ಬ್ರೇಕಿಂಗ್ ನ್ಯೂಸ್
01-09-23 05:11 pm Mangalore Correspondent ಕ್ರೈಂ
ಉಳ್ಳಾಲ, ಸೆ.1: ನರಿಂಗಾನ ಗ್ರಾಮದ ಮೊಂಟೆಪದವಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಕಿಟಕಿಯ ಸಲಾಕೆ ಮತ್ತು ಬಾಗಿಲು ಮುರಿದು ಕನ್ನ ಹಾಕಿದ ಕಳ್ಳರು 15 ಸಾವಿರ ನಗದು, ಎರಡು ಲ್ಯಾಪ್ ಟಾಪ್ ಮತ್ತು ತನಿಖೆಯ ಜಾಡು ತಪ್ಪಿಸಲು ಸಿಸಿಟಿವಿಯ ಮೂರು ಡಿವಿಆರ್ ಗಳನ್ನೇ ಕದ್ದೊಯ್ದಿದ್ದಾರೆ.
ಕಾಲೇಜು ಹಾಗೂ ಪ್ರೌಢಶಾಲೆ ಕಟ್ಟಡದ ಆವರಣದಲ್ಲಿ ಕಾಲೇಜು ಪ್ರಿನ್ಸಿಪಾಲ್, ಪ್ರೌಢಶಾಲೆ ವೈಸ್ ಪ್ರಿನ್ಸಿಪಾಲ್ ಕಚೇರಿ ಇದ್ದು ಎರಡೂ ಕೊಠಡಿಗಳಿಗೆ ಕಳ್ಳರು ನಿನ್ನೆ ರಾತ್ರಿ ಕನ್ನ ಹಾಕಿದ್ದಾರೆ. ಕಾಲೇಜಿನ ಪ್ರಿನ್ಸಿಪಾಲ್ ಕಚೇರಿಯ ಕಿಟಕಿಯ ಸಲಾಕೆ ಮುರಿಯಲು ಕಳ್ಳರು ವಿಫಲರಾಗಿದ್ದು ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ್ದಾರೆ. ಒಳಗಿದ್ದ ಮೂರು ಕಪಾಟನ್ನು ಮುರಿದು ದಾಖಲೆ ಪತ್ರಗಳನ್ನ ತಡಕಾಡಿ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕಪಾಟಿನಲ್ಲಿದ್ದ 15 ಸಾವಿರ ರೂಪಾಯಿ ನಗದು ಎಗರಿಸಿದ ಚಾಣಾಕ್ಷ ಕಳ್ಳರು ಮೂರು ಸ್ಮಾರ್ಟ್ ಫೋನ್ ಗಳನ್ನ ಅಲ್ಲೇ ಬಿಟ್ಟು ಒಂದು ಡಿವಿಆರ್ ಕದ್ದೊಯ್ದಿದ್ದಾರೆ. ಕಾಲೇಜು ಸ್ಟಾಫ್ ರೂಂಗೂ ಕಳ್ಳರು ನುಗ್ಗಿದ್ದು ಅಲ್ಲಿ ಏನೂ ಸಿಕ್ಕಿಲ್ಲ.
ಹೈಸ್ಕೂಲ್ ವೈಸ್ ಪ್ರಿನ್ಸಿಪಾಲ್ ಕೊಠಡಿಯ ಕಿಟಕಿಯ ಸಲಾಕೆ ಮುರಿದು ಒಳನುಗ್ಗಿದ ಕಳ್ಳರು ಎರಡು ಲ್ಯಾಪ್ ಟ್ಯಾಪ್ ,ಚಿಲ್ಲರೆ ನಗದು ಮತ್ತು ಎರಡು ಡಿವಿಆರ್ ಗಳನ್ನ ಕದ್ದೊಯ್ದಿದ್ದಾರೆ.


ಕಬಾಟುಗಳನ್ನ ತಡಕಾಡಿ ಅಮೂಲ್ಯ ದಾಖಲೆ ಪತ್ರಗಳನ್ನೆಲ್ಲ ನೆಲಕ್ಕೆಸೆದು ಹೋಗಿದ್ದಾರೆ. ಇಂದು ಬೆಳಗ್ಗೆ ಶಾಲೆಗೆ ಬಂದ ಶಿಕ್ಷಕರು, ವಿದ್ಯಾರ್ಥಿಗಳಿಗೆ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದ್ದು ತಕ್ಷಣವೇ ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ಶ್ವಾನದಳ, ಫೋರೆನ್ಸಿಕ್ ತಜ್ಞರು ಪರಿಶೀಲನೆ ನಡೆಸಿದ್ದು, ಚಾಲಾಕಿ ಕಳ್ಳರು ಡಿವಿಆರ್ ಹೊತ್ತೊಯ್ದಿರುವುದರಿಂದ ಸಮೀಪದ ಅಂಗಡಿಗಳಲ್ಲಿ ಸಿಸಿಟಿವಿ ಫೂಟೇಜ್ ಪರಿಶೀಲಿಸುತ್ತಿದ್ದಾರೆ.
Mangalore Robbers enter Naringana karnataka public school, flee with cash and laptop.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm