangalore temperature; ಕರಾವಳಿಯಲ...
01-05-24 11:43 am
Mangalore Super gold and diamound showroom, T...
30-04-24 08:04 pm
03-05-24 10:24 am
HK News Desk
Mangalore Crime, Drugs Arrest; ಕೋಟೆಕಾರ್ ಬೀರಿಯ...
01-05-24 10:18 pm
Mangalore crime, Court: ಮೆಲ್ಕಾರ್ ಬಳಿ ಕೋಮು ದ್ವ...
01-05-24 06:44 pm
Cyber Fraud, Online Crime: ಹೀಗೂ ಮೋಸ ಮಾಡ್ತಾರೆ,...
30-04-24 10:16 pm
Bangalore Crime, Fraud, House Rent: ಫ್ಲ್ಯಾಟ್...
29-04-24 11:50 am