ಬ್ರೇಕಿಂಗ್ ನ್ಯೂಸ್
02-05-23 08:10 pm Source: news18 ಡಿಜಿಟಲ್ ಟೆಕ್
ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಂದಿದೆ. ಈ ಸ್ಕೂಟರ್ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಹಾಗಾದರೆ ನೀವು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಆಲೋಚನೆಯಲ್ಲಿದ್ದರೆ ನೀವು ಈ ಮಾದರಿಯನ್ನು ನೋಡಬಹುದು. ಯುಲು ಕಂಪನಿ ವೈನ್ ಹೆಸರಿನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಹೊರತಂದಿದೆ. ಇದರ ಬೆಲೆ ರೂ. 55,555 ರಿಂದ ಆರಂಭವಾಗುತ್ತದೆ. ಇದು ಎಕ್ಸ್ ಶೋ ರೂಂ ಬೆಲೆ. ಈ ಬೆಲೆ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ.
ಈ ಸ್ಕೂಟರ್ ಅನ್ನು ಕೇವಲ 999 ಕ್ಕೆ ಬುಕ್ ಮಾಡಬಹುದು. ಇದು ಮರುಪಾವತಿಸಬಹುದಾದ ಮೊತ್ತವಾಗಿದೆ. ನೀವು ಒಮ್ಮೆ ಬುಕ್ ಮಾಡಿ ಇದನ್ನು ಖರೀದಿಸಲು ಸಾಧ್ಯವಾಗಿಲ್ಲಾ ಎಂದಾದರೆ ಈ ಹಣ ವಾಪಸ್ ನೀಡಲಾಗುತ್ತದೆ. ಆರಂಭದಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ಗಳು ಬೆಂಗಳೂರಿನಲ್ಲಿ ಲಭ್ಯವಿರುತ್ತವೆ. ನಂತರ ಈ ಸ್ಕೂಟರ್ಗಳು ಇತರ ನಗರಗಳಲ್ಲಿಯೂ ಲಭ್ಯವಿರುತ್ತವೆ. ಈ ಎಲೆಕ್ಟ್ರಿಕ್ ಸ್ಕೂಟರ್ ಮುಖ್ಯವಾಗಿ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇವು ಕೆಂಪು ಮತ್ತು ಬಿಳಿ.


ಅಲ್ಲದೆ ಇದನ್ನು ಓಡಿಸಲು ಚಾಲನಾ ಪರವಾನಗಿ ಮತ್ತು ನೋಂದಣಿ ಅಗತ್ಯವಿಲ್ಲ. 16 ವರ್ಷ ಮೇಲ್ಪಟ್ಟ ಯಾರಾದರೂ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಓಡಿಸಬಹುದು. ಅಲ್ಲದೆ ಬ್ಯಾಟರಿ ವೆಚ್ಚವೂ ಇರುವುದಿಲ್ಲ. ಏಕೆಂದರೆ ಬ್ಯಾಟರಿ ಸ್ವಾಪ್ ಸೌಲಭ್ಯವೂ ಲಭ್ಯವಿದೆ.ಅಂದರೆ ನೀವು ಯುಮಾ ಎನರ್ಜಿ ಸ್ಟೇಷನ್ಗಳಿಗೆ ಹೋಗಿ ನಿಮ್ಮ ಬ್ಯಾಟರಿಯನ್ನು ಅಲ್ಲಿಯೇ ಇರಿಸಬಹುದು.. ಅಲ್ಲಿ ಪೂರ್ಣ ಬ್ಯಾಟರಿಯನ್ನು ತೆಗೆದುಕೊಂಡು ನಿಮ್ಮ ಸ್ಕೂಟರ್ಗೆ ಹಾಕಬಹುದು. ಸುಲಭವಾಗಿ ಓಡಿಸಬಹುದಾದ ವಾಹನ ಇದಾಗಿದೆ.


ಈ ಸ್ಕೂಟರ್ ಖರೀದಿಯ ಮೇಲೆ ಆಕರ್ಷಕ ಹಣಕಾಸು ಸೌಲಭ್ಯ ನಿಮಗೆ ಲಭಿಸುತ್ತದೆ. ತಿಂಗಳಿಗೆ EMI ರೂ. 1999 ರಿಂದ ಪ್ರಾರಂಭವಾಗುತ್ತದೆ. ನೀವು ಕೇವಲ ರೂ.9999 ಡೌನ್ ಪಾವತಿ ಮಾಡಿ ಇದನ್ನು ಖರೀದಿಸಬಹುದು. ಚಾಲಕ ಮತ್ತು ಸವಾರರ ವಿಮೆ ಕೂಡ ಲಭ್ಯವಿದೆ. ಇವುಗಳಲ್ಲಿ ಮೂರು ಯೋಜನೆಗಳು ಲಭ್ಯವಿವೆ. ಅವುಗಳೆಂದರೆ ಫ್ಲೆಕ್ಸಿ ಪೇ, ವ್ಯಾಲ್ಯೂ, ಸೂಪರ್ ಸೇವರ್. ಫ್ಲೆಕ್ಸಿ ಪೇ ಪ್ಲಾನ್ ಖರೀದಿಸಿದರೆ ತಿಂಗಳಿಗೆ ರೂ. 499 ಸಾಕು. ಪ್ರತಿ ಕಿಲೋಮೀಟರ್ಗೆ ಒಂದು ರೂಪಾಯಿ ವೆಚ್ಚವಾಗುತ್ತದೆ. ಅದೇ ಮೌಲ್ಯದ ಯೋಜನೆ ತಿಂಗಳಿಗೆ ರೂ. 699 ಪಾವತಿಸಬೇಕು. 300 ಕಿಲೋಮೀಟರ್ ವರೆಗೆ ಪ್ರಯಾಣಿಸಬಹುದು. ಸೂಪರ್ ಸೇವರ್ ಯೋಜನೆ ರೂ. 899 ಸಾಕು. 600 ಕಿಲೋಮೀಟರ್ ಪ್ರಯಾಣಿಸಬಹುದು.
yulu wynn inr price and emi details
10-12-25 05:37 pm
Bangalore Correspondent
ಅಧಿಕಾರ ಹಂಚಿಕೆ ಬಗ್ಗೆ ಗೊಂದಲ ; ಯಾರೂ ಆ ಬಗ್ಗೆ ಮಾತನ...
10-12-25 12:58 pm
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ; ಹೊಟೇಲುಗಳ ಸಂಘ...
09-12-25 08:56 pm
ಶಾಲಾ ಬಸ್ಸಿನಡಿಗೆ ಬಿದ್ದು ಎಂಟು ವರ್ಷದ ಬಾಲಕಿ ದುರಂತ...
09-12-25 08:53 pm
ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಸುಪ್ರೀಂ ಕೋರ್ಟಿಗೆ ಅ...
08-12-25 10:39 pm
10-12-25 01:17 pm
HK News Desk
ಮಾಜಿ ಸಿಜೆಐ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿ...
09-12-25 11:03 pm
Goa Fire Accident, 23 dead: ಗೋವಾದ ನೈಟ್ಕ್ಲಬ್...
07-12-25 02:04 pm
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
10-12-25 06:01 pm
Mangaluru Staffer
Mangalore Accident, Gowjee Events owner Death...
10-12-25 04:00 pm
Mangalore, Builder Encroaches Bejai Canal: ಬಿ...
09-12-25 07:30 pm
ರಿಷಬ್ ಶೆಟ್ಟಿ ತೊಡೆಯ ಮೇಲೆ ಮಲಗಿದ ದೈವ ! ಹರಕೆ ನೇಮದ...
09-12-25 05:21 pm
ಎರಡೂವರೆ ಗಂಟೆ ಕಾದರೂ ಸಿಗದ ಆಂಬುಲೆನ್ಸ್ ; ಗೂಡ್ಸ್ ಟ...
09-12-25 11:55 am
09-12-25 04:33 pm
Mangalore Correspondent
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am
ಗಡಿಭಾಗ ತಲಪಾಡಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ; ಎರ...
08-12-25 09:29 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm
Ganesh Gowda, Chikkamagaluru, Congress, Murde...
06-12-25 02:43 pm