ಬ್ರೇಕಿಂಗ್ ನ್ಯೂಸ್
28-11-22 12:12 pm HK News Desk ದೇಶ - ವಿದೇಶ
ಶ್ರೀನಗರ, ನ.28 : 24 ಗಂಟೆಯೊಳಗೆ ಸರ್ಕಾರಿ ನಿವಾಸ ಖಾಲಿ ಮಾಡಿ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರಿಗೆ ಜಮ್ಮು ಕಾಶ್ಮೀರ ಸರ್ಕಾರ ನೋಟಿಸ್ ನೀಡಿದೆ.
ಮೆಹಬೂಬಾ ಮುಫ್ತಿ, ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಸರ್ಕಾರಿ ಬಂಗಲೆಯಲ್ಲಿ ವಾಸವಿದ್ದಾರೆ. ಇದನ್ನು ಖಾಲಿ ಮಾಡಬೇಕು ಎಂದು ಅವರಿಗೆ ಒಂದು ತಿಂಗಳ ಹಿಂದೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ಬಂಗಲೆ ಖಾಲಿ ಮಾಡದ ಕಾರಣ, ಇದೀಗ ಮತ್ತೆ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದ್ದು, 24 ಗಂಟೆಗಳ ಗಡುವು ನೀಡಲಾಗಿದೆ.
'24 ಗಂಟೆಯೊಳಗೆ ಬಂಗಲೆ ಖಾಲಿ ಮಾಡಲು ನಿಮಗೆ ನಿರ್ದೇಶಿಸಲಾಗಿದೆ. ಇದು ತಪ್ಪಿದ್ದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು' ಎಂದು ನೋಟಿಸ್ನಲ್ಲಿ ಹೇಳಲಾಗಿದೆ. ಬಂಗಲೆ ಖಾಲಿ ಮಾಡಲು ನನಗೆ ನೋಟಿಸ್ ನೀಡಲಾಗಿದೆ ಎಂದು ಮೆಹಬೂಬಾ ನವೆಂಬರ್ 20 ರಂದು ಹೇಳಿದ್ದರು.
ದೇಶದ ಎಲ್ಲಾ ರಾಜ್ಯಗಳಲ್ಲಿ, ಅಧಿಕಾರದಲ್ಲಿರುವ ಮುಖ್ಯಮಂತ್ರಿಗಳು ಅಥವಾ ಮಂತ್ರಿಗಳಿಗೆ ಸರ್ಕಾರಿ ಬಂಗಲೆಗಳನ್ನು ನೀಡಲಾಗುತ್ತದೆ. ಅಧಿಕಾರಾವಧಿ ಮುಗಿದ ಬಳಿಕ ಅದನ್ನು ತೆರವುಗೊಳಿಸಬೇಕು. ಆದರೆ ಜಮ್ಮು ಕಾಶ್ಮೀರದಲ್ಲಿ ಮಾಜಿ ಮುಖ್ಯಮಂತ್ರಿಗಳಿಗೆ ಜೀವನ ಪರ್ಯಂತ ಸರ್ಕಾರಿ ಬಂಗಲೆ ನೀಡುವ ಕಾನೂನು ಇತ್ತು.
2019ರಲ್ಲಿ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ಬಳಿಕ ಈ ನಿಯಮ ರದ್ದುಗೊಂಡಿತ್ತು. ಹೀಗಾಗಿ 2020ರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಓಮರ್ ಅಬ್ದುಲ್ಲ ಹಾಗೂ ಗುಲಾಂ ನಬಿ ಅಜಾದ್ ಈ ಮೊದಲೇ ಸರ್ಕಾರಿ ಬಂಗಲೆ ತೊರೆದಿದ್ದರು.
Former Jammu and Kashmir Chief Minister and Peoples Democratic Party chief Mehbooba Mufti has been served a notice to vacate the government quarter she is occupying in south Kashmir’s Anantnag District by the Jammu and Kashmir administration, officials said. The notice was served to the former CM on Saturday to vacate quarter number 7 at Housing Colony Khanabal within 24 hours.
08-02-23 09:09 pm
HK News Desk
ರಾವಣ ರಾಕ್ಷಸ, ಬ್ರಾಹ್ಮಣ ಅಂತೀವಾ ? ಸಮುದಾಯ ಬಗ್ಗೆ ಹ...
08-02-23 06:22 pm
ನ್ಯಾಯಾಧೀಶರ ಬಗ್ಗೆ ಆರೋಪ ; ನ್ಯಾಯಾಂಗ ನಿಂದನೆಗೈದ ವಕ...
08-02-23 06:07 pm
ನಕಲಿ ಸೈಟ್ ತೋರಿಸಿ ಗ್ರಾಹಕರಿಗೆ ಮೋಸ ; ವಂಚಕ ಜಯಕುಮಾ...
07-02-23 09:53 pm
ಬಳ್ಳಾರಿಯಲ್ಲಿ ಬೀದಿನಾಯಿಗಳ ದಾಳಿಗೆ 30ಕ್ಕೂ ಹೆಚ್ಚು...
07-02-23 05:10 pm
08-02-23 11:06 pm
HK News Desk
ಟರ್ಕಿ, ಸಿರಿಯದಲ್ಲಿ ಭೂ ಪ್ರಳಯ ; ಮೃತರ ಸಂಖ್ಯೆ 11 ಸ...
08-02-23 09:18 pm
ಪಾಕಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ, ಬಸ್ – ಕಾರು...
08-02-23 08:09 pm
ಕರಗುತ್ತಿದೆ ಸಾವಿರಕ್ಕೂ ಹೆಚ್ಚು ಹಿಮ ಸರೋವರ ; ಭಾರತ,...
08-02-23 06:12 pm
ಮತ್ತೆ ಆರ್ಬಿಐ ರೆಪೋ ದರ ಹೆಚ್ಚಳ ; ಜನಸಾಮಾನ್ಯರ ಜೇಬಿ...
08-02-23 01:13 pm
08-02-23 10:43 pm
Mangalore Correspondent
ಒಂದೇ ಫ್ಯಾನಿಗೆ ನೇಣು ಬಿಗಿದು ಸಾವಿಗೆ ಶರಣಾದ ಕೇರಳದ...
08-02-23 03:23 pm
ವಿಷಾಹಾರ ಪ್ರಕರಣ ; ಸಿಟಿ ನರ್ಸಿಂಗ್ ಕಾಲೇಜಿಗೆ ರಜೆ ಘ...
08-02-23 02:55 pm
ನೇಣು ಬಿಗಿದು ಸಾವಿಗೆ ಶರಣಾದ ಅತಿಥಿ ಉಪನ್ಯಾಸಕಿ ; ಕಾ...
08-02-23 01:04 pm
ಅಮಿತ್ ಷಾ ಪುತ್ತೂರಿಗೆ ಬಂದು ಕ್ಯಾಂಪ್ಕೋ ಖರೀದಿಸುತ್ತ...
07-02-23 10:44 pm
08-02-23 11:37 pm
Mangaluru Correspondent
ಮೊಮ್ಮಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ, ಅಶ್ಲೀಲ ವ...
08-02-23 08:33 pm
ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣ ; ಸುರತ್ಕಲ್ ಪರಿ...
07-02-23 08:46 pm
ಜುವೆಲ್ಲರಿ ಉದ್ಯೋಗಿಯ ಕತ್ತು ಸೀಳಿ ಹತ್ಯೆ ; ಹರಿತ ಆಯ...
06-02-23 03:20 pm
ರಿಯಲ್ ಎಸ್ಟೇಟ್ ನಡೆಸುತ್ತಿದ್ದ ವ್ಯಕ್ತಿಯ ಬರ್ಬರ ಹತ್...
05-02-23 09:05 pm