ಬ್ರೇಕಿಂಗ್ ನ್ಯೂಸ್
02-12-22 08:39 pm HK News Desk ದೇಶ - ವಿದೇಶ
ನವದೆಹಲಿ, ಡಿ.2: ಇಂಡೋನೇಶ್ಯಾದಲ್ಲಿ ವಿಚಿತ್ರ ಕಾನೂನು ಜಾರಿಗೆ ಅಲ್ಲಿನ ಸರಕಾರ ಮುಂದಾಗಿದೆ. ಮದುವೆಯಾಗದೇ ಹೆಣ್ಣು ಅಥವಾ ಗಂಡು ಬೇರೆ ವ್ಯಕ್ತಿಗಳ ಜೊತೆಗೆ ಲೈಂಗಿಕ ಸಂಪರ್ಕ ನಡೆಸಿದರೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಲ್ಲ ಕಾನೂನು ಜಾರಿಗೆ ಚಿಂತನೆ ನಡೆಸಿದೆ. ಈ ಕುರಿತ ಕ್ರಿಮಿನಲ್ ಕಾಯ್ದೆಯನ್ನು ಇದೇ ತಿಂಗಳಲ್ಲಿ ಸಂಸತ್ತಿನಲ್ಲಿ ಪಾಸ್ ಮಾಡಲು ಇಂಡೋನೇಶ್ಯಾ ಸರಕಾರ ಉದ್ದೇಶಿಸಿದೆ.
ಯಾರೇ ಆಗಲಿ ಪತ್ನಿ ಅಥವಾ ಗಂಡ ಮದುವೆಯಾದವರ ಜೊತೆಗಲ್ಲದೆ ಬೇರೆ ವ್ಯಕ್ತಿಯ ಜೊತೆಗೆ ಲೈಂಗಿಕ ಸಂಪರ್ಕ ನಡೆಸಿದರೆ ಒಂದು ವರ್ಷ ಶಿಕ್ಷೆ ವಿಧಿಸಬಲ್ಲ ಕಾನೂನು ಜಾರಿಯಾಗಲಿದೆ. ಆದರೆ, ಈ ಬಗ್ಗೆ ಗಂಡ ಅಥವಾ ಪತ್ನಿಯರು ಅಕ್ರಮ ಸಂಬಂಧ ಬಗ್ಗೆ ಪೊಲೀಸ್ ದೂರು ನೀಡಬೇಕು. ಅಥವಾ ತಮ್ಮ ಮಕ್ಕಳ ಅಕ್ರಮ ಸಂಬಂಧ ಬಗ್ಗೆ ಹೆತ್ತವರು ದೂರು ನೀಡಬೇಕಾಗುತ್ತದೆ. ಅಲ್ಲಿನ ಸಂವಿಧಾನದ ಸೆಕ್ಷನ್ 144 ಪ್ರಕಾರ, ಕೋರ್ಟಿನಲ್ಲಿ ಸೂಕ್ತ ಸಮಯದಲ್ಲಿ ವಿಚಾರಣೆ ನಡೆಯದೇ ಇದ್ದಲ್ಲಿ ಇಂತಹ ದೂರು ಅನೂರ್ಜಿತವಾಗುತ್ತದೆ.

ಮೂರು ವರ್ಷಗಳ ಹಿಂದೆ ಇದೇ ರೀತಿಯ ಕಾನೂನು ಜಾರಿಗೆ ಇಂಡೋನೇಶ್ಯಾ ಸರಕಾರ ಮುಂದಾಗಿತ್ತು. ಆನಂತರ, ಜನರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದರಿಂದ ಕಾನೂನು ಹಿಂಪಡೆದಿತ್ತು. ಇಂಡೋನೇಶ್ಯಾ ಮುಸ್ಲಿಂ ರಾಷ್ಟ್ರವಾಗಿದ್ದರೂ, ಅನೈತಿಕ ಚಟುವಟಿಕೆ ಹತ್ತಿಕ್ಕುವ ದೃಷ್ಟಿಯಿಂದ ಮತ್ತು ಮದುವೆ ಮೀರಿ ಲೈಂಗಿಕ ಸಂಪರ್ಕವನ್ನು ತಡೆಯಲು ಇಂತಹ ಕಾನೂನು ತರಲು ಮುಂದಾಗಿದೆ. ಆದರೆ ಇಂಡೋನೇಶ್ಯಾದಲ್ಲಿ ಮಹಿಳೆಯರ ಹಕ್ಕುಗಳ ಉಲ್ಲಂಘನೆಯಾಗುವುದು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ತೀವ್ರವಾಗಿ ದಮನಿಸಲಾಗುತ್ತದೆ. ಇದೀಗ ಅಕ್ರಮ ಸಂಬಂಧ ಕುರಿತು ಕಾನೂನು ತಂದಲ್ಲಿ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬೀಳಲಿದೆ ಎನ್ನುವ ಆತಂಕವೂ ಅಲ್ಲಿನ ಉದ್ಯಮ ವಲಯದಲ್ಲಿದೆ.
Indonesian Parliament is set to pass a new criminal code that will penalise premarital sex, with a punishment of up to one year in jail, local media reports said. The Draft Criminal Code (RKUHP) is expected to be passed in the Parliament in the coming days.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm