ಬ್ರೇಕಿಂಗ್ ನ್ಯೂಸ್
29-03-21 11:37 am Source: Vijaya Karnataka ಡಿಜಿಟಲ್ ಟೆಕ್
ಇದರಿಂದ ಬಳಕೆದಾರರು ತಾವು ಯಾವುದನ್ನು ಹೇಳಬೇಕು, ಏನನ್ನಾದರು ವ್ಯಕ್ತಪಡಿಸಬೇಕು ಎಂದಿದ್ದರೆ ಎಲ್ಲವನ್ನೂ ಸ್ಟಿಕ್ಕರ್ ಮೂಲಕ ಹೇಳಬಹುದು.
ಅಂದಾಜು 200 ಕೋಟಿ ಬಳಕೆದಾರರನ್ನು ಹೊಂದಿರುವ ವಿಶ್ವದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಬಳಕೆದಾರರಿಗೆ ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ತನ್ನ ಹೊಸ ಅಪ್ಡೇಟ್ನಲ್ಲಿ ವಾಟ್ಸ್ಆ್ಯಪ್ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ‘ಸ್ಟಿಕ್ಕರ್ ಸರ್ಚ್' ಫೀಚರ್ಸ್ ಅನ್ನು ನೀಡಿದೆ. ಅಂದರೆ ಬಳಕೆದಾರರು ಈಗ ಅಪ್ಲಿಕೇಶನ್ನಲ್ಲಿ ಕಸ್ಟಮೈಸ್ ಮಾಡಿದ ಸ್ಟಿಕ್ಕರ್ಗಳನ್ನು ಹುಡುಕಲು ಸಾಧ್ಯವಾಗುತ್ತದೆ.

ಇದರಿಂದ ಬಳಕೆದಾರರು ತಾವು ಯಾವುದನ್ನು ಹೇಳಬೇಕು, ಏನನ್ನಾದರು ವ್ಯಕ್ತಪಡಿಸಬೇಕು ಎಂದಿದ್ದರೆ ಎಲ್ಲವನ್ನೂ ಸ್ಟಿಕ್ಕರ್ ಮೂಲಕ ಹೇಳಬಹುದು. ವಾಟ್ಸ್ಆ್ಯಪ್ ಈ ಹಿಂದೆ ಬಳಕೆದಾರರಿಗೆ ತನ್ನ ಪ್ಲಾಟ್ಫಾರ್ಮ್ನಲ್ಲಿ ಎಮೋಜಿಗಳು ಮತ್ತು ಜಿಐಎಫ್ಗಳನ್ನು ಹುಡುಕಲು ಮಾತ್ರ ಅವಕಾಶ ಮಾಡಿಕೊಟ್ಟಿತು. ಆದರೆ ಸ್ಟಿಕ್ಕರ್ ಸರ್ಚ್ ಫೀಚರ್ಸ್ ಮೂಲಕ ಕಸ್ಟಮ್ ಸ್ಟಿಕ್ಕರ್ಗಳ ಸಹಾಯದಿಂದ ಬಳಕೆದಾರರು ತಾವು ಹೇಳಲು ಬಯಸುವದನ್ನು ನಿಖರವಾಗಿ ಕಳುಹಿಸುವುದು ಸುಲಭವಾಗುತ್ತದೆ.
ಈ ತಿಂಗಳ ಆರಂಭದಲ್ಲಿ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್ ಅನ್ನು ಪರಿಚಯಿಸಿತ್ತು. ಈ ಅಪ್ಡೇಟ್ ಮೂಲಕ ಬಳಕೆದಾರರು ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳಿಂದ ಅನಿಮೇಟೆಡ್ ಸ್ಟಿಕ್ಕರ್ ಪ್ಯಾಕ್ಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಎಲ್ಲಾ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗಾಗಿ ಆನಿಮೇಟೆಡ್ ಸ್ಟಿಕ್ಕರ್ ಪ್ಯಾಕ್ಗಳನ್ನು ವರ್ಲ್ಡ್ ವೈಡ್ ಆಮದು ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ.

ಇನ್ನೂ ಇದಕ್ಕಾಗಿ ಬಳಕೆದಾರರು ತಮ್ಮ ಕ್ಯಾಮೆರಾ ರೋಲ್ನಿಂದ ವೀಡಿಯೊ ಅಥವಾ ಜಿಐಎಫ್ ಅನ್ನು ಆರಿಸುವ ಮೂಲಕ ಸ್ಟಿಕ್ಕರ್ ಪ್ಯಾಕ್ ರಚಿಸಲು ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು. ನಂತರ, ಅಪ್ಲಿಕೇಶನ್ ಅದನ್ನು ಸ್ವಯಂಚಾಲಿತವಾಗಿ .webp ಫೈಲ್ಗೆ ಪರಿವರ್ತಿಸುತ್ತದೆ, ಅದನ್ನು ಅಪ್ಲಿಕೇಶನ್ಗೆ ಆಮದು ಮಾಡಿಕೊಳ್ಳಬಹುದು. ಈ ರೀತಿಯಾಗಿ ಬಳಕೆದಾರರು ತಮ್ಮ ಸ್ನೇಹಿತರೊಂದಿಗೆ ಕಸ್ಟಮ್ ಸ್ಟಿಕ್ಕರ್ಗಳನ್ನು ಹಂಚುವ ಅವಕಾಶ ನೀಡಿದೆ.
This News Article Is A Copy Of Vijaya Karnataka
11-09-26 02:59 pm
HK News Staffer
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
11-09-26 03:51 pm
HK News Staffer
DC A B Ibrahim, SIR Notice: ಹೆಸರಿನಲ್ಲಿ ತಪ್ಪಿದ...
11-09-26 01:56 pm
ಮಂಗಳೂರು- ಬೆಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ...
10-09-26 09:24 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
11-09-26 01:09 pm
HK News Staffer
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm