Special: ಮೃತ ಪತ್ನಿಗೆ ಪ್ರತಿಮೆ, ಮನೆ ನಿರ್ಮಿಸಿದ ಆಧುನಿಕ ಶಾಜಹಾನ್ !!

11-08-20 06:23 am       Headline Karnataka News Network   ಸ್ಪೆಷಲ್ ಕೆಫೆ

ಅಪರೂಪದ ಪ್ರೇಮ ಕತನ ಒಂದು ಬೆಳಕಿಗೆ ಬಂದಿದೆ.ಕೊಪ್ಪಳದ ಉದ್ಯಮಿ ಶ್ರೀನಿವಾಸ ಗುಪ್ತಾ ಪತ್ನಿಯ ಪ್ರತಿಮೆ ಯೊಂದಿಗೆ ಗೃಹ ಪ್ರವೇಶ ಮಾಡಿದ್ದಾರೆ. ಈ ಸುಂದರ ಪ್ರೇಮ ಕಥೆಯನ್ನೆ ಅನುಸರಿಸಿದವರು ಕೊಟ್ಯಾಂತರ ಮಂದಿ. 

ಕೊಪ್ಪಳ, ಆಗಸ್ಟ್ 10: ಲೈಲಾ ಮಜುನು, ಹೀರ್ ರಾಂಜಾ, ರೋಮಿಯೊ ಜುಲಿಯೆಟ್ ರ ಪ್ರೇಮ ಕಥೆ ಕೇಳಿದ್ದೇವೆ. ಅಷ್ಟೆ ಏಕೆ ಇಂದು ಕೃಷ್ಣಾಷ್ಟಮಿ ರಾಧಾಕೃಷ್ಣ ರ ಕಥೆ ಮರೆಯುವುದುಂಟೆ. ಈ ಸುಂದರ ಪ್ರೇಮ ಕಥೆಯನ್ನೆ ಅನುಸರಿಸಿದವರು ಕೊಟ್ಯಾಂತರ ಮಂದಿ. 

ಆದರೆ ಈ ನಡುವೆ ಅಪರೂಪದ ಪ್ರೇಮ ಕತನ ಒಂದು ಬೆಳಕಿಗೆ ಬಂದಿದೆ. ಕೊಪ್ಪಳದ ಉದ್ಯಮಿ ಶ್ರೀನಿವಾಸ ಗುಪ್ತಾ ಪತ್ನಿಯ ಪ್ರತಿಮೆ ಯೊಂದಿಗೆ ಗೃಹ ಪ್ರವೇಶ ಮಾಡಿದ್ದಾರೆ.

ಕೆಲ ಸಮಯದ ಹಿಂದೆ ತನ್ನ ಪ್ರೀತಿಯ  ಪತ್ನಿ ಅಕಾಲಿಕ ಮರಣ ಹೊಂದಿದ ದು:ಖ ತಾಳಲಾರದೇ ಖಿನ್ನತೆಗೆ ಒಳಗಾಗಿದ್ದರು. ಆನಂತರ ಸುಧಾರಿಸಿ ಕೊಂಡ ಶ್ರೀನಿವಾಸ ತನ್ನ ಪತ್ನಿ ಇಚ್ಛೆ ಪಟ್ಟಿದ್ದ ಕನಸಿನ ಮನೆ ನಿರ್ಮಿಸಿದರು. ಗೃಹ ಪ್ರವೇಶ ದಂದು ಪತ್ನಿ ಕನಸಿನ ಮನೆಗೆ ಅವರ ಅನುಪಸ್ಥಿತಿ ಎದ್ದು ಕಾಣಬಾರದು ಎಂದು ಪತ್ನಿಯ ಪ್ರತಿಮೆ ನಿರ್ಮಾಣ ಮಾಡಿಸಿ ಆ ಪ್ರತಿಮೆ ಯೊಂದಿಗೆ ಗೃಹ ಪ್ರವೇಶ ಮಾಡಿದ್ದಾರೆ.

ಆ ಪ್ರತಿಮೆ ಎಷ್ಟು ನೈಜವಾಗಿದೆ ಎಂದರೆ ಗೃಹ ಪ್ರವೇಶದ ವೇಳೆ ಶ್ರೀನಿವಾಸ ಗುಪ್ತಾರ ಪತ್ನಿ ಕಂಡು  ಅತಿಥಿಗಳು ಒಮ್ಮೆ ದಾಂಗಾಗಿದ್ದರು. ಈ ಪ್ರಿತಿಮೆಯನ್ನ  ಸಿಲಿಕಾನ್ ಮಟಿರಿಯಲ್ ನಲ್ಲಿ ತಯಾರಿಸಲಾಗಿದೆ. ಥೇಟ್ ಜೀವಂತ ಮಹಿಳೆಯಂತೆ ಭಾಸವಾಗುವ ಈ ಪ್ರತಿಮೆಯನ್ನು ಬೆಂಗಳೂರಿನ ಬೊಂಬೆ ಮನೆ ಕಲಾವಿದರು ರಚಿಸಿದ್ದಾರೆ. ಅದು ಪ್ರತಿಮೆ ಎಂದು ತಿಳಿದ ನಂತರ ಸಾವರಿಸಿಕೊಂಡ ಅಥಿತಿಗಳು ಆ ಪ್ರತಿಮೆಯೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ.