ಬ್ರೇಕಿಂಗ್ ನ್ಯೂಸ್
03-10-20 12:11 pm Headline Karnataka News Network ದೇಶ - ವಿದೇಶ
ಶಿಮ್ಲಾ, ಅಕ್ಟೋಬರ್ 03: 20 ವರ್ಷಗಳ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಕಂಡಿದ್ದ ಕನಸು ಇಂದಿಗೆ ನನಸಾಗಿದೆ. ಈ ಐತಿಹಾಸಿಕ ಕ್ಷಣದೊಂದಿಗೆ ಅಟಲ್ ಕನಸು ನನಸಾಗಿದ್ದು ಮಾತ್ರವಲ್ಲ, ಹಿಮಾಚಲಪ್ರದೇಶದ ಜನರ ಬಹುಕಾಲದ ನಿರೀಕ್ಷೆಯೂ ಅಂತ್ಯಗೊಂಡಿದೆ. ಗಡಿಭಾಗದಲ್ಲಿ ಸೇನೆಯ ಕಾರ್ಯಾಚರಣೆಗೂ ಈ ಸುರಂಗ ಮಾರ್ಗ ಮಹತ್ವದ್ದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು, ಹಿಮಾಚಲಪ್ರದೇಶದ ಮನಾಲಿ ಮತ್ತು ಲೇಹ್ ನಡುವಿನ 9 ಕಿಮೀ ಉದ್ದದ ಅಟಲ್ ಸುರಂಗ ಮಾರ್ಗವನ್ನು ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್, ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಹಿಮಾಚಲಪ್ರದೇಶ ಸಿಎಂ ಜೈರಾಮ್ ಠಾಕೂರ್, ಕೇಂದ್ರ ಸಚಿವ ಅನುರಾಗ್ ಠಾಕೂರ್, ಬೋರ್ಡರ್ ರೋಡ್ ಆರ್ಗನೈಸೇಶನ್ ಸಂಸ್ಥೆಯ ಡೈರೆಕ್ಟರ್ ಜನರಲ್ ಹರ್ಪಾಲ್ ಸಿಂಗ್ ಉಪಸ್ಥಿತರಿದ್ದರು.
ಲೇಹ್ - ಲಡಾಖ್, ಮನಾಲಿಯ ಜನರಿಗೆ ಈ ಸುರಂಗ ಮಾರ್ಗವು ಜೀವಮಾನದ ಕೊಡುಗೆಯಾಗಲಿದೆ. ಹಿಮಪಾತದಿಂದಾಗಿ ಹಿಂದೆ ಈ ಭಾಗದ ಜನರು ಆರು ತಿಂಗಳ ಕಾಲ ಮನಾಲಿಗೆ ಹೋಗುವುದು ಸಾಧ್ಯವಾಗುತ್ತಿರಲಿಲ್ಲ. ಇನ್ನು ವರ್ಷಪೂರ್ತಿ ಈ ಹೆದ್ದಾರಿಯ ಮೂಲಕ ಮನಾಲಿ - ಲೇಹ್ ಸಂಪರ್ಕ ಮಾಡಬಹುದಾಗಿದೆ. ಗಡಿಯಲ್ಲಿ ರಸ್ತೆ, ಸೇತುವೆ, ಸುರಂಗ ಮಾರ್ಗಗಳ ರಚನೆಯಿಂದ ಈ ಭಾಗದ ಜನರಿಗೆ ಮಾತ್ರ ಉಪಯೋಗ ಆಗುವುದಲ್ಲ. ಇದರ ದೊಡ್ಡ ಲಾಭ ಸೇನಾ ಪಡೆಗೂ ಸಿಗಲಿದೆ ಎಂದು ಮೋದಿ ಹೇಳಿದರು.
9.02 ಕಿಮೀ ಉದ್ದದ ಈ ಸುರಂಗ ಮಾರ್ಗದಿಂದಾಗಿ ಮನಾಲಿ ಮತ್ತು ಲೇಹ್ ನಡುವೆ 46 ಕಿಮೀ ಅಂತರವನ್ನು ಕಡಿಮೆಗೊಳಿಸಿದೆ. ಅಲ್ಲದೆ, ಐದು ಗಂಟೆಗಳ ಸಮಯವನ್ನು ಉಳಿತಾಯ ಮಾಡಿದೆ. ಸಮುದ್ರ ಮಟ್ಟಕ್ಕಿಂತ 3 ಸಾವಿರ ಮೀಟರ್ ಎತ್ತರದಲ್ಲಿ 9 ಕಿಮೀ ಉದ್ದದ ಸುರಂಗ ಮಾರ್ಗ ನಿರ್ಮಿಸಿದ್ದು ಜಗತ್ತಿನಲ್ಲಿ ಇದೇ ಮೊದಲು. ಅತ್ಯಾಧುನಿಕ ಸೌಕರ್ಯಗಳೊಂದಿಗೆ ನಿರ್ಮಿಸಲಾಗಿರುವ ಈ ಸುರಂಗ ಮಾರ್ಗಕ್ಕೆ 3300 ಕೋಟಿ ರೂಪಾಯಿ ವೆಚ್ಚವಾಗಿದೆ. ದಿನದಲ್ಲಿ 3 ಸಾವಿರ ಕಾರು ಮತ್ತು 1500 ಟ್ರಕ್ ಗಳು 80 ಕಿಮೀ ವೇಗದಲ್ಲಿ ಸಾಗಬಲ್ಲ ರೀತಿಯಲ್ಲಿ ರಸ್ತೆಯ ಸಾಮರ್ಥ್ಯವನ್ನು ಮಾರ್ಪಡಿಸಲಾಗಿದೆ. ವಿಶೇಷ ಅಂದ್ರೆ, ಈ ಸುರಂಗ ಮಾರ್ಗ ಅತ್ಯಂತ ಕಡಿದಾದ ಕಣಿವೆಗಳು ಮತ್ತು ನದಿಗಳ ಅಡಿಭಾಗದಿಂದ ದಾಟಿಕೊಂಡು ಸಾಗಲಿದೆ.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm