ಬ್ರೇಕಿಂಗ್ ನ್ಯೂಸ್
03-06-24 10:54 pm HK News Desk ಕ್ರೈಂ
ಚಿತ್ರದುರ್ಗ, ಜೂ 03: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ ಆರೋಪದಡಿ ಚಿತ್ರದುರ್ಗ ನಗರದ ಮಸೀದಿಯೊಂದರ ಮೌಲ್ವಿ ಅಬ್ದಲ್ ರೆಹಮಾನ್ ಹಾಗೂ ಅಪ್ರಾಪ್ತೆಯ ಸಹೋದರನನ್ನು ಭಾನುವಾರ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತ ಬಾಲಕಿಗೆ ಮೇ 30 ರಂದು ಎಂಟು ಗಂಟೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ರಕ್ತಸ್ರಾವದ ಹಿನ್ನೆಲೆಯಲ್ಲಿ ವೈದ್ಯರ ತಪಾಸಣೆ ಮಾಡುವ ವೇಳೆ ಅವಧಿ ಪೂರ್ವದಲ್ಲೇ ಭ್ರೂಣ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.
ತಾಯಿ ಮಗಳನ್ನು ಪ್ರಕರಣದ ಕುರಿತು ವಿಚಾರಿಸಿದಾಗ ತನಗೆ ಕುರಾನ್ ಓದಿಸುತ್ತಿದ್ದ ಮೌಲ್ವಿ ಅಬ್ದುಲ್ ರೆಹಮಾನ್ ಹಾಗೂ ಸಹೋದರನಿಂದಲೇ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ತಿಳಿಸಿದ್ದಾರೆ. ಆತಂಕಿತರಾದ ತಾಯಿ ಮೇ 31 ರಂದೇ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಪ್ರಾಪ್ತ ಬಾಲಕಿ ತಮ್ಮ ಏರಿಯಾದ ಮಸೀದಿಗೆ ಕುರಾನ್ ಓದಲು ಹೋಗುತ್ತಿದ್ದರು. ಒಂದೂವರೆ ವರ್ಷದ ಹಿಂದೆಯೇ ಬಾಲಕಿಯನ್ನು ನೋಡಿದ ಮೌಲ್ವಿ ‘ನಿಮ್ಮ ಮಗಳಿಗೆ ಗಾಳಿ ಸೋಕಿದೆ. ಪರಿಹಾರಕ್ಕೆ ನಿಮ್ಮ ಮನೆಯಲ್ಲೇ ವಿಶೇಷ ಪೂಜೆ ಮಾಡಿಸಿಬೇಕು’ ಎಂದು ತಾಯಿಗೆ ಹೇಳಿದ್ದಾನೆ. ನಂತರ ವಾರಕ್ಕೊಮ್ಮೆ ಮನೆಗೆ ತೆರಳಿ ಪ್ರಾರ್ಥನೆ ನೆಪದಲ್ಲಿ ಬಾಲಕಿಯ ಮೈ, ಕೈ ಮುಟ್ಟಿ ಅಸಭ್ಯವಾಗಿ ನಡೆದು ಕೊಂಡಿದ್ದಾನೆ.
ಕಳೆದ ಆರೇಳು ತಿಂಗಳ ಹಿಂದೆ ಪೂಜೆಗೆಂದು ಮನೆಗೆ ಬಂದಾಗ ತಾಯಿ ಯನ್ನು ಹೊರಗೆ ಕಳುಹಿಸಿ ಬಾಲಕಿ ಹಾಗೂ ಆಕೆಯ ಸಹೋದರ ನನ್ನು ಮನೆಯೊಳಗೆ ಕರೆದೊಯ್ದಿದ್ದಾನೆ. ನಂತರ ನಿಮ್ಮ ಸಹೋದರಿಗೆ ಹಿಡಿದಿರುವ ದೆವ್ವಕ್ಕೆ ದೈಹಿಕ ಸುಖ ನೀಡಿದರೆ ಶಾಂತಿ ಯಾಗಲಿದೆ ಎಂದು ನಂಬಿಸಿ, ಸಹೋದರನಿಂದಲೇ ಅತ್ಯಾಚಾರ ನಡೆಸಿದ್ದಾನೆ. ಅದೇ ಸಮಯದಲ್ಲಿ ಈ ಕೃತ್ಯದ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. ನಂತರ ಇದನ್ನೇ ನೆಪವಾಗಿಟ್ಟುಕೊಂಡು ಮೌಲ್ವಿ ಅತ್ಯಾಚಾರ ನಡೆಸಿದ್ದಾನೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ, ಪೂಜೆ ಫಲಿಸುವುದಿಲ್ಲ ಎಂದು ಹೇಳಿ ಬೆದರಿಸಿದ್ದಾನೆ.
ಒಂದು ತಿಂಗಳ ಹಿಂದೆ ಬಾಲಕಿ ತನ್ನ ತಾಯಿ ಬಳಿ ಪೀರಿಯೆಡ್ಸ್ ಆಗಿಲ್ಲ ಎಂದು ಆತಂಕ ತೋಡಿಕೊಂಡಾಗ ಸ್ಥಳೀಯ ಖಾಸಗಿ ವೈದ್ಯರೊಬ್ಬರ ಬಳಿ ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ರಕ್ತ ಕಡಿಮೆ ಇದೆ ಎಂದು ಟಾನಿಕ್ ನೀಡಿದ್ದಾರೆ. ಕಳೆದ ತಿಂಗಳ ಮೇ ೩೦ ರಂದು ರಾತ್ರಿ ತೀವ್ರ ಸ್ವರೂಪದ ಹೊಟ್ಟೆ ನೋವು ಕಾಣಿಸಿಕೊಂಡಾಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆಗ ಪ್ರಕರಣದ ಹಿನ್ನೆಲೆ ಬಯಲಾಗಿದ್ದು, ಸಂತ್ರಸ್ತ ಬಾಲಕಿಯ ತಾಯಿ ಮೌಲ್ವಿ ಹಾಗೂ ಪುತ್ರನ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
Karnataka Police arrested a cleric in Chitradurga on Monday, on charges of repeatedly raping a minor girl on the pretext of getting her rid of being possessed by evil spirits. The priest also got the victim's brother to sexually assault her as a cure.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 07:08 pm
Mangalore Correspondent
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm