ಬಿಜೆಪಿ ರಾಜ್ಯಾಧ್ಯಕ್ಷರು ಪಿಟೀಲು ಊದೋದನ್ನು ನಿಲ್ಲಿಸಲಿ ; ಮಿಥುನ್ ರೈ ಟಾಂಗ್

22-10-20 09:21 pm       Mangalore Reporter   ಕರಾವಳಿ

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಮೊದಲು ಪಿಟೀಲು ಊದುವುದನ್ನ ನಿಲ್ಲಿಸಲಿ ಎಂದು ಟಾಂಗ್ ನೀಡಿದ್ದಾರೆ

ಮಂಗಳೂರು, ಅಕ್ಟೋಬರ್ 22 : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮೊದಲು ಪಿಟೀಲು ಊದುವುದನ್ನ ನಿಲ್ಲಿಸಲಿ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಲೇವಡಿ ಮಾಡಿದ್ದಾರೆ. 

ಮಂಗಳೂರು ಹೊರವಲಯದ ಹಳೆಯಂಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಿಥುನ್ ರೈ, ಹುಲಿಯಾ ಕಾಡಿಗೆ, ಬಂಡೆ ಛಿದ್ರ  ಎಂಬ ನಳಿನ್ ಹೇಳಿಕೆಗೆ ಪ್ರತಿಕ್ರಿಯಿಸಿ ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ನಳಿನ್ ವ್ಯರ್ಥ ಪ್ರಚಾರ ನಡೆಸುತ್ತಿದ್ದಾರೆ. ಅವರಿಗೆ ಯಾವುದೇ ಬೆಂಬಲ ಇಲ್ಲವಾಗಿದೆ. ಅವರನ್ನು ಕೂಡಲೇ ರಸ್ತೆ ದಾರಿ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಕಳುಹಿಸಿರಿ.  ರಾಷ್ಟ್ರೀಯ ಹೆದ್ದಾರಿ 75 ರ ಅವ್ಯವಸ್ಥೆ ಮೊದಲು ಸರಿಪಡಿಸಲಿ ಎಂದು ಆಗ್ರಹಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಮಾತನ್ನು ಬೆಂಗಳೂರಿನಲ್ಲಿ ಯಾರು ಸಹ ಕೇಳುವ ಸ್ಥಿತಿಯಲ್ಲಿಲ್ಲ. ಅವರು ಮೊದಲು ಆತ್ಮವಿಮರ್ಶೆ  ಮಾಡಿಕೊಳ್ಳಲು ಮಂಗಳೂರಿನಲ್ಲಿ ಮೊದಲು ಅಭಿವೃದ್ಧಿ ಮಾಡಿರಿ. ನಂತರ ರಾಜ್ಯದ ಬಗ್ಗೆ ಚಿಂತನೆ ನಡೆಸಿರಿ ಎಂದು ಪ್ರತಿಕ್ರಿಯಿಸಿದರು. 

ಕೆಪಿಸಿಸಿ ಕೋ ಆಡಿನೇಟರ್ ಎಚ್ ವಸಂತ್ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಉಪಸ್ಥಿತರಿದ್ದರು.