ಬ್ರೇಕಿಂಗ್ ನ್ಯೂಸ್
26-06-24 11:10 pm Mangalore Correspondent ಕ್ರೈಂ
ಮಂಗಳೂರು, ಜೂ.26: ಉಳ್ಳಾಲ ತಾಲ್ಲೂಕು ಪಾವೂರು ಉಳಿಯದ ಕುದ್ರು ಎಂಬಲ್ಲಿ ಜೂನ್ 21 ರಂದು ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಮಾಧ್ಯಮದಲ್ಲಿ ಬಿತ್ತರವಾದ ಸುದ್ದಿಯ ಹಿನ್ನೆಲೆಯಲ್ಲಿ ಕಚೇರಿಯ ಹಿರಿಯ ಭೂ ವಿಜ್ಞಾನಿಗಳನ್ನು ಒಳಗೊಂಡ ತಾಂತ್ರಿಕ ಅಧಿಕಾರಿಗಳ ತಂಡವು ಜೂನ್ 24 ರಂದು ಸದರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.
ಈ ಕುದ್ರುವಿನ ಪೂರ್ವಕ್ಕೆ ಸಾವಯವ ಮಣ್ಣು ಮಿಶ್ರಿತ ಮರಳು ಖಾಲಿಯಾಗಿದ್ದು, ಉಳಿದಂತೆ ಕುದ್ರು ಅಖಂಡವಾಗಿರುವುದು ಕಂಡುಬಂದಿದ್ದು, ಕುದ್ರುವಿನ ಪೂರ್ವಕ್ಕೆ ಇರುವ ಮಣ್ಣು ಕುಸಿಯಲು ಕಾರಣ ಗಿಡ ಮರಗಳ ಅಭಾವ. ಸದರಿ ಪ್ರದೇಶದಲ್ಲಿ ಅರುಗನ್ನು ಹಿಡಿದಿಟ್ಟುಕೊಳ್ಳಲು ಪೂರಕವಾದ ಬೇರು ಬಿಡುವ ಮತ್ತು ಅರುಗನ್ನು ಸಂರಕ್ಷಿಸುವ ಕಾಂಡ್ಲಾ ಗಿಡಗಳು ಇಲ್ಲದಿರುವುದು. ಬಿರುಸಾದ ನೀರಿನ ಹರಿವಿನಿಂದಾಗಿ ಮಣ್ಣು ಕುಸಿದು ಹೋಗಿರುತ್ತದೆ ಮತ್ತು ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಯಾವುದೇ ಅನಧಿಕೃತ ಸಾಮಾನ್ಯ ಮರಳು ಗಣಿಗಾರಿಕೆ ಚಟುವಟಿಕೆ ನಡೆಯುತ್ತಿರುವುದು ಕಂಡುಬಂದಿರುವುದಿಲ್ಲ.
ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾದ ಮರಳು ತೆಗೆಯುವ ದೃಶ್ಯಗಳು ಹಳೆಯದಾಗಿದ್ದು ಮತ್ತು ಸದರಿ ದ್ವೀಪದ ಬಳಿ ಈಚೆಗೆ ಯಾವುದೇ ಮರಳು ತೆಗೆದಿಲ್ಲದೇ ಇರುವುದು ಪ್ರದೇಶದಲ್ಲಿರುವ ಒಣಗಿದ ಮತ್ತು ಸರಿದಿರುವ ಸಾವಯವ ಮಣ್ಣು ಮಿಶ್ರಿತ ಮಣ್ಣಿನ ಮೇಲೆ ಬೆಳೆದಿರುವ ಮಜ್ಜಿಗೆ ಹುಲ್ಲಿನಿಂದ ಖಾತ್ರಿಯಾಗಿರುತ್ತದೆ. ಕಂದಾಯ ಇಲಾಖೆಯ ದಾಖಲೆಯಂತೆ ಸದರಿ ಕುದ್ರುವಿನ ಒಟ್ಟು ವಿಸ್ತೀರ್ಣವು 30.49 ಎಕರೆ ಆಗಿದ್ದು, ಭೌತಿಕವಾಗಿ ಪರಿಶೀಲಿಸಿದಾಗ ಸದರಿ ಕುದ್ರುವಿನ ವಿಸ್ತೀರ್ಣವು 98.02 ಎಕರೆ ಇದ್ದು, ಕುದ್ರುವಿನ ಯಾವುದೇ ಭಾಗವು ನದಿಯಲ್ಲಿ ಮುಳುಗಡೆಗೊಂಡಿರುವುದಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
The Mines and Geology Department on Wednesday denied charges of illegal sand extraction in and around Pavoor-Uliya Kudru in Netravathi river and the consequent degeneration of the river island.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm