ಪಾರ್ಸೆಲ್ ಇದೆಯೆಂದು ಹೇಳಿ ಮನೆಗೆ ನುಗ್ಗಿದ ಕಳ್ಳರು ; ಹಾಡಹಗಲೇ ಮಹಿಳೆಯನ್ನು ಕಟ್ಟಿಹಾಕಿ ಚಿನ್ನಾಭರಣ ದರೋಡೆ 

17-09-22 04:53 pm       HK News Desk   ಕ್ರೈಂ

ಪಾರ್ಸೆಲ್ ಇದೆಯೆಂದು ಹೇಳಿ ಮನೆಗೆ ನುಗ್ಗಿದ ಕಳ್ಳರು ಹಾಡಹಗಲೇ ಮಹಿಳೆಯನ್ನು ಕಟ್ಟಿಹಾಕಿ ಚಿನ್ನಾಭರಣ ದರೋಡೆ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. 

ಮೈಸೂರು, ಸೆ.17 : ಪಾರ್ಸೆಲ್ ಇದೆಯೆಂದು ಹೇಳಿ ಮನೆಗೆ ನುಗ್ಗಿದ ಕಳ್ಳರು ಹಾಡಹಗಲೇ ಮಹಿಳೆಯನ್ನು ಕಟ್ಟಿಹಾಕಿ ಚಿನ್ನಾಭರಣ ದರೋಡೆ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. 

ನಂಜನಗೂಡಿನ ರಾಮಸ್ವಾಮಿ ಬಡಾವಣೆಯ ಒಂದನೇ ಬ್ಲಾಕ್ ನಲ್ಲಿ ಘಟನೆ ನಡೆದಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ‌ಡೂಪ್ಲಿಕೇಟ್ ಪಾರ್ಸಲ್ ಬಾಕ್ಸ್ ಒಂದನ್ನು  ಹಿಡಿದು ಬಂದಿದ್ದ ವ್ಯಕ್ತಿಯೊಬ್ಬ ಪಾರ್ಸಲ್ ಬಂದಿದೆ ಎಂದು ಹೇಳಿ ಬಾಗಿಲು ತೆಗೆಯಿಸಿದ್ದಾನೆ. ಈ ವೇಳೆ, ಒಳನುಗ್ಗಿದ ನಾಲ್ಕೈದು ಮಂದಿಯಿದ್ದ ಕಳ್ಳರು ಮಹಿಳೆಯನ್ನು ಬೆದರಿಸಿ ಕೈಕಾಲು ಕಟ್ಟಿ ಬಾಯಿಗೆ ಪ್ಲಾಸ್ಟರ್ ಅಂಟಿಸಿ ದರೋಡೆ ನಡೆಸಿದ್ದಾರೆ. 

ಮಹಿಳೆಯ ಮೈ ಮೇಲಿದ್ದ ಚಿನ್ನದ ಮಾಂಗಲ್ಯ ಸರ, ಕೈ ಬಳೆ, ಉಂಗುರ, ಬೀರುವಿನಲ್ಲಿದ್ದ ಮತ್ತೊಂದು ಜೊತೆ ಕೈ ಬಳೆ, ನೆಕ್ಲೆಸ್ ಹ್ಯಾಂಗಲ್ಸ್, ತಲೆಬೊಟ್ಟು ಸೇರಿ ಒಟ್ಟು 175  ಗ್ರಾಂ ಗೂ ಹೆಚ್ಚು ಚಿನ್ನದ ಒಡವೆಯನ್ನು ದೋಚಿ ಪರಾರಿಯಾಗಿದ್ದಾರೆ. ಪ್ರೌಢಶಾಲಾ ಶಿಕ್ಷಕ ಶಂಭುಸ್ವಾಮಿ ಎಂಬವರ ಪತ್ನಿ ದಾಕ್ಷಾಯಿಣಿ ಚಿನ್ನ ಕಳೆದುಕೊಂಡು ಮಹಿಳೆಯಾಗಿದ್ದು ಮಹಿಳೆ ಒಬ್ಬರೇ ಇದ್ದಾಗ ಘಟನೆ ನಡೆದಿದೆ. 

ಕಳ್ಳರು ಕನ್ನಡ, ತಮಿಳು, ಹಿಂದಿ ಮಾತನಾಡುತ್ತಿದ್ದರು ಎಂದು ಮಹಿಳೆ ತಿಳಿಸಿದ್ದಾರೆ. ನಂಜನಗೂಡು ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Mysuru Robbers tie up home alone woman in the name of giving courier, run with 175 grams of gold.