ಬ್ರೇಕಿಂಗ್ ನ್ಯೂಸ್
01-09-23 05:11 pm Mangalore Correspondent ಕ್ರೈಂ
ಉಳ್ಳಾಲ, ಸೆ.1: ನರಿಂಗಾನ ಗ್ರಾಮದ ಮೊಂಟೆಪದವಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಕಿಟಕಿಯ ಸಲಾಕೆ ಮತ್ತು ಬಾಗಿಲು ಮುರಿದು ಕನ್ನ ಹಾಕಿದ ಕಳ್ಳರು 15 ಸಾವಿರ ನಗದು, ಎರಡು ಲ್ಯಾಪ್ ಟಾಪ್ ಮತ್ತು ತನಿಖೆಯ ಜಾಡು ತಪ್ಪಿಸಲು ಸಿಸಿಟಿವಿಯ ಮೂರು ಡಿವಿಆರ್ ಗಳನ್ನೇ ಕದ್ದೊಯ್ದಿದ್ದಾರೆ.
ಕಾಲೇಜು ಹಾಗೂ ಪ್ರೌಢಶಾಲೆ ಕಟ್ಟಡದ ಆವರಣದಲ್ಲಿ ಕಾಲೇಜು ಪ್ರಿನ್ಸಿಪಾಲ್, ಪ್ರೌಢಶಾಲೆ ವೈಸ್ ಪ್ರಿನ್ಸಿಪಾಲ್ ಕಚೇರಿ ಇದ್ದು ಎರಡೂ ಕೊಠಡಿಗಳಿಗೆ ಕಳ್ಳರು ನಿನ್ನೆ ರಾತ್ರಿ ಕನ್ನ ಹಾಕಿದ್ದಾರೆ. ಕಾಲೇಜಿನ ಪ್ರಿನ್ಸಿಪಾಲ್ ಕಚೇರಿಯ ಕಿಟಕಿಯ ಸಲಾಕೆ ಮುರಿಯಲು ಕಳ್ಳರು ವಿಫಲರಾಗಿದ್ದು ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ್ದಾರೆ. ಒಳಗಿದ್ದ ಮೂರು ಕಪಾಟನ್ನು ಮುರಿದು ದಾಖಲೆ ಪತ್ರಗಳನ್ನ ತಡಕಾಡಿ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕಪಾಟಿನಲ್ಲಿದ್ದ 15 ಸಾವಿರ ರೂಪಾಯಿ ನಗದು ಎಗರಿಸಿದ ಚಾಣಾಕ್ಷ ಕಳ್ಳರು ಮೂರು ಸ್ಮಾರ್ಟ್ ಫೋನ್ ಗಳನ್ನ ಅಲ್ಲೇ ಬಿಟ್ಟು ಒಂದು ಡಿವಿಆರ್ ಕದ್ದೊಯ್ದಿದ್ದಾರೆ. ಕಾಲೇಜು ಸ್ಟಾಫ್ ರೂಂಗೂ ಕಳ್ಳರು ನುಗ್ಗಿದ್ದು ಅಲ್ಲಿ ಏನೂ ಸಿಕ್ಕಿಲ್ಲ.
ಹೈಸ್ಕೂಲ್ ವೈಸ್ ಪ್ರಿನ್ಸಿಪಾಲ್ ಕೊಠಡಿಯ ಕಿಟಕಿಯ ಸಲಾಕೆ ಮುರಿದು ಒಳನುಗ್ಗಿದ ಕಳ್ಳರು ಎರಡು ಲ್ಯಾಪ್ ಟ್ಯಾಪ್ ,ಚಿಲ್ಲರೆ ನಗದು ಮತ್ತು ಎರಡು ಡಿವಿಆರ್ ಗಳನ್ನ ಕದ್ದೊಯ್ದಿದ್ದಾರೆ.


ಕಬಾಟುಗಳನ್ನ ತಡಕಾಡಿ ಅಮೂಲ್ಯ ದಾಖಲೆ ಪತ್ರಗಳನ್ನೆಲ್ಲ ನೆಲಕ್ಕೆಸೆದು ಹೋಗಿದ್ದಾರೆ. ಇಂದು ಬೆಳಗ್ಗೆ ಶಾಲೆಗೆ ಬಂದ ಶಿಕ್ಷಕರು, ವಿದ್ಯಾರ್ಥಿಗಳಿಗೆ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದ್ದು ತಕ್ಷಣವೇ ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ಶ್ವಾನದಳ, ಫೋರೆನ್ಸಿಕ್ ತಜ್ಞರು ಪರಿಶೀಲನೆ ನಡೆಸಿದ್ದು, ಚಾಲಾಕಿ ಕಳ್ಳರು ಡಿವಿಆರ್ ಹೊತ್ತೊಯ್ದಿರುವುದರಿಂದ ಸಮೀಪದ ಅಂಗಡಿಗಳಲ್ಲಿ ಸಿಸಿಟಿವಿ ಫೂಟೇಜ್ ಪರಿಶೀಲಿಸುತ್ತಿದ್ದಾರೆ.
Mangalore Robbers enter Naringana karnataka public school, flee with cash and laptop.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
27-07-26 09:48 pm
HK News Staffer
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
27-07-26 11:07 pm
Mangaluru Staffer
ಕಾಪುವಿನಲ್ಲಿ ಎಕ್ಸ್ಪ್ರೆಸ್ ಬಸ್ಗಳ ದರ್ಪ! ಟೈಮಿಂಗ್...
27-07-26 10:21 pm
ಸಚಿವ ಸ್ಥಾನ ಕೊಡಿಸಲು ಮೂರು ಕೋಟಿ ಬೇಡಿಕೆ ; ಕೇರಳದ ಶ...
27-07-26 09:04 pm
ಬೆಂಗಳೂರು ಗ್ಯಾರೇಜ್ ನಲ್ಲಿ ಅಗ್ನಿ ಅವಘಡ ; ಜಾಗ್ವಾರ...
27-07-26 07:35 pm
ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಲೈಂಗಿಕ ಕಿರುಕುಳ ಆರೋ...
27-07-26 01:09 pm