ಬ್ರೇಕಿಂಗ್ ನ್ಯೂಸ್
26-12-20 05:45 pm Source: GIZBOT ಡಿಜಿಟಲ್ ಟೆಕ್
ನೀವು ಜಿಯೋ ಕಾಲರ್ ಟ್ಯೂನ್ ಸೆಟ್ ಮಾಡ ಬಯಸಿದರೇ, ಕಾಲರ್ ಟ್ಯೂನ್ ಸೆಟ್ ಮಾಡಲು ನಾಲ್ಕು ಮಾರ್ಗಗಳಿವೆ. ರಿಲಯನ್ಸ್ ಜಿಯೋ ಬಳಕೆದಾರರು ಮೈಜಿಯೊ ಅಪ್ಲಿಕೇಶನ್, IVR ಅಥವಾ SMS ಬಳಸಿ ಕಾಲರ್ ಟ್ಯೂನ್ ಹೊಂದಿಸಬಹುದು. ಹಾಗೆಯೇ ಮತ್ತೊಬ್ಬ ಜಿಯೋ ಗ್ರಾಹಕರಿಂದ ಜಿಯೋ ಟ್ಯೂನ್ ಅನ್ನು ನಕಲಿಸಲು ಸಹ ಟೆಲಿಕಾಂ ಅನುಮತಿಸುತ್ತದೆ. ಒಂದು ವೇಳೆ ನೀವು ಮೈಜಿಯೊ ಅಪ್ಲಿಕೇಶನ್ನಲ್ಲಿ ನಿರ್ದಿಷ್ಟ ಹಾಡನ್ನು ಸರ್ಚ್ ಮಾಡಲು ಸಾಧ್ಯವಾಗದೆ ಇದ್ದಲ್ಲಿ, ನಂತರ ನೀವು ಜಿಯೋಸಾವನ್ ಅಪ್ಲಿಕೇಶನ್ ಬಳಸಿ ಕಾಲರ್ ಟ್ಯೂನ್ ಹೊಂದಿಸಲು ಪ್ರಯತ್ನಿಸಬಹುದು. ಹಾಗೆಯೇ ಕಾಲರ್ ಟ್ಯೂನ್ ಸೇವೆ ನಿಲ್ಲಿಸಲು ಅವಕಾಶ ನೀಡಲಾಗಿದೆ.
ಹೌದು, ರಿಲಾಯನ್ಸ್ ಜಿಯೋ ಕಂಪನಿಯು ತನ್ನ ಜಿಯೋ ಟ್ಯೂನ್ಸ್ ಲೈಬ್ರರಿಯಲ್ಲಿ 4 ಲಕ್ಷ ಜೊತೆಗೆ ಹಾಡುಗಳ ಸಂಗ್ರಹವನ್ನು ಹೊಂದಿದೆ. ಇದರಿಂದ ನಿಮ್ಮ ಜಿಯೋ ಟ್ಯೂನ್ ಅನ್ನು ನೀವು ಆಯ್ಕೆ ಮಾಡಬಹುದು. ಹಾಗೆಯೇ ಹೆಲೋ ಟ್ಯೂನ್ ಸೆಟ್ ಮಾಡಿದ ನಂತರ ಈ ಸೇವೆ ಬೇಡವಾದಲ್ಲಿ ತೆಗೆದು ಹಾಕಬಹುದು/ ಸೇವೆಯನ್ನು ನಿಲ್ಲಿಸಬಹುದಾಗಿದೆ. ಹಾಗಾದರೇ ಜಿಯೋದ ಹೆಲೋ/ ಕಾಲರ್ ಟ್ಯೂನ್ ಅನ್ನು ಹೇಗೆ ನಿಲ್ಲಿಸುವುದು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಜಿಯೋ ಕಾಲರ್ ಟ್ಯೂನ್ ಸೇವೆಯನ್ನು ಸ್ಥಗಿತ ಮಾಡಲು ಮೂರು ಆಯ್ಕೆಗಳು ಇವೆ. ಅವುಗಳು ಕ್ರಮವಾಗಿ ಎಸ್ಎಮ್ಎಸ್ ಮೂಲಕ, ಮೈ ಜಿಯೋ ಆಪ್ ಮೂಲಕ ಹಾಗೂ IVR ಮೂಲಕ. ಬಳಕೆದಾರರು ಈ ಮೂರು ಆಯ್ಕೆಗಳಲ್ಲಿ ಒಂದು ಅನುಕೂಲಕರ ವಿಧಾನದ ಮೂಲಕ ಕಾಲರ್ ಟ್ಯೂನ್ ಸೇವೆ ನಿಲ್ಲಿಸಬಹುದಾಗಿದೆ.

SMS ವಿಧಾನದ ಮೂಲಕ
*ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಮೆಸೇಜ್ ಆಪ್ ತೆರೆಯಿರಿ. *ಮೆಸೇಜ್ನಲ್ಲಿ ಸ್ಟಾಪ್ ಎಂದು ಟೈಪ್ ಮಾಡಿ 56789 ಗೆ ಕಳುಹಿಸಿ.
*ನಿಷ್ಕ್ರಿಯಗೊಳಿಸುವಿಕೆಯನ್ನು ದೃಢೀಕರಿಸಲು 1 ಎಂದು ಪ್ರತ್ಯುತ್ತರಿಸಿ.
*ಇದಾದ ನಂತರ ಜಿಯೋ ಟ್ಯೂನ್ಸ್ ಸೇವೆ ಸ್ಥಗಿತವಾಗುತ್ತದೆ. ಮತ್ತು ನಿಷ್ಕ್ರಿಯದ ಬಗ್ಗೆ ದೃಢೀಕೃತ SMSನ್ನು ಬಳಕೆದಾರರು ಸ್ವೀಕರಿಸುತ್ತಾರೆ.

ಮೈ ಜಿಯೋ ಆಪ್ ವಿಧಾನದ ಮೂಲಕ
*ಮೈ ಜಿಯೋ ಆಪ್ ತೆರೆಯಿರಿ.
*ಮೆನುವಿನಲ್ಲಿ 'ಜಿಯೋ ಟ್ಯೂನ್ಸ್' ಆಯ್ಕೆಯನ್ನು ಕ್ಲಿಕ್ ಮಾಡಿ.
*'ಮೈ ಸಬ್ಸ್ಕ್ರೈಬರ್ ಪುಟ'ಕ್ಕೆ ಹೋಗಿ ಮತ್ತು ಕೆಳಭಾಗದಲ್ಲಿರುವ 'ಜಿಯೋ ಟ್ಯೂನ್ ನಿಷ್ಕ್ರಿಯಗೊಳಿಸಿ' ಆಯ್ಕೆ ಟ್ಯಾಪ್ ಮಾಡಿ. *ದೃಢೀಕರಣ ಪುಟದಲ್ಲಿ 'ಹೌದು' ಎಂಬುದನ್ನು ಟ್ಯಾಪ್ ಮಾಡಿ

IVR ವಿಧಾನದ ಮೂಲಕ
*ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಕಾಲ್ ಡಯಲರ್ ಆಪ್ ತೆರೆಯಿರಿ
*ಜಿಯೋ ಸಂಖ್ಯೆಯಿಂದ 155223 ಗೆ ಕಾಲ್ ಮಾಡಿ
*ಇಂಗ್ಲಿಷ್ಗಾಗಿ 1 ಮತ್ತು ಹಿಂದಿಗಾಗಿ 2 ಒತ್ತುವ ಮೂಲಕ ಆದ್ಯತೆಯ ಭಾಷೆ ಆರಿಸಿ.
*ಈಗ, ಐವಿಆರ್ ನಿಮ್ಮ ಜಿಯೋ ಸಂಖ್ಯೆಯಲ್ಲಿರುವ ಎಲ್ಲಾ ಸಕ್ರಿಯ ಮೌಲ್ಯವರ್ಧಿತ ಸೇವೆಗಳನ್ನು ಕೇಳುತ್ತದೆ
This News Article is a Copy of GIZBOT
10-12-25 05:37 pm
Bangalore Correspondent
ಅಧಿಕಾರ ಹಂಚಿಕೆ ಬಗ್ಗೆ ಗೊಂದಲ ; ಯಾರೂ ಆ ಬಗ್ಗೆ ಮಾತನ...
10-12-25 12:58 pm
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ; ಹೊಟೇಲುಗಳ ಸಂಘ...
09-12-25 08:56 pm
ಶಾಲಾ ಬಸ್ಸಿನಡಿಗೆ ಬಿದ್ದು ಎಂಟು ವರ್ಷದ ಬಾಲಕಿ ದುರಂತ...
09-12-25 08:53 pm
ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಸುಪ್ರೀಂ ಕೋರ್ಟಿಗೆ ಅ...
08-12-25 10:39 pm
10-12-25 01:17 pm
HK News Desk
ಮಾಜಿ ಸಿಜೆಐ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿ...
09-12-25 11:03 pm
Goa Fire Accident, 23 dead: ಗೋವಾದ ನೈಟ್ಕ್ಲಬ್...
07-12-25 02:04 pm
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
10-12-25 06:01 pm
Mangaluru Staffer
Mangalore Accident, Gowjee Events owner Death...
10-12-25 04:00 pm
Mangalore, Builder Encroaches Bejai Canal: ಬಿ...
09-12-25 07:30 pm
ರಿಷಬ್ ಶೆಟ್ಟಿ ತೊಡೆಯ ಮೇಲೆ ಮಲಗಿದ ದೈವ ! ಹರಕೆ ನೇಮದ...
09-12-25 05:21 pm
ಎರಡೂವರೆ ಗಂಟೆ ಕಾದರೂ ಸಿಗದ ಆಂಬುಲೆನ್ಸ್ ; ಗೂಡ್ಸ್ ಟ...
09-12-25 11:55 am
09-12-25 04:33 pm
Mangalore Correspondent
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am
ಗಡಿಭಾಗ ತಲಪಾಡಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ; ಎರ...
08-12-25 09:29 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm
Ganesh Gowda, Chikkamagaluru, Congress, Murde...
06-12-25 02:43 pm