ಬ್ರೇಕಿಂಗ್ ನ್ಯೂಸ್
12-06-24 04:50 pm Mangalore Correspondent ಕ್ರೈಂ
ಮಂಗಳೂರು, ಜೂನ್.12: ಮುಂಬೈ ಪೊಲೀಸರ ಸೋಗಿನಲ್ಲಿ ಕರೆ ಮಾಡಿ, ಹಣ ಕೀಳುವುದನ್ನು ಕೇಳಿದ್ದೇವೆ. ಈಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿರುವ ಸೈಬರ್ ಕಳ್ಳರು ಮಂಗಳೂರಿನಲ್ಲಿ ಶಾಲಾ ಮಕ್ಕಳ ಪೋಷಕರಿಗೆ ಕರೆ ಮಾಡಿ, ಬೆದರಿಕೆ ಒಡ್ಡಿ ಹಣ ಕೀಳಲು ಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ. ಜೂನ್ 11 ಮತ್ತು 12ರಂದು ಮಂಗಳೂರಿನಲ್ಲಿ ಹಲವಾರು ಪೋಷಕರಿಗೆ ಪೊಲೀಸರ ಸೋಗಿನಲ್ಲಿ ಕರೆ ಬಂದಿದ್ದು, ಮೋಸಕ್ಕೆ ಯತ್ನಿಸಿದ್ದಾರೆ.
ವಿದೇಶಿ ನಂಬರ್ ಗಳಿಂದ ವಾಟ್ಸಪ್ ಕರೆ ಬರುತ್ತಿದ್ದು, ಹಿಂದಿಯಲ್ಲಿ ಮಾತನಾಡಿ ತಾವು ಪೊಲೀಸರೆಂದು ಪರಿಚಯ ಹೇಳುತ್ತಿದ್ದು, ನಿಮ್ಮ ಮಕ್ಕಳು ಅರೆಸ್ಟ್ ಆಗಿದ್ದಾರೆ, ಬಿಡುಗಡೆ ಮಾಡಲು ಇಂತಿಷ್ಟು ಹಣ ಕೊಡಬೇಕೆಂದು ಕೇಳತೊಡಗಿದ್ದಾರೆ. ಶಾಲೆಗೆ ಹೋದ ಮಕ್ಕಳು ಅರೆಸ್ಟ್ ಆಗಿದ್ದಾರೆ ಎಂದು ತಿಳಿಯುತ್ತಲೇ ಕೆಲವು ಪೋಷಕರು ಗಾಬರಿ ಬಿದ್ದಿದ್ದಾರೆ. ಕೂಡಲೇ ಶಾಲೆಗೆ ಕರೆ ಮಾಡಿದಾಗ, ತಮ್ಮ ಮಕ್ಕಳು ಸೇಫ್ ಆಗಿರುವುದು ತಿಳಿದುಬಂದಿದೆ. ಶಾಲೆಯ ಅವಧಿಯಲ್ಲೇ ಈ ರೀತಿಯ ಕರೆಗಳು ಬರುತ್ತಿದ್ದು, ಇದರಿಂದ ಬಹಳಷ್ಟು ಪೋಷಕರು ಭಯಕ್ಕೆ ಬಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಂಗಳೂರು ಪೊಲೀಸರು ನಗರದ ಸೈಬರ್ ಕ್ರೈಮ್ ಠಾಣೆಯಲ್ಲಿ ಕೇಸು ದಾಖಲು ಮಾಡಿದ್ದು, ತನಿಖೆ ಆರಂಭಿಸಿದ್ದಾರೆ. ಕರೆ ಬಂದಿದ್ದ ಸಂಖ್ಯೆಗಳನ್ನು ಪರಿಶೀಲನೆ ನಡೆಸಿದಾಗ, ಅವು ಪೋಲಂಡ್ ಮತ್ತು ಪಾಕಿಸ್ತಾನದಿಂದ ಬಂದಿದ್ದಾಗಿ ಪತ್ತೆ ಮಾಡಿದ್ದಾರೆ. ಜೂನ್ 10ರಂದು ಮಧ್ಯಾಹ್ನ ಶಿವಭಾಗ್ ಬಳಿಯ ಪೋಷಕರೊಬ್ಬರಿಗೆ ಕರೆ ಬಂದಿದ್ದು, ಅವರು ಗಾಬರಿಗೆ ಒಳಗಾಗಿದ್ದರು. ತಮ್ಮ ಕಾರಿನಲ್ಲಿ ಪೆಟ್ರೋಲ್ ಇಲ್ಲ, ಕೂಡಲೇ ಪೆಟ್ರೋಲ್ ಹಾಕುವಂತೆ ಶಿವಭಾಗ್ ಪೆಟ್ರೋಲ್ ಪಂಪ್ ಗೆ ಬಂದಿದ್ದರು. ಬಂಕ್ ಮ್ಯಾನೇಜರ್ ಮಹೇಶ್ ಅವರಲ್ಲಿ ಕರೆ ಬಂದಿರುವುದನ್ನು ಹೇಳಿ, ತನ್ನ ಮಗಳನ್ನು ಯಾರೋ ಅಪಹರಿಸಿದ್ದಾರಂತೆ, ಪೊಲೀಸರಿಂದ ಕರೆ ಬಂದಿದೆ ಎಂದು ಅಳುತ್ತಾ ಶಾಲೆಯತ್ತ ತೆರಳಿದ್ದರು. ಶಾಲೆಗೆ ತೆರಳಿ ನೋಡಿದರೆ, ಮಗಳು ಕ್ಲಾಸಿನಲ್ಲೇ ಇದ್ದಳು.
ಭಯ ಬೀಳದಿರಿ- ಕಮಿಷನರ್
ಈ ರೀತಿಯ ಕರೆಗಳು ಎರಡು ದಿನಗಳಲ್ಲಿ ಹಲವಾರು ಪೋಷಕರಿಗೆ ಬಂದಿದ್ದು, ಪೊಲೀಸರಿಗೂ ಮಾಹಿತಿ ಹೋಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಇಂತಹ ಕರೆಗಳ ಬಗ್ಗೆ ಪೋಷಕರು ಭಯಕ್ಕೆ ಒಳಗಾಗಬೇಡಿ. ಅಪರಿಚಿತರು ವಾಟ್ಸಪ್ ಕರೆ ಮಾಡಿದರೆ, ಅದನ್ನು ಸ್ವೀಕರಿಸಬೇಡಿ. ಅಂತಹ ಕರೆಗಳು ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಶಾಲೆಯಲ್ಲಿ ಶಿಕ್ಷಕರು, ಸಿಬಂದಿಯೂ ಈ ಬಗ್ಗೆ ಮಕ್ಕಳ ಪೋಷಕರಿಗೆ ಜಾಗೃತಿ ಮೂಡಿಸುವಂತೆ ಕೇಳಿಕೊಂಡಿದ್ದಾರೆ.
Mangalore school Parents targeted by fake calls by online fraudters, threaten of kidnap. On Tuesday afternoon, several parents received alarming calls claiming their children were being arrested for crimes such as gang rape or kidnapping. The callers, speaking in Hindi, demanded Rs 5 lac to release the students or to clear their names.
22-06-24 04:43 pm
Bangalore Correspondent
Actor Darshan, Crime News Kannada; ಕೊಲೆ ಪ್ರಕರ...
22-06-24 03:27 pm
Murder case, Actor Darshan, Pavithra Gowda Ja...
20-06-24 10:44 pm
Alok Kumar Adgp, Headlight LED: ನಿಮ್ಮ ವಾಹನಗಳಿ...
20-06-24 03:14 pm
Murder case, Darshan in police station life:...
19-06-24 05:34 pm
22-06-24 10:38 pm
HK News Desk
Sonakshi Sinha, Bollywood: ಶತ್ರುಘ್ನ ಸಿನ್ಹಾ ಏಕ...
22-06-24 08:59 pm
ಹಿಜಾಬ್ ಪದ್ಧತಿ ನಿಷೇಧಿಸಿದ ತಜಕಿಸ್ತಾನ್ ; 98 ಶೇಕಡಾ...
22-06-24 05:37 pm
ಕಟ್ಟಡದ ಮೇಲಿಂದ ಭಯಾನಕ ಕಿತಾಪತಿ ; ರೀಲ್ಸ್ ಹುಚ್ಚುಗ...
21-06-24 05:45 pm
ಯುಜಿಸಿ ನೆಟ್ ಅಕ್ರಮದ ಬಗ್ಗೆ ಸಿಬಿಐ ಎಫ್ಐಆರ್ ; ನೀಟ್...
21-06-24 05:37 pm
22-06-24 11:05 pm
Mangalore Correspondent
Yoga day, Mangalore MP Brijesh Chowta, Sasihi...
21-06-24 11:08 pm
Mangalore Kota srinivas Poojary, Nalin Kateel...
21-06-24 10:20 pm
Mangalore rain, Red Alert: ಕರಾವಳಿ ಜಿಲ್ಲೆಗಳಿಗೆ...
20-06-24 11:01 pm
Mangalore University, Award 2024: ಮಂಗಳೂರು ವಿವ...
20-06-24 10:58 pm
22-06-24 11:24 pm
HK News Desk
MLC Suraj Revanna, sexual assault case; MLC ಸ...
22-06-24 10:56 pm
Mangalore crime, Dacoity, Ullayabettu, padnab...
22-06-24 11:15 am
Mangalore dacoity, crime, PWD, Ullayabettu: ಉ...
21-06-24 11:21 pm
ಅಮೆರಿಕದ ಕಂಪನಿ ಹೆಸರಲ್ಲಿ ಷೇರು ಹೂಡಿಕೆ ; ವಾಟ್ಸಪ್...
21-06-24 09:40 pm