ಬ್ರೇಕಿಂಗ್ ನ್ಯೂಸ್
12-08-23 12:01 pm Mangalore Correspondent ಕ್ರೈಂ
ಪುತ್ತೂರು, ಆಗಸ್ಟ್ 12: ಮೋದಿ ಹಣ ಬ್ಯಾಂಕ್ ಖಾತೆಗೆ ಬಂದಿದೆ, ತೆಗೆಸಿ ಕೊಡುತ್ತೇನೆಂದು ಹೇಳಿ ವೃದ್ಧ ವ್ಯಕ್ತಿಯೊಬ್ಬರನ್ನು ನಂಬಿಸಿ ಅವರಿಂದಲೇ 7 ಸಾವಿರ ರೂಪಾಯಿ ಕಿತ್ತುಕೊಂಡು ಮೋಸಗೊಳಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದ್ದು, ಪೊಲೀಸ್ ದೂರು ದಾಖಲಾಗಿದೆ.
ಉಪ್ಪಿನಂಗಡಿ ಬಳಿಯ ಪದ್ಮುಂಜ ನಿವಾಸಿ 65 ವರ್ಷದ ವ್ಯಕ್ತಿಯೊಬ್ಬರು ಅಡಿಕೆ ಮಾರಾಟ ಮಾಡಿ ಹಣದೊಂದಿಗೆ ಹಿಂತಿರುಗುತ್ತಿದ್ದಾಗ ಬೈಕಿನಲ್ಲಿ ಬಂದಿದ್ದ ಯುವಕನೊಬ್ಬ ತುಳುವಿನಲ್ಲಿ ತನ್ನನ್ನು ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ, ತಾನೀಗ ಕೆನರಾ ಬ್ಯಾಂಕ್ ನಲ್ಲಿದ್ದು, ಕೊರೊನಾ ಸಂದರ್ಭದಲ್ಲಿ ಮೋದಿಯವರ ಹಣ ಸಾಕಷ್ಟು ಬಂದಿದೆ. ನಿಮಗೆ ಹಣ ತೆಗೆಸಿಕೊಡುತ್ತೇನೆಂದು ಹೇಳಿ ಯಾಮಾರಿಸಿದ್ದಾನೆ. ಅಲ್ಲದೆ, ನಿಮ್ಮ ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಜೆರಾಕ್ಸ್ ಕೊಟ್ಟರೆ ಸಾಕು. ಅದಕ್ಕಾಗಿ 7 ಸಾವಿರ ಕೊಟ್ಟರೆ ಎಲ್ಲ ಕೆಲಸ ನಾನು ಮಾಡಿಸಿಕೊಡುತ್ತೇನೆ ಎಂದು ಹೇಳಿ ನಂಬಿಕೆ ಹುಟ್ಟಿಸಿದ್ದಾನೆ.
ನೀವು ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ತರುವುದಕ್ಕೂ ಮುನ್ನ 7 ಸಾವಿರ ರೂ. ತನಗೆ ನೀಡಿ, ಉಳಿದ ಅರ್ಜಿ ತುಂಬುವ ಕೆಲಸ ಮಾಡಿಸುತ್ತೇನೆ ಎಂದು ಹೇಳಿದ್ದು, ಅದರಂತೆ ಅಡಿಕೆ ಮಾರಿದ ಹಣದಲ್ಲಿ ವೃದ್ಧ ವ್ಯಕ್ತಿ ಹಣವನ್ನು ನೀಡಿದ್ದಾರೆ. ವೃದ್ಧ ವ್ಯಕ್ತಿ ಆಧಾರ್ ಕಾರ್ಡ್ ಜೊತೆಗೆ ಬರುವಷ್ಟರಲ್ಲಿ ಬೈಕ್ ಸಹಿತ ಯುವಕ ನಾಪತ್ತೆಯಾಗಿದ್ದ. ಆನಂತರ, ಎಷ್ಟು ಹುಡುಕಾಡಿದರೂ ಯುವಕ ಸಿಗದೇ ಇದ್ದುದರಿಂದ ಇತರೇ ಸಾರ್ವಜನಿಕರಿಗೆ ತಿಳಿಸಿದಾಗ ಮೋಸ ಹೋಗಿದ್ದು ತಿಳಿದುಬಂದಿದೆ. ಈ ಬಗ್ಗೆ ಹಣ ಕಳಕೊಂಡವರು ಪೊಲೀಸರಿಗೆ ದೂರು ನೀಡಿದ್ದು ಉಪ್ಪಿನಂಗಡಿ ಪೇಟೆಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸುತ್ತಿದ್ದಾರೆ.
ಮೋದಿ ಹಣ ಬಂದಿದೆ ಎಂದು ಹೇಳಿ ಅಮಾಯಕರಿಂದ ಹಣ ಎಗರಿಸುವ ಕೃತ್ಯ ಉಪ್ಪಿನಂಗಡಿ ಆಸುಪಾಸಿನಲ್ಲಿ ಹಲವು ಬಾರಿ ನಡೆದಿದ್ದು, ಪ್ರತಿ ಬಾರಿಯೂ 7 ಸಾವಿರ ರೂ. ಕೀಳುತ್ತಿರುವುದರ ಹಿಂದೆ ಒಬ್ಬನದ್ದೇ ಕೈವಾಡ ಇರುವ ಶಂಕೆ ಉಂಟಾಗಿದೆ.
Puttur Man cheats of 7 thousand to old man saying Modi money has come to Bank account.
24-09-25 03:55 pm
Bangalore Correspondent
ಕರ್ನಾಟಕ ಜನಸಂದಣಿ ನಿಯಂತ್ರಣ ಕಾಯ್ದೆ ರೆಡಿ ; ಏಳು ವರ...
23-09-25 07:26 pm
Karnataka High court, Caste census: ಜಾತಿ ಗಣತಿ...
22-09-25 07:07 pm
ಚಾಮುಂಡೇಶ್ವರಿ ಹೆಣ್ಣಿನ ಶಕ್ತಿಯ ಪ್ರತೀಕ, ದಸರಾ ನ್ಯಾ...
22-09-25 03:31 pm
ಬಿಜೆಪಿ ವಿರೋಧ ನಡುವೆಯೇ ಚಾಮುಂಡಿ ತಾಯಿಗೆ ಕೈಮುಗಿದು...
22-09-25 10:54 am
24-09-25 01:07 pm
HK News Desk
ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧ ನಿಲ್ಲಿಸಿದರೆ ಟ್ರಂ...
24-09-25 12:20 pm
Narendra Modi, Xi Jinping: ಭಾರತದಲ್ಲಿ ಸರ್ಕಾರ ಬ...
23-09-25 08:29 pm
ಕೋಲ್ಕತ್ತಾದಲ್ಲಿ ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ಐವ...
23-09-25 11:05 am
Pakistans Khyber Pakhtunkhwa: ಪಾಕಿಸ್ತಾನದ ಖೈಬರ...
22-09-25 06:58 pm
24-09-25 10:48 pm
Mangalore Correspondent
ಖಾಸಗಿ ಜಮೀನಲ್ಲಿ ಅಕ್ರಮ ಹೆದ್ದಾರಿ ನಿರ್ಮಿಸಿದ್ದ ಪಿಡ...
24-09-25 08:46 pm
Priyank Kharge, Dharmasthala SIT: ಅಕ್ರಮ ಎಷ್ಟೇ...
24-09-25 07:38 pm
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಪೀಕರ್ ಧ್ವನಿಯಡಗಿಸಿದ್...
24-09-25 06:55 pm
ಚಿನ್ನಯ್ಯ ಮತ್ತೆ ಬೆಳ್ತಂಗಡಿ ಕೋರ್ಟಿಗೆ ಹಾಜರು, ದೂರು...
23-09-25 11:01 pm
23-09-25 11:01 am
HK News Desk
ಮುಂಬೈನಿಂದ ಡ್ರಗ್ಸ್ ತಂದು ಮಂಗಳೂರಿನಲ್ಲಿ ಮಾರಾಟ ; ಎ...
22-09-25 08:16 pm
IAS Officer Manivannan, Cyber Fraud: ಹಿರಿಯ ಐಎ...
21-09-25 02:30 pm
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am