ಬ್ರೇಕಿಂಗ್ ನ್ಯೂಸ್
15-09-20 01:22 pm Mangalore Reporter ಸ್ಪೆಷಲ್ ಕೆಫೆ
ಮಂಗಳೂರು, ಸೆಪ್ಟೆಂಬರ್ 14: ಬಬ್ರುವಾಹನ ಸಿನಿಮಾದಲ್ಲಿ ಡಾ.ರಾಜಕುಮಾರ್ ಅವ್ರ ಸೀರಿಯಲ್ ಡಯಲಾಗ್ಸ್ ಯಾರಿಗೆ ಗೊತ್ತಿಲ್ಲ ಹೇಳಿ. ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ.... ಎಂದು ಅಬ್ಬರಿಸಿ ಬೊಬ್ಬಿರಿದ ರಾಜಕುಮಾರ್ ಅವರ ದ್ವಿಪಾತ್ರ ಕನ್ನಡ ಚಿತ್ರರಂಗದಲ್ಲಿ ಅದ್ವಿತೀಯ ಎನಿಸಿತ್ತು. ಅವ್ರ ಉಭಯ ಪಾತ್ರದ ಡಯಲಾಗ್ಸ್ ಅಂತೂ ಯಾವ ಕಾಲಕ್ಕೂ ನವನವೀನ.. ಅಂಥ ಕ್ಲಿಷ್ಟ ಪದಗಳ ವರ್ಣನೆಯ ಡಯಲಾಗ್ ಹೇಳುವುದು ಸಾಮಾನ್ಯ ಕಲಾವಿದರಿಂದ ಅಸಾಧ್ಯ ಎನ್ನುವ ಮಾತೇ ಇದೆ. ಇಂಥದ್ರಲ್ಲಿ ಇಲ್ಲೊಬ್ಬ ನಾಲ್ಕು ವರ್ಷದ ಪೋರ ಬಬ್ರುವಾಹನ ಮತ್ತು ಅರ್ಜುನ ಪಾತ್ರಗಳ ಇಬ್ಬಗೆಯ ಡಯಲಾಗ್ ಹೇಳಿ ಜಾಲತಾಣದಲ್ಲಿ ಕಿಂಗ್ ಆಗಿದ್ದಾನೆ.
ಹೌದು.. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದ ಪುಟಾಣಿ ಆಕಾಶ್ ಭಟ್ ಹೇಳಿದ ಬಬ್ರುವಾಹನ ಚಿತ್ರದ ಡಬಲ್ ಡಯಲಾಗ್ ಈಗ ರಾಜಕುಮಾರ್ ಪುತ್ರ, ಚಿತ್ರನಟ ಪುನೀತ್ ರಾಜಕುಮಾರ್ ಗಮನವನ್ನು ಸೆಳೆದಿದೆ. ಪೋರನ ಮಾತಿಗೆ ಮೆಚ್ಚುಗೆ ಸೂಚಿಸಿರುವ ಪುನೀತ್, ತಂದೆಯವರಿಗೆ ರಾಜ್ಯಾದ್ಯಂತ ಅವೆಷ್ಟೋ ಅಭಿಮಾನಿಗಳು ಇದ್ದರು. ಇಂಥ ಪೋರನ ಸಾಹಸ ಕಂಡಿರಲಿಲ್ಲ. ಸಹಭಾಷ್ ಎಂದಿದ್ದಾರೆ.
ಅಲ್ಲದೆ, ಹುಡುಗನ ವಿಡಿಯೋವನ್ನೇ ಮತ್ತೆ ಎಡಿಟ್ ಮಾಡಿ ತನ್ನ ಅಭಿನಂದನೆಯ ಮಾತು ಸೇರಿಸಿ, ಫೇಸ್ಬುಕ್ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದ್ದು ಆಕಾಶ್ ಭಟ್ ರಾಜ್ಯದಾದ್ಯಂತ ಮನೆಮಾತಾಗಿದ್ದಾನೆ.
ಅಂದಹಾಗೆ, ಈ ಪೋರ ಬೆಂಗಳೂರಿನಲ್ಲಿ ಇಂಜಿನಿಯರ್ ದಂಪತಿ ಆಗಿರುವ ಆದಿತ್ಯ ಮತ್ತು ಪೂನಂ ಅವರ ಪುತ್ರ. ಪಂಜದ ವೆಂಕಟರಮಣ ಭಟ್ಟರ ಮೊಮ್ಮಗ ಎಂಬ ಮಾಹಿತಿಯೂ ಸಿಕ್ಕಿದೆ. ನಾಲ್ಕರ ಹರೆಯದ ಮಗುವಿನ ತೊದಲ್ನುಡಿಯಲ್ಲಿ ಬಬ್ರುವಾಹನ ಪಾತ್ರದ ಡಯಲಾಗ್ ಹೇಗಿರಬಹುದು ಎಂಬುದನ್ನು ನೀವೇ ಕೇಳಿ ಆನಂದಿಸಿ..
Join our WhatsApp group for latest news updates
video
20-04-24 03:37 pm
HK News Desk
Hubballi Neha Murder, Accused Mother: ನೇಹಾಳೇ...
20-04-24 02:30 pm
Bhatkal boat: ಭಟ್ಕಳ ; ಗಾಳಿ ಮಳೆಗೆ ಮೀನುಗಾರಿಕಾ ಬ...
20-04-24 12:54 pm
Neha murder hubballi, Father: ಬಿಜೆಪಿ ಬಿಟ್ಟು ಕ...
20-04-24 12:53 pm
Hubbali Murder, Pramod Muthalik; ಹುಬ್ಬಳ್ಳಿ ಕೊ...
19-04-24 11:17 pm
17-04-24 08:42 pm
HK News Desk
Gujarat, Road Accident: ನಿಂತಿದ್ದ ಟ್ರಕ್ಗೆ ಗುದ...
17-04-24 07:07 pm
Dubai, Oman Rain, flood; ಧಾರಾಕಾರ ಮಳೆಗೆ ಕೊಚ್ಚಿ...
17-04-24 12:53 pm
29 Naxalites killed in Kanker encounter, Chha...
16-04-24 07:50 pm
ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ ; ಏಳು ಮಂದಿ ದುರ್...
16-04-24 05:09 pm
20-04-24 04:45 pm
Mangalore Correspondent
Rain in Mangalore, Udupi: ದಕ್ಷಿಣ ಕನ್ನಡ ಜಿಲ್ಲೆ...
20-04-24 12:12 pm
Mangalore Yedapadavu accident: ಮಣ್ಣು ಸಾಗಾಟದ ಕ...
19-04-24 10:11 pm
Mangalore accident, Kulur: ಕೋಡಿಕಲ್ ಕ್ರಾಸ್ ನಲ್...
19-04-24 09:55 pm
Mangalore election, 144 section: ಲೋಕಸಭೆ ಚುನಾವ...
19-04-24 08:32 pm
19-04-24 10:25 pm
Mangalore Correspondent
Mangalore Acid Attack, EXAM: ಆ್ಯಸಿಡ್ ದಾಳಿಗೀಡಾ...
19-04-24 09:25 pm
Hubballi student Neha murder: ಹುಬ್ಬಳ್ಳಿ ಕಾಲೇ...
19-04-24 03:43 pm
Gadag Murder news, four killed; ನಗರ ಸಭೆ ಉಪಾಧ್...
19-04-24 09:27 am
Bangalore Double Murder: 'ಕರಿಮಣಿ ಮಾಲೀಕ'ನಿಗೆ ತ...
18-04-24 10:03 pm