ಬ್ರೇಕಿಂಗ್ ನ್ಯೂಸ್
14-02-21 04:06 pm Source: GIZBOT Manthesh ಡಿಜಿಟಲ್ ಟೆಕ್
ಫೇಸ್ಬುಕ್ ಮಾಲೀಕತ್ವದ ಜನಪ್ರಿಯ ಮೆಸೆಜಿಂಗ್ ಆಪ್ ವಾಟ್ಸಾಪ್ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಆದರೆ ಇತ್ತೀಚಿಗೆ ವಾಟ್ಸಾಪ್ ಹೊಸ ನಿಯಮಗಳ ಜಾರಿಯಿಂದ ತನ್ನ ಜನಪ್ರಿಯತೆಗೆ ಪೆಟ್ಟು ಮಾಡಿಕೊಂಡಿದೆ. ಅದಾಗ್ಯೂ ವಾಟ್ಸಾಪ್ ಬಳಕೆ ಮುಂಚೂಣಿಯಲ್ಲಿಯೇ ಇದೆ. ಈಗಾಗಲೇ ಸಂಸ್ಥೆಯು ಹಲವು ಆಕರ್ಷಕ ಫೀಚರ್ಸ್ ಪರಿಚಯಿಸಿ ಗಮನ ಸೆಳೆದಿದೆ. ಹಾಗೆಯೇ ಈ ವರ್ಷವು ಕೆಲವು ಮಹತ್ತರ ಫೀಚರ್ಸ್ ಅಳವಡಿಸಲಿದೆ.
ಹೌದು, ವಾಟ್ಸಾಪ್ ಅಪ್ಲಿಕೇಶನ್ನಲ್ಲಿ ಕೆಲವು ಫೀಚರ್ಸ್ಗಳು ಬಳಕೆದಾರರಿಗೆ ಅತ್ಯುತ್ತಮ ಅನಿಸಿವೆ. ಇತ್ತೀಚಿನ ದಿನಗಳಲ್ಲಿ ಸಂಸ್ಥೆಯು ವಾಟ್ಸಾಪ್ ಪೇಮೆಂಟ್ ಸೇವೆಯನ್ನು ಶುರು ಮಾಡಿ ಸದ್ದು ಮಾಡಿತು. ಹಾಗೆಯೇ ಗ್ರೂಪ್ ವಿಡಿಯೊ ಕಾಲಿಂಗ್ ಮಿತಿಯಲ್ಲಿ ಹೆಚ್ಚಳ ಮಾಡಿತು. ಅದೇ ರೀತಿ ಈ ವರ್ಷವು ಸಹ ವಾಟ್ಸಾಪ್ ಲಾಗ್ಔಟ್ ಸೇರಿದಂತೆ ಇನ್ನು ಕೆಲವು ಕುತೂಹಲಕರ ಫೀಚರ್ಸ್ಗಳನ್ನು ಸೇರಿಸುವ ಲಕ್ಷಣಗಳನ್ನು ಹೊರಹಾಕಿದೆ.

ವಾಟ್ಸಾಪ್ ಲಾಗ್ಔಟ್ ಫೀಚರ್
ವಾಟ್ಸಾಪ್ ನೂತನವಾಗಿ ಲಾಗ್ಔಟ್ ಫೀಚರ್ ಅನ್ನು ಶೀಘ್ರದಲ್ಲೇ ತರಲು ಸಜ್ಜಾಗಿದೆ. ಕಂಪನಿಯು ಈಗಾಗಲೇ ಇದನ್ನು ಪರೀಕ್ಷಿಸಲು ಪ್ರಾರಂಭಿಸಿದೆ. WABetaInfo ತಾಣದ ವರದಿಯ ಪ್ರಕಾರ, ಈ ಫೀಚರ್ ಭಿನ್ನವಾಗಿ, ವಾಟ್ಸಾಪ್ ಬೀಟಾ ಅಪ್ಡೇಟ್ 2.21.30.16 ನಲ್ಲಿ ಗುರುತಿಸಲ್ಪಟ್ಟಿದೆ.

ಮಲ್ಟಿ ಡಿವೈಸ್ ಲಾಗ್ಇನ್
ವಾಟ್ಸಾಪ್ ಮಲ್ಟಿ ಡಿವೈಸ್ ಲಾಗ್ ಇನ್ ಫೀಚರ್ ವಾಟ್ಸಾಪ್ ನ ಬಹುನಿರೀಕ್ಷಿತ ಫೀಚರ್ ಆಗಿದೆ. ವಾಟ್ಸಾಪ್ ಮೆಸೇಜಿಂಗ್ ಪ್ಲಾಟ್ಫಾರ್ಮ್ ತನ್ನ ಬೀಟಾ ಆವೃತ್ತಿಯಲ್ಲಿ ಈ ಫೀಚರ್ ಅನ್ನು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ಈ ಫೀಚರ್ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ ಮತ್ತು ಬಳಕೆದಾರರು ಬಹು ಸಾಧನಗಳಿಗೆ ಸೈನ್ ಇನ್ ಮಾಡಲು ಸಾಧ್ಯವಾಗುತ್ತದೆ.

ವಾಟ್ಸಾಪ್ ವೆಬ್ನಲ್ಲಿ ಆಡಿಯೊ ಮತ್ತು ವೀಡಿಯೊ ಕರೆ
ವಾಟ್ಸಾಪ್ ಬಳಕೆದಾರರು ಬಹಳ ಕುತೂಹಲದಿಂದ ಕಾಯುತ್ತಿರುವ ಮತ್ತೊಂದು ಫೀಚರ್ ಅಂದರೇ ವಾಟ್ಸಾಪ್ ವೆಬ್ನಲ್ಲಿ ಆಡಿಯೊ ಮತ್ತು ವೀಡಿಯೊ ಕರೆಗೆ ಅವಕಾಶ. ಈ ಫೀಚರ್ ಡೆಸ್ಕ್ಟಾಪ್ಗಳು ಮತ್ತು ಲ್ಯಾಪ್ಟಾಪ್ಗಳಲ್ಲಿ ವೀಡಿಯೊ ಕರೆಗಳು ಮತ್ತು ಧ್ವನಿ ಕರೆಗಳನ್ನು ಅನುಮತಿಸುತ್ತದೆ.

ವೆಕೇಶನ್ ಮೋಡ್
ಫೇಸ್ಬುಕ್ ಒಡೆತನದ ವಾಟ್ಸಾಪ್ನಲ್ಲಿ 'ವೆಕೇಶನ್ ಮೋಡ್' ಫೀಚರ್ ಅನ್ನು ಪರಿಚಯಿಸುವ ಸಾಧ್ಯತೆಯಿದೆ. ಈ ಫೀಚರ್ ಆರ್ಕೈವ್ ಮಾಡಿದ ಚಾಟ್ಗಳಂತೆ ಹೆಚ್ಚು ಕಾರ್ಯನಿರ್ವಹಿಸುತ್ತದೆ. ಈ ಆಯ್ಕೆಯನ್ನು ನಿಷ್ಕ್ರಿಯಗೊಳಿಸುವವರೆಗೆ ನಿರ್ದಿಷ್ಟ ಸಂಪರ್ಕದಿಂದ ಸಂದೇಶಗಳು ಅಥವಾ ಕರೆಗಳು ತೊಂದರೆಗೊಳಗಾಗುವುದಿಲ್ಲ. ಈ ವೈಶಿಷ್ಟ್ಯವನ್ನು 'ವೆಕೇಶನ್ ಮೋಡ್' ಎಂದು ಹೆಸರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.
This News Article is a Copy of GIZBOT
12-12-25 08:47 pm
Bangalore Correspondent
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
ಅಧಿವೇಶನ ಮುಗಿದ ತಕ್ಷಣವೇ ಡಿಕೆಶಿ ಮುಖ್ಯಮಂತ್ರಿಯಾಗುತ...
12-12-25 03:18 pm
ಅಧಿವೇಶನ ಮಧ್ಯೆಯೂ ಡಿಕೆಶಿ ಆಪ್ತ ಶಾಸಕರು, ಸಚಿವರ ಡಿನ...
12-12-25 03:15 pm
ನಾಯಕತ್ವ ಗೊಂದಲ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮಾತ...
12-12-25 01:36 pm
12-12-25 11:00 pm
HK News Desk
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
12-12-25 10:28 pm
Mangalore Correspondent
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
Mangalore Jail Inmate, Death: ಎದೆನೋವು ; ಉಡುಪಿ...
11-12-25 10:55 pm
ದೈವದ ಚಾಕರಿ ಮಾಡುವವರಿಗೆ ಮಾಸಾಶನ, ಸರ್ಕಾರಿ ಸವಲತ್ತು...
11-12-25 04:21 pm
12-12-25 01:58 pm
Mangalore Correspondent
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm