ಬ್ರೇಕಿಂಗ್ ನ್ಯೂಸ್
02-03-26 06:51 pm HK News Staffer ದೇಶ - ವಿದೇಶ
ನವದೆಹಲಿ, ಮಾರ್ಚ್ 2: ಇರಾನ್- ಇಸ್ರೇಲ್ ಸಂಘರ್ಷ ಜೋರಾಗಿದ್ದು ಎರಡು ಕಡೆಗಳಿಂದಲೂ ಪರಸ್ಪರ ಮಿಸೈಲ್ ದಾಳಿಯಾಗುತ್ತಿದೆ. ಈ ನಡುವೆ, ಇರಾನ್ ನಲ್ಲಿ ಹೊಸತಾಗಿ ಸುಪ್ರೀಂ ಲೀಡರ್ ಆಗಿ ನೇಮಿಸಲ್ಪಟ್ಟ ಅಲಿರೆಝಾ ಅರಾಫಿ ಅವರನ್ನೂ ಮಿಸೈಲ್ ದಾಳಿಯಿಂದ ಹತ್ಯೆ ಮಾಡಲಾಗಿದೆ ಎನ್ನುವ ಸುದ್ದಿ ಬಂದಿದೆ. ಈವರೆಗಿನ ದಾಳಿಯಲ್ಲಿ ಇರಾನಿನಲ್ಲಿ 500ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.
ಹಂಗಾಮಿ ಸರ್ವೋಚ್ಛ ನಾಯಕನಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡಿದೆ. ಆದರೆ ಈ ಸುದ್ದಿಯನ್ನು ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳು ದೃಢಪಡಿಸಿಲ್ಲ. ಇರಾನ್ ಅಥವಾ ಇಸ್ರೇಲ್ ಕಡೆಯಿಂದಲೂ ಈ ಸುದ್ದಿಯನ್ನು ಪುಷ್ಟೀಕರಿಸಿಲ್ಲ. ಆದರೆ ಅರಾಫಿ ಅವರನ್ನು ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ಜೋರಾಗಿಯೇ ಸದ್ದು ಮಾಡಿದೆ.
ಮೊನ್ನೆ ಫೆ.28ರಂದು ಹಠಾತ್ತಾಗಿ ಇರಾನ್ ಮೇಲೆ ದಾಳಿ ನಡೆಸಿದ ಇಸ್ರೇಲ್ ಮಿಸೈಲ್ ಗಳು ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿಯವರನ್ನು ಹತ್ಯೆ ಮಾಡಿತ್ತು. ಆದರೆ ಹತ್ಯೆಯಾದ ಸುದ್ದಿ ಮೊದಲು ದೃಢಪಡಿಸಿರಲಿಲ್ಲ. ಇಸ್ರೇಲ್ ಗುಪ್ತಚರ ಪಡೆಗಳು ಖಚಿತಪಡಿಸಿದ ಬಳಿಕವೇ ಇರಾನ್ ಮಾಧ್ಯಮಗಳು ಕೂಡ ಖಮೇನಿ ಸಾವಾಗಿದ್ದನ್ನು ಹೇಳಿದ್ದವು. ಅಲಿ ಖಮೇನಿ ಹತ್ಯೆ ಬೆನ್ನಲ್ಲೇ ಹಿರಿಯ ಧರ್ಮಗುರು ಮತ್ತು ಖಮೇನಿ ಆಪ್ತರಾಗಿದ್ದ ಅಲಿರೆಝಾ ಅರಾಫಿ ಅವರನ್ನು ಪರಮೋಚ್ಛ ನಾಯಕರನ್ನಾಗಿ ನೇಮಿಸಲಾಗಿತ್ತು.
ಮುಂದಿನ ಸರ್ವೋಚ್ಛ ನಾಯಕನ ಆಯ್ಕೆ ಆಗುವ ವರೆಗೂ ಅರಾಫಿ ಅವರೇ ದೇಶವನ್ನು ಮುನ್ನಡೆಸಲಿದ್ದಾರೆ ಎನ್ನುವ ಸಂದೇಶ ಬಂದಿತ್ತು. ಅಲಿ ಖಮೇನಿ 1989ರಿಂದ ಇರಾನ್ ದೇಶದ ಸರ್ವೋಚ್ಛ ನಾಯಕರಾಗಿ ಅಧಿಕಾರದಲ್ಲಿದ್ದರು.
ಈ ವೇಳೆ, ಸರ್ವಾಧಿಕಾರಿ ಧೋರಣೆ ಹೊಂದಿದ್ದರು, ಹಲವರ ಹತ್ಯೆಗೆ ಕಾರಣವಾಗಿದ್ದರು ಎನ್ನುವ ಆರೋಪಗಳಿದ್ದವು. ಖಮೇನಿ ಅವರು ಅಧಿಕಾರ ತ್ಯಜಿಸಬೇಕೆಂದು ಅಲ್ಲಿನದ್ದೇ ಜನರು ಹಲವು ತಿಂಗಳುಗಳಿಂದ ಪ್ರತಿಭಟನೆಯನ್ನೂ ನಡೆಸಿದ್ದರು. ಇದೀಗ ಖಮೇನಿ ಅವರನ್ನು ಅಮೆರಿಕ- ಇಸ್ರೇಲ್ ಜಂಟಿ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ.
07-08-26 10:42 pm
HK News Desk
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಸಾವಿಗೂ ಬಾರದ ಪ...
06-08-26 03:49 pm
ಕಲಬುರಗಿಯಲ್ಲಿ SIR ಪರಿಷ್ಕರಣೆ ಶಾಕ್ ; 5.36 ಲಕ್ಷ...
06-08-26 02:19 pm
'ಮಂತ್ರಿ ಸ್ಥಾನಕ್ಕೆ ಕೋಟಿ ಕೋಟಿ ಡೀಲ್?' ಮಾಜಿ ಸಚಿವರ...
05-08-26 10:56 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
08-08-26 12:17 pm
HK News Staffer
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿ...
07-08-26 10:13 pm
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
BC Road Accident, Mangalore: ಬಿಸಿ ರೋಡ್ ಬಳಿ ಟಿ...
06-08-26 11:03 pm
08-08-26 06:04 pm
HK News Staffer
ಧರ್ಮಸ್ಥಳಕ್ಕೆ ತೆರಳುತ್ತಿದ್ದ ಪ್ರವಾಸಿಗರ ಕಾರು ರಸ್ತ...
08-08-26 12:10 pm
Udupi David Dsouza Murder, Arrest: ಉಡುಪಿ ಡೇವಿ...
08-08-26 11:39 am
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಎನ್ ಟಿಎ ಸಂಸ್ಥೆಯ...
07-08-26 10:37 pm
ಮುಡಿಪು ಬಳಿ ಹಾಡಹಗಲೇ ಒಂಟಿ ವೃದ್ಧೆಯ ಮೇಲೆ ಹಲ್ಲೆ ನಡ...
07-08-26 09:23 pm