ಬ್ರೇಕಿಂಗ್ ನ್ಯೂಸ್
09-11-25 03:47 pm Bangalore Correspondent ಕರ್ನಾಟಕ
ಬೆಂಗಳೂರು, ನ.9 : ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ (ಇಪಿಎಫ್) ಕೋ ಆಪರೇಟಿವ್ ಸೊಸೈಟಿಯಲ್ಲಿ 70 ಕೋಟಿ ರೂ. ದುರ್ಬಳಕೆ ನಡೆದಿರುವ ಪ್ರಕರಣದಲ್ಲಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸೊಸೈಟಿ ಅಕೌಂಟೆಂಟ್ ಲಕ್ಷ್ಮಿ ಜಗದೀಶ್ ಮನೆಯಲ್ಲಿ ಅರ್ಧ ಕೆ.ಜಿ.ಗೂ ಅಧಿಕ ಚಿನ್ನ, ಆಸ್ತಿ ಪತ್ರಗಳನ್ನು ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿಗಳಾದ ಸೊಸೈಟಿಯ ಸಿಇಒ ಜಿ. ಗೋಪಿನಾಥ್, ಲೆಕ್ಕಾಧಿಕಾರಿ ಬಿ.ಎಲ್. ಜಗದೀಶ್, ಪತ್ನಿ ಲಕ್ಷ್ಮಿ ಜಗದೀಶ್ ಅವರ ನಿವಾಸಗಳು ಹಾಗೂ ಕಚೇರಿಗಳಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ.
ಶೋಧದ ವೇಳೆ ಸುಮಾರು ಅರ್ಧ ಕೆಜಿ ಚಿನ್ನಾಭರಣ, ಥಾರ್ ಜೀಪು, ಬಿಎಂಡಬ್ಲ್ಯು ಸೇರಿ ಐಷಾರಾಮಿ ಕಾರುಗಳು, ದುಬಾರಿ ಮೌಲ್ಯದ ಬೈಕ್ಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಲಾಗಿದೆ. ಜತೆಗೆ, ಭೂಮಿ ಖರೀದಿಯ ದಾಖಲೆಗಳು ಸಿಕ್ಕಿವೆ. ಆರೋಪಿಗಳು ಅಕ್ರಮವಾಗಿ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಸಹಕಾರ ಸಂಘದ ಕಚೇರಿಯಲ್ಲಿ ಪೊಲೀಸರು ಮಹಜರು ನಡೆಸಿ, ತನಿಖೆಗೆ ಅಗತ್ಯವಿರುವ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜರಾಜೇಶ್ವರಿನಗರ, ಜೆ.ಪಿ. ನಗರ ಮತ್ತು ಅಂಜನಾಪುರದಲ್ಲಿರುವ ಆರೋಪಿಗಳಾದ ಸಿಇಒ ಜಿ. ಗೋಪಿನಾಥ್, ಲಕ್ಷ್ಮಿ ಆರ್., ಆರೋಪಿ ನಂಬರ್ 9 ಲಿಂಗೇಗೌಡ ಮತ್ತು ಆರೋಪಿ ನಂಬರ್ 10 ರಮಾನುಜ ಅವರ ಮನೆಗಳಲ್ಲೂ ಶೋಧ ನಡೆಸಲಾಗಿದೆ.
ಅವ್ಯವಹಾರದ ಬಗ್ಗೆ ಸಂಘದ ಅಧ್ಯಕ್ಷ ಸಿ.ಜೆ. ಮುರಳೀಧರ್ ಅವರು ಕಳೆದ ವಾರ ದೂರು ಸಲ್ಲಿಸಿದ್ದರು. ಸುಮಾರು 300 ನೌಕರರು ಮತ್ತು ನಿವೃತ್ತ ನೌಕರರು ಠೇವಣಿ ಇಟ್ಟಿದ್ದ 70 ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಲಾಗಿದೆ ಎಂದು ಅವರು ಆರೋಪಿಸಿದ್ದು ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
In connection with the ₹70 crore embezzlement case in the Employees’ Provident Fund (EPF) Cooperative Society, the Cubbon Park Police have seized over half a kilogram of gold ornaments and property documents from the residence of the society’s accountant, Lakshmi Jagadish.
06-12-25 12:33 pm
HK News Desk
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
Indigo Flight News, Hubli Marriage: ಕೈಕೊಟ್ಟ ಇ...
05-12-25 07:26 pm
ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್...
04-12-25 05:36 pm
06-12-25 04:58 pm
HK News Desk
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
06-12-25 06:12 pm
Mangalore Correspondent
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm