ಬ್ರೇಕಿಂಗ್ ನ್ಯೂಸ್
03-01-23 10:38 am HK News Desk ದೇಶ - ವಿದೇಶ
ನವದೆಹಲಿ, ಜ.3: ಕೇಂದ್ರ ಸರಕಾರದ ನೋಟು ಅಮಾನ್ಯ ನಿರ್ಣಯದ ಬಗ್ಗೆ ಸುಪ್ರೀಂ ಕೋರ್ಟ್ ನಿನ್ನೆಯಷ್ಟೆ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ರಿಸರ್ವ್ ಬ್ಯಾಂಕ್, ದೇಶದ ನೋಟು ಚಲಾವಣೆ ಬಗ್ಗೆ ಆರ್ಬಿಐ ವರದಿ ನೀಡಿದ್ದು ನೋಟು ರದ್ದತಿಯ 6 ವರ್ಷಗಳ ಬಳಿಕವೂ ದೇಶದಲ್ಲಿ ನಗದು ಚಲಾವಣೆಯೇ ಮುಂಚೂಣಿಯಲ್ಲಿದೆ ಎಂದಿದೆ. 6 ವರ್ಷದಲ್ಲಿ ಸಾರ್ವಜನಿಕರ ನಗದು ಬಳಕೆಯ ಪ್ರಮಾಣ ಶೇ. 83ಕ್ಕೆ ಏರಿಕೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ವರದಿಯಲ್ಲಿ ತಿಳಿಸಿದೆ.
ಈ ಕುರಿತ ದತ್ತಾಂಶಗಳನ್ನು ಆರ್ಬಿಐ ಬಿಡುಗಡೆಗೊಳಿಸಿದ್ದು, ನೋಟು ರದ್ದತಿಗೆ ಮುನ್ನ ಅಂದರೆ, 2016ರ ನ.4ರ ಸಮಯಕ್ಕೆ ದೇಶದಲ್ಲಿ 17.74 ಲಕ್ಷ ಕೋಟಿ ರೂ. ನಗದು ಚಲಾವಣೆಯಲ್ಲಿತ್ತು. ಈಗ ಇದರ ಮೌಲ್ಯ ದ್ವಿಗುಣಗೊಂಡಿದ್ದು, 2022ರ ಡಿ.23ರ ವೇಳೆಗೆ ದೇಶದಲ್ಲಿ 32.42 ಲಕ್ಷ ಕೋಟಿ ರೂ. ಮೌಲ್ಯದ ನಗದು ಚಲಾವಣೆಯಲ್ಲಿದೆ ಎಂದು ತಿಳಿಸಿದೆ.
ನೋಟು ಅಮಾನ್ಯದ ಬಳಿಕವೂ ದೇಶದಲ್ಲಿ ನಕಲಿ ನೋಟುಗಳ ಮುದ್ರಣ ಸಮಸ್ಯೆ ಮುಂದುವರಿದಿರುವುದನ್ನು ವರದಿ ಸೂಚ್ಯವಾಗಿ ತಿಳಿಸಿದೆ. ಹೀಗಾಗಿಯೇ ಆರ್ಬಿಐ ಮುದ್ರಿತ ನೋಟುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನಕಲಿ ನೋಟುಗಳೇ ಚಲಾವಣೆಯಲ್ಲಿವೆ. 2016ರಿಂದ ಈವರೆಗೆ 245.33 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ದೇಶಾದ್ಯಂತ ವಶಪಡಿಸಲಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್ಸಿ ಆರ್ಬಿ) ತಿಳಿಸಿದೆ.
ನೋಟ್ ರದ್ದತಿ ಆದ ವರ್ಷದಲ್ಲಿ 15.92 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದು, 2020ರಲ್ಲಿ 92.17 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿತ್ತು.
The Supreme Court on Monday held that the 2016 demonetisation exercise did not suffer from any flaws in the decision-making process. The records were produced by the Central government and the Reserve Bank of India (RBI) on the petitioners’ insistence that the court would not be able to satisfy itself without examining those documents.
19-04-24 11:17 pm
HK NEWS
Actress Priya Savadi, Hubballi Neha Murder: ಅ...
19-04-24 07:58 pm
Hubbali Neha Murder, CM Siddaramaiah: ವೈಯಕ್ತಿ...
19-04-24 04:27 pm
Hubballi Murder Neha, Parameshwar: ಹುಬ್ಬಳ್ಳಿ...
19-04-24 04:08 pm
ಶಿವಮೊಗ್ಗ ಸಂಸದ ರಾಘವೇಂದ್ರ 73 ಕೋಟಿ ಆಸ್ತಿ ; ಪತ್ನಿ...
19-04-24 01:41 pm
17-04-24 08:42 pm
HK News Desk
Gujarat, Road Accident: ನಿಂತಿದ್ದ ಟ್ರಕ್ಗೆ ಗುದ...
17-04-24 07:07 pm
Dubai, Oman Rain, flood; ಧಾರಾಕಾರ ಮಳೆಗೆ ಕೊಚ್ಚಿ...
17-04-24 12:53 pm
29 Naxalites killed in Kanker encounter, Chha...
16-04-24 07:50 pm
ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ ; ಏಳು ಮಂದಿ ದುರ್...
16-04-24 05:09 pm
19-04-24 10:11 pm
Mangalore Correspondent
Mangalore accident, Kulur: ಕೋಡಿಕಲ್ ಕ್ರಾಸ್ ನಲ್...
19-04-24 09:55 pm
Mangalore election, 144 section: ಲೋಕಸಭೆ ಚುನಾವ...
19-04-24 08:32 pm
Kalakul, diploma course: ಕಲಾಕುಲ್ ನಾಟಕ ತಂಡದಿಂದ...
19-04-24 05:18 pm
Congress MP Padmaraj, Bantwal: ಬಂಟ್ವಾಳ ಕ್ಷೇತ್...
19-04-24 02:30 pm
19-04-24 10:25 pm
Mangalore Correspondent
Mangalore Acid Attack, EXAM: ಆ್ಯಸಿಡ್ ದಾಳಿಗೀಡಾ...
19-04-24 09:25 pm
Hubballi student Neha murder: ಹುಬ್ಬಳ್ಳಿ ಕಾಲೇ...
19-04-24 03:43 pm
Gadag Murder news, four killed; ನಗರ ಸಭೆ ಉಪಾಧ್...
19-04-24 09:27 am
Bangalore Double Murder: 'ಕರಿಮಣಿ ಮಾಲೀಕ'ನಿಗೆ ತ...
18-04-24 10:03 pm