ರಾಷ್ಟ್ರೀಯ ಮಕ್ಕಳ ಶ್ರೀಕೃಷ್ಣ ಫೋಟೋ ಸ್ಪರ್ಧೆ ; ಸಾಂದೀಪನಿ ಶಾಲೆಯ ವಿದ್ಯಾರ್ಥಿನಿ ಜ್ಞಾನ ರೈಗೆ ಪ್ರಶಸ್ತಿ

16-09-20 12:55 pm       Mangalore Correspondent   ಸ್ಪೆಷಲ್ ಕೆಫೆ

ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಏರ್ಪಡಿಸಲಾಗುವ ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿ ಜ್ಞಾನ ರೈ ವಿಜೇತರಾಗಿದ್ದಾರೆ.

ಪುತ್ತೂರು, ಸಪ್ಟೆಂಬರ್ 16: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಏರ್ಪಡಿಸಲಾಗುವ ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿ ನರಿಮೊಗರು ಸಾಂದೀಪನಿ ಶಾಲೆಯ ವಿದ್ಯಾರ್ಥಿನಿ ಜ್ಞಾನ ರೈ ವಿಜೇತರಾಗಿದ್ದಾರೆ.

ಉತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಶ್ರೀಕೃಷ್ಣ ಫೋಟೋ ಸ್ಪರ್ಧೆಯಲ್ಲಿ  ಸಾಂದೀಪನಿ ವಿದ್ಯಾ ಸಂಸ್ಥೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಜ್ಞಾನ ರೈ ವಿಜೇತರಾಗಿದ್ದು ಪ್ರಶಸ್ತಿಗೆ ಭಾಜನರಾಗಿದ್ದಾರೆ ಇವರು ಉದ್ಯಮಿ ಜಯರಾಮ ರೈ, ಹೇಮಾ.ಜೆ.ರೈ ದಂಪತಿಯ ಪುತ್ರಿ.

Join our WhatsApp group for latest news updates