ಬ್ರೇಕಿಂಗ್ ನ್ಯೂಸ್
07-09-21 01:16 pm Source: News 18 Kannada ಡಿಜಿಟಲ್ ಟೆಕ್
ಗೂಗಲ್ ಪೇ ಯುಪಿಐ ಪಾವತಿಗಳಿಗಾಗಿ ಭಾರತದಲ್ಲಿ ಜನಪ್ರಿಯವಾಗಿರುವ ಆಪ್ ಆಗಿದೆ. ಈ ಆಪ್ ಸಾಮಾನ್ಯ ಯುಪಿಐ ಪಾವತಿ ಆಪ್ ಆಗಿ ಕಾರ್ಯನಿರ್ವಹಿಸುವುದಲ್ಲದೆ ಇತರ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಒದಗಿಸುತ್ತದೆ. ಡಿಜಿಟಲ್ ಚಿನ್ನವನ್ನು ಖರೀದಿಸಲು ಇಚ್ಛಿಸುವವರಿಗೆ ಈ ಆಪ್ ಗೋಲ್ಡ್ ಲಾಕರ್ ಅನ್ನು ಸಹ ಹೊಂದಿದೆ. ಈಗ ಆಪ್ ಸ್ಥಿರ ಠೇವಣಿ ಅಥವಾ ಎಫ್ಡಿಗಳನ್ನು ಪರಿಚಯಿಸಿದೆ. ಗೂಗಲ್ ಪೇ ಆಪ್ ಮೂಲಕ ಬಳಕೆದಾರರಿಗೆ ಎಫ್ ಡಿ ಮಾಡಲು ಅನುವು ಮಾಡಿಕೊಡುವ ಸಲುವಾಗಿ ಗೂಗಲ್ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಜೊತೆ ಪಾಲುದಾರಿಕೆ ಹೊಂದಿದೆ.

Google Payನಲ್ಲಿ FDಗೆ ಅರ್ಜಿ ಸಲ್ಲಿಸುವುದು ಹೇಗೆ?

ಬಡ್ಡಿ ದರ ಎಷ್ಟು?
ಪ್ರಸ್ತುತ, ಬ್ಯಾಂಕ್ ಒಂದು ವರ್ಷದ ಎಫ್ಡಿ ಮೇಲೆ 6.35% ಬಡ್ಡಿ ದರಗಳನ್ನು ನೀಡುತ್ತಿದೆ. ಎಫ್ಡಿಗಾಗಿ ಗ್ರಾಹಕರು ಈಕ್ವಿಟಾಸ್ ಬ್ಯಾಂಕ್ನಲ್ಲಿ ಖಾತೆಯನ್ನು ತೆರೆಯುವ ಅಗತ್ಯವಿಲ್ಲ ಏಕೆಂದರೆ ವಹಿವಾಟು ಯುಪಿಐ ಐಡಿ ಇರುವ ಬಳಕೆದಾರರ ಮೂಲಕವೇ ನಡೆಯುತ್ತದೆ. ಗೂಗಲ್ ಪೇ ಆಪ್ ಬಳಸಿ, ಉಪಯೋಗಗಳು ತಮ್ಮ ಠೇವಣಿಗಳ ಮೇಲೆ ನಿಗಾ ಇಡಲು, ಹೊಸದನ್ನು ಸೇರಿಸಲು ಮತ್ತು ಅಕಾಲಿಕವಾಗಿ ಹಿಂಪಡೆಯಲು ಆರ್ಡರ್ ಮಾಡಲು ಸಾಧ್ಯವಾಗುತ್ತದೆ.
ಎಫ್ಡಿ ಏಕೆ ಮುಖ್ಯ..?
ಉಳಿತಾಯದ ವಿಷಯಕ್ಕೆ ಬಂದರೆ ಉತ್ತಮ ಬಡ್ಡಿದರಗಳನ್ನು ನೀಡುವ ಬ್ಯಾಂಕ್ ನಿಮ್ಮ ಆಯ್ಕೆ ಆಗಿರಬೇಕು. ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಎದುರಿಸುತ್ತಿರುವ ಸಮಸ್ಯೆಯೆಂದರೆ ತಮ್ಮ ಸ್ಥಿರ ಠೇವಣಿಗಳಿಗೆ (FD) ಉತ್ತಮ ಬಡ್ಡಿದರಗಳನ್ನು ಹೊಂದಿರುವ ಬ್ಯಾಂಕುಗಳು ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. ಏಕೆಂದರೆ FD ಬಡ್ಡಿ ವಿಷಯದಲ್ಲಿ ದೊಡ್ಡ ಬ್ಯಾಂಕುಗಳು ಹೆಚ್ಚಾಗಿ ಗಮನ ಸೆಳೆಯುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ನಂತಹ ಉನ್ನತ ಬ್ಯಾಂಕ್ಗಳು ನೀಡುವ ದರಗಳು ಕಳೆದ ಸ್ವಲ್ಪ ಸಮಯದಿಂದ ಕುಸಿಯುತ್ತಿವೆ.

ಅಧಿಕ ಬಡ್ಡಿದರ ನೀಡುವ ಬ್ಯಾಂಕ್ಗಳು ಯಾವುವು?
ಅದನ್ನು ಗಮನದಲ್ಲಿಟ್ಟುಕೊಂಡು ಒಳ್ಳೆಯ ಬಡ್ಡಿ ನೀಡುವ ಸಣ್ಣ ಬ್ಯಾಂಕ್ಗಳ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡಿದ್ದೇವೆ. ಕೆಲವು ಅತ್ಯುತ್ತಮ ಸಣ್ಣ ಬ್ಯಾಂಕುಗಳು ನಿಮ್ಮ FD ಮೇಲೆ ಉತ್ತಮ ಬಡ್ಡಿದರಗಳನ್ನು ನೀಡುತ್ತವೆ. ನಿಮ್ಮ ವಯಸ್ಸು ಮತ್ತು ನೀವು ಆಯ್ಕೆ ಮಾಡಿದ ಸ್ಕೀಮ್ನ ಅವಧಿಯನ್ನು ಅವಲಂಬಿಸಿ ಸಣ್ಣ ಬ್ಯಾಂಕುಗಳು ಗ್ರಾಹಕರಿಗೆ ಶೇಕಡ 3 ರಿಂದ 7 ರಷ್ಟು ಅದಕ್ಕಿಂತ ಹೆಚ್ಚಿನ ಮೊತ್ತದ ಬಡ್ಡಿಯನ್ನು ನೀಡುತ್ತಿವೆ. ಈಶಾನ್ಯ ಬ್ಯಾಂಕ್ , ಜನ ಸ್ಮಾಲ್ ಬ್ಯಾಂಕ್ , ಸೂರ್ಯೋದಯ ಬ್ಯಾಂಕ್, ಉತ್ಕರ್ಶ್ ಬ್ಯಾಂಕ್ಗಳು ಹೆಚ್ಚಿನ ಬಡ್ಡಿ ದರವನ್ನು ನೀಡುತ್ತವೆ. ಈ ಸಣ್ಣ ಬ್ಯಾಂಕ್ಗಳಲ್ಲಿ ಹೂಡಿಕೆ ಮೂಲಕ ಉತ್ತಮ ಬಡ್ಡಿ ಪಡೆಯಿರಿ.
29-04-26 10:36 am
HK News Staffer
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
ಬಿಎಂಟಿಸಿ ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘ...
25-04-26 10:56 pm
ಫೇಲ್ ಎನ್ನಲಾಗಿದ್ದ ವಿದ್ಯಾರ್ಥಿನಿ ಟಾಪರ್ ; SSLC...
24-04-26 10:52 pm
27-04-26 02:48 pm
HK News Staffer
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ...
24-04-26 07:35 pm
28-04-26 09:18 pm
Mangalore Correspondent
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ; 67 ಕ...
26-04-26 04:30 pm
28-04-26 02:36 pm
Mangaluru Staffer
ರೈಲಿನಿಂದ ಕೈಜಾರಿ ಬಿದ್ದ ಮಗು ; ಚೈನ್ ಎಳೆದರೂ ನಿಲ್...
27-04-26 10:04 pm
ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ; ಪ್ರಮುಖ ಆ...
27-04-26 05:42 pm
ಉಡುಪಿಯಲ್ಲಿ ಕಟ್ಟಡಕ್ಕೆ ಬೆಂಕಿ ; ಮೊಬೈಲ್, ಹಾರ್ಡ್...
26-04-26 09:26 pm
ಚಾರ್ಮಾಡಿ ಘಾಟಿಯಲ್ಲಿ ಬಸ್ ಪಲ್ಟಿ; ಧರ್ಮಸ್ಥಳದಲ್ಲಿ ಮ...
26-04-26 09:23 pm