ಬ್ರೇಕಿಂಗ್ ನ್ಯೂಸ್
18-08-23 09:58 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 18: ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಮೂಲದ ವ್ಯಕ್ತಿಯೊಬ್ಬರು ಪದೋನ್ನತಿ ಹೊಂದಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ವೇಳೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲಿ ಉದ್ಯೋಗದಲ್ಲಿರುವಾಗಲೇ ಹ್ಯಾಕರ್ ಗಳ ಕಾಟಕ್ಕೆ ಸಿಲುಕಿ ತಾನು ಮಾಡದ ತಪ್ಪಿಗೆ ಜೈಲು ಪಾಲಾಗಿದ್ದಾರೆ.
ಕಡಬ ತಾಲೂಕು ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್ (34) ಸೌದಿ ಅರೇಬಿಯಾದ ರಿಯಾದ್ ನಲ್ಲಿ ಜೈಲು ಶಿಕ್ಷೆಗೆ ಒಳಗಾದವರು. ಅಲ್ಪಾನರ್ ಸೆರಾಮಿಕ್ಸ್ ಎನ್ನುವ ಕಂಪನಿಯಲ್ಲಿ ಈ ಹಿಂದೆ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಚಂದ್ರಶೇಖರ್ 2022ರಲ್ಲಿ ಭಡ್ತಿ ಪಡೆದು ಸೌದಿಗೆ ತೆರಳಿ ಕೆಲಸ ಆರಂಭಿಸಿದ್ದರು. ಕಳೆದ ನವೆಂಬರ್ ತಿಂಗಳಲ್ಲಿ ರಿಯಾದ್ ನಲ್ಲಿ ಮೊಬೈಲ್ ಸಿಮ್ ಖರೀದಿಗೆಂದು ತೆರಳಿದ್ದರು. ಅರ್ಜಿ ತುಂಬಿಸುತ್ತಿದ್ದಾಗ ಎರಡು ಬಾರಿ ಹೆಬ್ಬೆಟ್ಟು ಸಹಿ ನೀಡಿದ್ದರು.
ವಾರದ ಬಳಿಕ ಅವರಿಗೆ ಅವರಿಗೆ ಅರೇಬಿಕ್ ಭಾಷೆಯಲ್ಲಿ ಹೊಸ ದೂರವಾಣಿ ಸಂಖ್ಯೆಗೆ ಸಂದೇಶ ಬಂದಿತ್ತು. ಎರಡು ದಿನಗಳ ಬಳಿಕ ಅಪರಿಚಿತ ದೂರವಾಣಿ ಕರೆಯೊಂದು ಬಂದಿದ್ದು, ಮೊಬೈಲ್ ಸಂಖ್ಯೆಗೆ ಸಂಬಂಧಿಸಿ ಮಾಹಿತಿ ಕೇಳಿ ಓಟಿಪಿ ನಂಬರ್ ಕೇಳಿದ್ದರು. ಒಂದು ವಾರ ಕಳೆಯುವಷ್ಟರಲ್ಲಿ ಅಲ್ಲಿನ ಪೊಲೀಸರು ಬಂದು ಇವರನ್ನು ಬಂಧಿಸಿದ್ದರು. ಪೊಲೀಸರ ಪ್ರಕಾರ, ಚಂದ್ರಶೇಖರ್ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದಿದ್ದು, ಅದರಿಂದ ಬೇರೊಬ್ಬ ಮಹಿಳೆಯ ಖಾತೆಯಿಂದ 22 ಸಾವಿರ ರಿಯಾಲ್ ಹಣ ಜಮೆಯಾಗಿತ್ತು. ಯಾರೋ ಹ್ಯಾಕರ್ಸ್ ಇದನ್ನು ಚಂದ್ರಶೇಖರ್ ಗೆ ತಿಳಿಯದಂತೆ ಮಾಡಿದ್ದು, ಆ ಹಣ ಕೆಲವೇ ಹೊತ್ತಲ್ಲಿ ಬೇರೆ ದೇಶಕ್ಕೆ ರವಾನೆಯಾಗಿತ್ತು. ಈ ಬಗ್ಗೆ ಮಹಿಳೆ ಚಂದ್ರಶೇಖರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಅಧಿಕಾರಿಗಳು ಇವರನ್ನು ಬಂಧಿಸಿದ್ದರು.
ಮದುವೆ ತಯಾರಿಯಲ್ಲಿದ್ದಾಗಲೇ ಬಂಧನ
ಚಂದ್ರಶೇಖರ್ ಅವರಿಗೆ ಊರಿನಲ್ಲಿ ಹೆಣ್ಣು ಗೊತ್ತುಪಡಿಸಿ 2023ರ ಜನವರಿಯಲ್ಲಿ ಮದುವೆ ನಿಶ್ಚಿತಾರ್ಥಕ್ಕೆ ದಿನ ನಿಗದಿ ಮಾಡಲಾಗಿತ್ತು. ಮದುವೆಯ ದಿನಾಂಕವನ್ನೂ ನಿರ್ಧರಿಸಲಾಗಿತ್ತು. ಮದುವೆ ಸಿದ್ಧತೆಯಲ್ಲಿದ್ದಾಗಲೇ ಚಂದ್ರಶೇಖರ್ ತಾನು ಮಾಡದ ತಪ್ಪಿನಿಂದಾಗಿ ಜೈಲು ಸೇರುವಂತಾಗಿದೆ. ಕಳೆದ ಎಂಟು ತಿಂಗಳಿನಿಂದ ಆತನ ಕುಟುಂಬ ಮಗನನ್ನು ಬಿಡಿಸಿ ತರಲು ಶ್ರಮಿಸುತ್ತಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೂಲಕ ವಿದೇಶಾಂಗ ಇಲಾಖೆಯ ನೆರವನ್ನೂ ಯಾಚಿಸಿದೆ. ಅಲ್ಲದೆ, ಚಂದ್ರಶೇಖರ್ ಅವರನ್ನು ಜೈಲಿನಿಂದ ಹೊರತರಲು ಆತನ ಗೆಳೆಯರು ಸೇರಿ 10 ಲಕ್ಷ ರೂ. ಒಟ್ಟು ಸೇರಿಸಿ ಅಲ್ಲಿನ ವಕೀಲರಿಗೆ ನೀಡಿದ್ದಾರೆ. ಆದರೆ ಯಾವುದೂ ಪ್ರಯೋಜನವಾಗಿಲ್ಲ ಎಂದು ಚಂದ್ರಶೇಖರ್ ಅವರ ನಿಕಟವರ್ತಿ ಶ್ರೀಧರ್ ಗೌಡ ಕೊಕ್ಕಡ ಮತ್ತು ಎನ್ಇಸಿಎಫ್ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.
Conned by hackers, Kadaba youth arrested in Riyadh prison, family urges for his release in Mangalore. A youth, native of Kadaba, who had gone to Saudi Arabia on employment was trapped by bank account hackers and is languishing presently in a prison in Riyadh. His family members have urged union government for the release of the innocent youth.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am