Mangalore Kuthar Car Accident: ಕುತ್ತಾರು ; ಯರ್ರಾಬಿರ್ರಿ ಚಲಿಸಿದ ಕ್ರೆಟಾ ಕಾರು ಪಲ್ಟಿ ; ಮೂರು ಗೋವುಗಳ ಮಾರಣಹೋಮ, ಕರು ಚಿಂತಾಜನಕ

09-07-23 11:14 am       Mangaluru Correspondent   ಕರಾವಳಿ

ಯುವಕ, ಯುವತಿಯರಿದ್ದ ಕ್ರೆಟಾ ಕಾರೊಂದು ಯರ್ರಾ ಬಿರ್ರಿ ಚಲಿಸಿದ ಪರಿಣಾಮ ರಸ್ತೆಯಲ್ಲಿದ್ದ ಮೂರು ಗೋವುಗಳು ಢಿಕ್ಕಿಯ ರಭಸಕ್ಕೆ ಸಾವನ್ನಪ್ಪಿದ್ದು, ಕಾರು ಪಲ್ಟಿಯಾಗಿ ಸವಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಕುತ್ತಾರು ಸಮೀಪದ ಪಂಡಿತ್ ಹಾಸ್ ಎಂಬಲ್ಲಿ ನಡೆದಿದೆ.

ಉಳ್ಳಾಲ, ಜು.9: ಯುವಕ, ಯುವತಿಯರಿದ್ದ ಕ್ರೆಟಾ ಕಾರೊಂದು ಯರ್ರಾ ಬಿರ್ರಿ ಚಲಿಸಿದ ಪರಿಣಾಮ ರಸ್ತೆಯಲ್ಲಿದ್ದ ಮೂರು ಗೋವುಗಳು ಢಿಕ್ಕಿಯ ರಭಸಕ್ಕೆ ಸಾವನ್ನಪ್ಪಿದ್ದು, ಕಾರು ಪಲ್ಟಿಯಾಗಿ ಸವಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಕುತ್ತಾರು ಸಮೀಪದ ಪಂಡಿತ್ ಹಾಸ್ ಎಂಬಲ್ಲಿ ನಡೆದಿದೆ.

ಇಂದು ಮುಂಜಾನೆ ನಸುಕಿನ 3.45 ರ ವೇಳೆ ಪಂಡಿತ್ ಹೌಸಲ್ಲಿ ಘಟನೆ ಸಂಭವಿಸಿದೆ. ದೇರಳಕಟ್ಟೆಯಿಂದ ತೊಕ್ಕೊಟ್ಟಿನ ಕಡೆ ಧಾವಿಸುತ್ತಿದ್ದ ಕ್ರೆಟಾ ಕಾರು ಯರ್ರಾ ಬಿರ್ರಿ ಚಲಿಸಿದ ಕಾರಣ ಘಟನೆ ನಡೆದಿದ್ದು ಕುತ್ತಾರು ರಾಜರಾಜೇಶ್ವರಿ ದೇವಸ್ಥಾನದ ಬಳಿ ಹೋರಿ ಕರುವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕರು ಗಂಭೀರ ಗಾಯಗೊಂಡಿದೆ. ಅಲ್ಲಿಂದ ಮುಂದಕ್ಕೆ ಚಲಿಸಿದ ಕಾರು ಪಂಡಿತ್ ಹೌಸ್ ಬಸ್ಸು ನಿಲ್ದಾಣದ ಬಳಿಯ ರಸ್ತೆಯಲ್ಲಿದ್ದ ಎರಡು ಹಸು ಮತ್ತೊಂದು ಹೋರಿಗೆ ರಭಸವಾಗಿ ಬಡಿದು ಪಲ್ಟಿಯಾಗಿ ಉರುಳಿ ಬಿದ್ದಿದೆ.

ಢಿಕ್ಕಿಯ ರಭಸಕ್ಕೆ ಮೂರು ಗೋವುಗಳ ಕರುಳು ಹೊರ ಬಂದು ಸ್ಥಳದಲ್ಲೇ ಸಾವನ್ನಪ್ಪಿವೆ. ಕಾರಿನಲ್ಲಿ ಇಬ್ಬರು ಯುವತಿಯರು, ಇಬ್ಬರು ಯುವಕರಿದ್ದರೆಂದು ಹೇಳಲಾಗಿದ್ದು ಅವರನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಸವಾರರಲ್ಲಿ ಓರ್ವ ವೈದ್ಯನಾಗಿದ್ದು ಬಾಕಿ ಮೂವರ ಬಗ್ಗೆ ಮಾಹಿತಿ ಇನ್ನಷ್ಟೆ ಸಿಗಬೇಕಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Mangalore Kuthar Car Accident: A Creta car topples after ramming into cows; three cows are killed; one calf is injured. Some doctors were said to be travelling in the car, and the car was said to be overspeeding after it rammed a calf and later two cows near Pandit House Resort.