ಬ್ರೇಕಿಂಗ್ ನ್ಯೂಸ್
10-06-21 10:53 pm Satish, Bengaluru Correspondent ಕರ್ನಾಟಕ
ಬೆಂಗಳೂರು, ಜೂನ್ 10: ಲಾಕ್ಡೌನ್ ಹೇರಿದ ಬಳಿಕ ರಾಜ್ಯದಾದ್ಯಂತ ಪೊಲೀಸರು ವಶಕ್ಕೆ ಪಡೆದಿದ್ದ ವಾಹನಗಳನ್ನು ದಂಡ ಪಡೆದು ಬಿಟ್ಟು ಬಿಡುವಂತೆ ಹೈಕೋರ್ಟ್ ಆದೇಶ ಮಾಡಿದೆ. ಇದರಿಂದ ರಾಜ್ಯದಲ್ಲಿ ಒಂದೂವರೆ ಲಕ್ಷ ವಾಹನಗಳು ಪೊಲೀಸರ ಕೈಯಿಂದ ಬಿಡುಗಡೆ ಭಾಗ್ಯ ಪಡೆಯಲಿವೆ.
ಲಾಕ್ಡೌನ್ ಉಲ್ಲಂಘಿಸಿದ ನೆಪದಲ್ಲಿ ರಾಜ್ಯದಲ್ಲಿ ವಿವಿಧೆಡೆ ಪೊಲೀಸರು ಸಾರ್ವಜನಿಕರ ವಾಹನಗಳನ್ನು ಜಪ್ತಿ ಮಾಡಿ ಕೇಸು ದಾಖಲಿಸಿದ್ದರು. ಇದರಿಂದ ರಾಜ್ಯದಲ್ಲಿ ಅಂದಾಜು 1.51 ಲಕ್ಷ ವಾಹನಗಳು ಸೀಜ್ ಆಗಿದ್ದು ಅಡಕತ್ತರಿಗೆ ಸಿಲುಕಿದ್ದವು.
ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ವಶಕ್ಕೆ ಪಡೆದ ವಾಹನಗಳನ್ನು ದಂಡ ಪಡೆದು ಬಿಟ್ಟು ಬಿಡುವಂತೆ ಇದೀಗ ಕೋರ್ಟ್ ಸೂಚನೆ ನೀಡಿದೆ. ಇದರ ಪ್ರಕಾರ, 1.37 ಲಕ್ಷ ದ್ವಿಚಕ್ರ ವಾಹನಗಳು ತಲಾ 500 ರೂ. ದಂಡ ಭರಿಸಬೇಕು. 7400 ನಾಲ್ಕು ಚಕ್ರದ ವಾಹನಗಳು ಒಂದು ಸಾವಿರ ರೂ. ದಂಡ, 7100 ಇತರ ಮಾದರಿಯ ವಾಹನಗಳು ರೂ. 2 ಸಾವಿರ ದಂಡ ತೆರಬೇಕು. ಇದರ ಜೊತೆಗೆ ಸೆಕ್ಷನ್ 102(3) ಪ್ರಕಾರ ಬಾಂಡ್ ನೀಡಬೇಕಿದೆ.
ಬಾಂಡ್ ಪ್ರಕಾರ, ವಾಹನಗಳ ಮಾಲೀಕರು ಇನ್ನು ಯಾವುದೇ ರೀತಿಯಲ್ಲಿ ಲಾಕ್ಡೌನ್ ಆದೇಶವನ್ನು ಉಲ್ಲಂಘಿಸಬಾರದು ಎಂದು ಷರತ್ತು ಬರೆಸಿಕೊಂಡು ಪೊಲೀಸರು ವಾಹನಗಳನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ನ್ಯಾಯಾಧೀಶ ಅಭಯ್ ಶ್ರೀನಿವಾಸ್ ಓಕಾ ಮತ್ತು ಜಸ್ಟಿಸ್ ಅರವಿಂದ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ದೊಡ್ಡ ಮಟ್ಟದಲ್ಲಿ ವಾಹನಗಳು ಸೀಜ್ ಆಗಿರುವುದರಿಂದ ಅದನ್ನು ಪಾರ್ಕ್ ಮಾಡಿ ಇಟ್ಟುಕೊಳ್ಳುವುದು ಕಷ್ಟವಾಗಿದ್ದಲ್ಲದೆ, ಲಕ್ಷಾಂತರ ಸಂಖ್ಯೆಯ ವಾಹನಗಳ ಕೇಸನ್ನು ನ್ಯಾಯಾಲಯಕ್ಕೆ ಹಸ್ತಾಂತರ ಮಾಡಿದರೆ ಅದನ್ನು ಪರಿಹರಿಸುವುದು ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ ಎನ್ನುವ ದೃಷ್ಟಿಯಿಂದ ರಾಜ್ಯ ಸರಕಾರವೇ ಹೈಕೋರ್ಟಿಗೆ ಮನವಿ ಮಾಡಿತ್ತು. ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ದಂಡ ಪಡೆದು ವಾಹನ ರಿಲೀಸ್ ಮಾಡಲು ಅವಕಾಶ ನೀಡುವಂತೆ ಕೇಳಿಕೊಂಡಿತ್ತು.
ಸಾಮಾನ್ಯವಾಗಿ ವಾಹನಗಳ ಮಾಲೀಕರು ಕೋರ್ಟಿಗೆ ಅರ್ಜಿ ಸಲ್ಲಿಸಿ, ಬಿಡಿಸಿಕೊಳ್ಳುವ ಪ್ರಕ್ರಿಯೆ ನಡೆಸಬೇಕು. ಅದಕ್ಕೆ ಸಮಯವೂ ಹಿಡಿಯುತ್ತದೆ. ವಾಹನಗಳ ಮಾಲೀಕರ ವಿರುದ್ಧ ಪೊಲೀಸರು ಸೆಕ್ಷನ್ 188 (ಪೊಲೀಸರ ಸೂಚನೆ ಪಾಲಿಸದಿರುವುದು) ಮತ್ತು ಇದರ ಜೊತೆಗೆ 2005 ರ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೆಕ್ಷನ್ 51(1) ಬಿ ಅಡಿ (ಸರಕಾರದ ಆದೇಶ ಉಲ್ಲಂಘನೆ) ಪ್ರಕರಣ ದಾಖಲಿಸಿರುತ್ತಾರೆ. ಈ ಸೆಕ್ಷನ್ ಅಡಿ ಆರೋಪಗಳಿಗೆ ಆರು ತಿಂಗಳು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಇರುತ್ತದೆ
In a partial relief to owners of around 1.51 lakh motor vehicles seized for violation of the recent lockdown norms across the State, the High Court of Karnataka on Tuesday permitted the jurisdictional police to release the vehicles by collecting a tentative fine amount as deposit.
20-04-24 03:37 pm
HK News Desk
Hubballi Neha Murder, Accused Mother: ನೇಹಾಳೇ...
20-04-24 02:30 pm
Bhatkal boat: ಭಟ್ಕಳ ; ಗಾಳಿ ಮಳೆಗೆ ಮೀನುಗಾರಿಕಾ ಬ...
20-04-24 12:54 pm
Neha murder hubballi, Father: ಬಿಜೆಪಿ ಬಿಟ್ಟು ಕ...
20-04-24 12:53 pm
Hubbali Murder, Pramod Muthalik; ಹುಬ್ಬಳ್ಳಿ ಕೊ...
19-04-24 11:17 pm
17-04-24 08:42 pm
HK News Desk
Gujarat, Road Accident: ನಿಂತಿದ್ದ ಟ್ರಕ್ಗೆ ಗುದ...
17-04-24 07:07 pm
Dubai, Oman Rain, flood; ಧಾರಾಕಾರ ಮಳೆಗೆ ಕೊಚ್ಚಿ...
17-04-24 12:53 pm
29 Naxalites killed in Kanker encounter, Chha...
16-04-24 07:50 pm
ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ ; ಏಳು ಮಂದಿ ದುರ್...
16-04-24 05:09 pm
20-04-24 04:45 pm
Mangalore Correspondent
Rain in Mangalore, Udupi: ದಕ್ಷಿಣ ಕನ್ನಡ ಜಿಲ್ಲೆ...
20-04-24 12:12 pm
Mangalore Yedapadavu accident: ಮಣ್ಣು ಸಾಗಾಟದ ಕ...
19-04-24 10:11 pm
Mangalore accident, Kulur: ಕೋಡಿಕಲ್ ಕ್ರಾಸ್ ನಲ್...
19-04-24 09:55 pm
Mangalore election, 144 section: ಲೋಕಸಭೆ ಚುನಾವ...
19-04-24 08:32 pm
19-04-24 10:25 pm
Mangalore Correspondent
Mangalore Acid Attack, EXAM: ಆ್ಯಸಿಡ್ ದಾಳಿಗೀಡಾ...
19-04-24 09:25 pm
Hubballi student Neha murder: ಹುಬ್ಬಳ್ಳಿ ಕಾಲೇ...
19-04-24 03:43 pm
Gadag Murder news, four killed; ನಗರ ಸಭೆ ಉಪಾಧ್...
19-04-24 09:27 am
Bangalore Double Murder: 'ಕರಿಮಣಿ ಮಾಲೀಕ'ನಿಗೆ ತ...
18-04-24 10:03 pm