ಬ್ರೇಕಿಂಗ್ ನ್ಯೂಸ್
17-02-26 02:53 pm HK News Desk ಕರ್ನಾಟಕ
ಬೆಂಗಳೂರು, ಫೆ.17: ದೇಶದ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಪ್ರಭಾವ ಬೀರಬಲ್ಲ ಮಹತ್ವದ ಆದೇಶವೊಂದನ್ನು ದೆಹಲಿ ಹೈಕೋರ್ಟ್ ಹೊರಡಿಸಿದೆ. ಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜಾ ಅವರಿಗೆ ಸಂಬಂಧಿಸಿದ 134 ಚಲನಚಿತ್ರ ಹಾಡುಗಳ ಹಕ್ಕು ವಿಚಾರದಲ್ಲಿ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.
1976–2001ರ ಅವಧಿಯಲ್ಲಿ ರಚಿಸಲಾದ 134 ಚಿತ್ರಗಳ ಹಾಡುಗಳ ಹಕ್ಕು ತಮ್ಮದೇ ಎಂದು ಸರಿಗಮ ಕಂಪನಿ ಹೇಳಿಕೊಂಡಿತ್ತು. ಇಳಯರಾಜಾ ಸಂಗೀತ ಸಂಯೋಜಿಸಿದ 134 ಚಲನಚಿತ್ರಗಳ ಸಂಗೀತ ಹಾಗೂ ಧ್ವನಿಮುದ್ರಣ ಹಕ್ಕುಗಳನ್ನು ನಿರ್ಮಾಪಕರೊಂದಿಗೆ ಮಾಡಿದ ಔಪಚಾರಿಕ ಒಪ್ಪಂದಗಳ ಮೂಲಕ ವಿಶ್ವವ್ಯಾಪಿ ಮತ್ತು ಶಾಶ್ವತವಾಗಿ ಪಡೆದಿದ್ದೇವೆ ಎಂದು ಸರಿಗಮ ನ್ಯಾಯಾಲಯಕ್ಕೆ ತಿಳಿಸಿತ್ತು.
ಆದರೆ ಇಳಯರಾಜಾ ಈ ಹಾಡುಗಳನ್ನು ಅಮೆಜಾನ್ ಮ್ಯೂಸಿಕ್, ಐಟ್ಯೂನ್ಸ್ ಮತ್ತು ಜಿಯೋಸಾವನ್ ಸೇರಿದಂತೆ ಡಿಜಿಟಲ್ ವೇದಿಕೆಗಳಲ್ಲಿ ಅಪ್ಲೋಡ್ ಮಾಡಿ ತಮ್ಮದೇ ಹಕ್ಕು ಎಂದು ಹೇಳಿಕೊಳ್ಳುತ್ತಿರುವುದು ಕಾನೂನುಬಾಹಿರ ಎಂದು ಸಂಸ್ಥೆ ವಾದಿಸಿತ್ತು.
ಸರಿಗಮ ಪರ ವಕೀಲರು 1957ರ ಹಕ್ಕುಸ್ವಾಮ್ಯ ಕಾಯಿದೆಯ ಪ್ರಕಾರ ಚಲನಚಿತ್ರಕ್ಕಾಗಿ ರಚಿಸಲಾದ ಸಂಗೀತದ ಮೊದಲ ಮಾಲೀಕರು ನಿರ್ಮಾಪಕರೇ ಆಗುತ್ತಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ತುಷಾರ್ ರಾವ್ ಕೆಟೇಲಾ ಸರಿಗಮದ ವಾದ ಒಪ್ಪಿಕೊಂಡು, ತಡೆಯಾಜ್ಞೆ ನೀಡದಿದ್ದರೆ ಕಂಪನಿಗೆ ತುಂಬಲಾಗದ ನಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಇಳಯರಾಜಾ ಹಾಗೂ ಅವರ ಪ್ರತಿನಿಧಿಗಳು ಸಂಬಂಧಿತ ಹಾಡುಗಳನ್ನು ಬಳಸಬಾರದು ಅಥವಾ ಪರವಾನಗಿ ನೀಡಬಾರದು ಎಂದು ಆದೇಶಿಸಿದ್ದಾರೆ.
ಈಗಾಗಲೇ ಜನಪ್ರಿಯ ತಮಿಳು ಹಾಡು “ಎನ್ ಇನಿಯಾ ಪೊನ್ ನಿಲವೇ” ಬಳಕೆ ಕುರಿತಾಗಿ ಇಳಯರಾಜಾ ಮತ್ತು ಸರಿಗಮಾ ನಡುವೆ ವಿವಾದ ನಡೆದಿತ್ತು. ಅಘಾಥಿಯಾ ಚಿತ್ರದ ಬಳಕೆಗೆ ಸಂಬಂಧಿಸಿ ನ್ಯಾಯಾಲಯ ಮೊದಲು ನಿರ್ಮಾಪಕರು ಸರಿಗಮಾದಿಂದ ಪರವಾನಗಿ ಪಡೆಯದೆ ಹಾಡನ್ನು ಬಳಸಬಾರದು ಎಂದು ಹೇಳಿತ್ತು. ನಂತರ ನಿರ್ಮಾಪಕರ ಹೂಡಿಕೆ ಪರಿಗಣಿಸಿ, ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಬಳಿ 30 ಲಕ್ಷ ರೂ. ಠೇವಣಿ ಇಡುವ ಷರತ್ತಿನೊಂದಿಗೆ ಬಳಕೆ ಮಾಡಲು ಅವಕಾಶ ನೀಡಲಾಗಿತ್ತು.
ನ್ಯಾಯಾಲಯದ ಆದೇಶ ಪ್ರಕಾರ, ಇಳಯರಾಜಾ ಅಥವಾ ಅವರ ಪರವಾಗಿ ಕಾರ್ಯ ನಿರ್ವಹಿಸುವ ಸಹಭಾಗಿಗಳು, ಪ್ರತಿನಿಧಿಗಳು ಅಥವಾ ಲೈಸೆನ್ಸಿಗಳು ಸರಿಗಮ ವಶದಲ್ಲಿರುವ 134 ಚಿತ್ರಗಳ ಧ್ವನಿಮುದ್ರಣ ಹಾಗೂ ಸಾಹಿತ್ಯ-ಸಂಗೀತ ಕೃತಿಗಳ ಮೇಲೆ ಯಾವುದೇ ಮಾಲೀಕತ್ವದ ಹಕ್ಕು ಹೊಂದಿದ್ದೇವೆ ಎಂದು ಹೇಳಿಕೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಈ ಪ್ರಕರಣ ಸಂಗೀತ ಕಾಪಿರೈಟ್ ಹಕ್ಕುಗಳ ಕುರಿತು ಚಿತ್ರೋದ್ಯಮ ಮತ್ತು ಡಿಜಿಟಲ್ ಸ್ಟ್ರೀಮಿಂಗ್ ವಲಯದಲ್ಲಿ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.
11-03-26 07:16 pm
HK News Staffer
ಪರಿಷತ್ ಚುನಾವಣೆಗೆ ಸಿಗದ ಟಿಕೆಟ್ ; ಬಿಜೆಪಿ ರಾಜ್ಯ ಶ...
11-03-26 06:14 pm
ಲಕ್ಕುಂಡಿಯಲ್ಲಿ ಸಿಕ್ಕ ನಿಧಿ 500 ರಿಂದ 600 ವರ್ಷ ಹಳ...
11-03-26 12:57 pm
ಶಿಕ್ಷಕರಿಗೆ ಬೀದಿ ನಾಯಿ ನಿಯಂತ್ರಣ ಜವಾಬ್ದಾರಿ ಕೊಟ್ಟ...
11-03-26 11:48 am
LPG ಸಿಲಿಂಡರ್ ಪೂರೈಕೆ ಸ್ಥಗಿತ ; ಬೆಂಗಳೂರಿನಲ್ಲಿ ಹಲ...
10-03-26 01:47 pm
10-03-26 09:46 pm
HK News Desk
ಹರ್ಮುಜ್ ಜಲಸಂಧಿಯಲ್ಲಿ ತೈಲ ಹಡಗು ಬಂಧಿ ; ಜಗತ್ತಿಗೆ...
10-03-26 04:30 pm
ಕಚ್ಚಾ ತೈಲ ದರ ಏರಿಕೆ ; ಪಾಕಿಸ್ತಾನದಲ್ಲಿ ಅಲ್ಲೋಲಕಲ್...
10-03-26 01:31 pm
ಇರಾನ್ ನೂತನ ಸರ್ವೋಚ್ಚ ನಾಯಕನಾಗಿ ಆಯತುಲ್ಲಾ ಮೊಜ್ತಬ...
09-03-26 01:44 pm
ಇರಾನ್ ಮೇಲೆ ಮತ್ತೊಂದು ಭಾರಿ ದಾಳಿಗೆ ಟ್ರಂಪ್ ಸಿದ್ಧ...
07-03-26 11:58 am
11-03-26 09:15 pm
Mangalore Correspondent
ಬಾಡಿಗೆ ಮನೆಯಲ್ಲಿ ಡ್ರಗ್ಸ್ ಮಾರಾಟ ; ಬಂಟ್ವಾಳದ ನೇರಳ...
11-03-26 07:22 pm
ಗ್ಯಾಸ್ ಬಿಕ್ಕಟ್ಟು ; ಕುಕ್ಕೆ ಸುಬ್ರಹ್ಮಣ್ಯಕ್ಕೆ ತಟ್...
11-03-26 06:26 pm
ಕುತ್ತಾರಿನಲ್ಲಿ ಹಿಟ್ ಆಂಡ್ ರನ್ ಪ್ರಕರಣ ; ಬೈಕ್ ಧಾ...
11-03-26 03:25 pm
ಕಂಬಳಕ್ಕೆ ಪ್ರದೇಶದ ಗಡಿ ಇಲ್ಲ ; ಕರಾವಳಿ ಸಂಸ್ಕೃತಿ ಬ...
11-03-26 11:54 am
11-03-26 10:58 am
HK News Staffer
ಕೇರಳ ಚುನಾವಣೆ ಹಿನ್ನೆಲೆ ; ರೈಲಿನಲ್ಲಿ ತಪಾಸಣೆ ಬಿಗಿ...
10-03-26 08:32 pm
ಉಪ್ಪಿನಂಗಡಿ ; ಖಾಸಗಿ ವ್ಯಕ್ತಿ ಮನೆಯಲ್ಲಿ ಅಕ್ರಮ ಶೇಖ...
10-03-26 07:01 pm
ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವೇಳೆ ಕಿರಿಕ್ ; 19 ವರ...
10-03-26 01:49 pm
Vexon fraud Company, FIR: ಬ್ಲೇಡ್ ಕಂಪನಿ ವೆಕ್ಸನ...
28-02-26 11:12 am