ಬ್ರೇಕಿಂಗ್ ನ್ಯೂಸ್
29-03-21 11:37 am Source: Vijaya Karnataka ಡಿಜಿಟಲ್ ಟೆಕ್
ಇದರಿಂದ ಬಳಕೆದಾರರು ತಾವು ಯಾವುದನ್ನು ಹೇಳಬೇಕು, ಏನನ್ನಾದರು ವ್ಯಕ್ತಪಡಿಸಬೇಕು ಎಂದಿದ್ದರೆ ಎಲ್ಲವನ್ನೂ ಸ್ಟಿಕ್ಕರ್ ಮೂಲಕ ಹೇಳಬಹುದು.
ಅಂದಾಜು 200 ಕೋಟಿ ಬಳಕೆದಾರರನ್ನು ಹೊಂದಿರುವ ವಿಶ್ವದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಬಳಕೆದಾರರಿಗೆ ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ತನ್ನ ಹೊಸ ಅಪ್ಡೇಟ್ನಲ್ಲಿ ವಾಟ್ಸ್ಆ್ಯಪ್ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ‘ಸ್ಟಿಕ್ಕರ್ ಸರ್ಚ್' ಫೀಚರ್ಸ್ ಅನ್ನು ನೀಡಿದೆ. ಅಂದರೆ ಬಳಕೆದಾರರು ಈಗ ಅಪ್ಲಿಕೇಶನ್ನಲ್ಲಿ ಕಸ್ಟಮೈಸ್ ಮಾಡಿದ ಸ್ಟಿಕ್ಕರ್ಗಳನ್ನು ಹುಡುಕಲು ಸಾಧ್ಯವಾಗುತ್ತದೆ.
ಇದರಿಂದ ಬಳಕೆದಾರರು ತಾವು ಯಾವುದನ್ನು ಹೇಳಬೇಕು, ಏನನ್ನಾದರು ವ್ಯಕ್ತಪಡಿಸಬೇಕು ಎಂದಿದ್ದರೆ ಎಲ್ಲವನ್ನೂ ಸ್ಟಿಕ್ಕರ್ ಮೂಲಕ ಹೇಳಬಹುದು. ವಾಟ್ಸ್ಆ್ಯಪ್ ಈ ಹಿಂದೆ ಬಳಕೆದಾರರಿಗೆ ತನ್ನ ಪ್ಲಾಟ್ಫಾರ್ಮ್ನಲ್ಲಿ ಎಮೋಜಿಗಳು ಮತ್ತು ಜಿಐಎಫ್ಗಳನ್ನು ಹುಡುಕಲು ಮಾತ್ರ ಅವಕಾಶ ಮಾಡಿಕೊಟ್ಟಿತು. ಆದರೆ ಸ್ಟಿಕ್ಕರ್ ಸರ್ಚ್ ಫೀಚರ್ಸ್ ಮೂಲಕ ಕಸ್ಟಮ್ ಸ್ಟಿಕ್ಕರ್ಗಳ ಸಹಾಯದಿಂದ ಬಳಕೆದಾರರು ತಾವು ಹೇಳಲು ಬಯಸುವದನ್ನು ನಿಖರವಾಗಿ ಕಳುಹಿಸುವುದು ಸುಲಭವಾಗುತ್ತದೆ.
ಈ ತಿಂಗಳ ಆರಂಭದಲ್ಲಿ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್ ಅನ್ನು ಪರಿಚಯಿಸಿತ್ತು. ಈ ಅಪ್ಡೇಟ್ ಮೂಲಕ ಬಳಕೆದಾರರು ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳಿಂದ ಅನಿಮೇಟೆಡ್ ಸ್ಟಿಕ್ಕರ್ ಪ್ಯಾಕ್ಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಎಲ್ಲಾ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗಾಗಿ ಆನಿಮೇಟೆಡ್ ಸ್ಟಿಕ್ಕರ್ ಪ್ಯಾಕ್ಗಳನ್ನು ವರ್ಲ್ಡ್ ವೈಡ್ ಆಮದು ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ.
ಇನ್ನೂ ಇದಕ್ಕಾಗಿ ಬಳಕೆದಾರರು ತಮ್ಮ ಕ್ಯಾಮೆರಾ ರೋಲ್ನಿಂದ ವೀಡಿಯೊ ಅಥವಾ ಜಿಐಎಫ್ ಅನ್ನು ಆರಿಸುವ ಮೂಲಕ ಸ್ಟಿಕ್ಕರ್ ಪ್ಯಾಕ್ ರಚಿಸಲು ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು. ನಂತರ, ಅಪ್ಲಿಕೇಶನ್ ಅದನ್ನು ಸ್ವಯಂಚಾಲಿತವಾಗಿ .webp ಫೈಲ್ಗೆ ಪರಿವರ್ತಿಸುತ್ತದೆ, ಅದನ್ನು ಅಪ್ಲಿಕೇಶನ್ಗೆ ಆಮದು ಮಾಡಿಕೊಳ್ಳಬಹುದು. ಈ ರೀತಿಯಾಗಿ ಬಳಕೆದಾರರು ತಮ್ಮ ಸ್ನೇಹಿತರೊಂದಿಗೆ ಕಸ್ಟಮ್ ಸ್ಟಿಕ್ಕರ್ಗಳನ್ನು ಹಂಚುವ ಅವಕಾಶ ನೀಡಿದೆ.
This News Article Is A Copy Of Vijaya Karnataka
19-10-25 07:00 pm
HK News Desk
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
MLA K.N. Rajanna: ರಸ್ತೆಯಲ್ಲಿ ನಮಾಜ್ ಮಾಡಲು ಮುಸ್...
18-10-25 09:11 pm
ಎಂಟು ದಿನಗಳಿಂದ ಲವರ್ ಜೊತೆಗೆ ರೂಮ್ ಮಾಡಿದ್ದ ಪುತ್ತೂ...
18-10-25 08:50 pm
ಅಳಂದ ಮತಗಳವು ಪ್ರಕರಣ ; ಬಿಜೆಪಿ ಮಾಜಿ ಶಾಸಕ ಗುತ್ತೇದ...
17-10-25 08:39 pm
18-10-25 07:34 pm
HK News Desk
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
19-10-25 10:32 pm
Mangalore Correspondent
Karkala Abhishek Suicide Case, Arrest: ಅಭಿಷೇಕ...
19-10-25 07:58 pm
Bindu Jewellery Mangalore: ಮಂಗಳೂರಿನಲ್ಲಿ 'ಬಿಂದ...
19-10-25 07:19 pm
ದಿನೇಶ್ ಮಟ್ಟುಗೆ ಕಾಂಗ್ರೆಸ್ ಸಿದ್ಧಾಂತ ಗೊತ್ತಿಲ್ಲ,...
18-10-25 11:01 pm
Kantara Controversy, Mangalore: ದೈವದ ಹೆಸರಲ್ಲಿ...
18-10-25 07:26 pm
19-10-25 11:09 pm
Mangalore Correspondent
Bangalore engineering College rape, Crime: ಬೆ...
19-10-25 01:26 pm
MSME Fraud, SBI Malikatte, Mangalore': ಕೇಂದ್ರ...
18-10-25 10:49 pm
Auto Driver Assaulted, Traffic Police in Putt...
18-10-25 03:48 pm
Fake Gold Scam, Belthangady Anugraha Society:...
18-10-25 03:27 pm