ಬ್ರೇಕಿಂಗ್ ನ್ಯೂಸ್
05-06-25 10:10 am Mangalore Correspondent ಕರಾವಳಿ
ಮಂಗಳೂರು, ಜೂನ್ 5: ಕೇಸರಿ ಕಟ್ಟಿಕೊಂಡು ಹೊಡೆದ್ಕೊಂಡರೆ ಹಿಂದು ಮುಖಂಡ, ಹಿಂದು ಕಾರ್ಯಕರ್ತ ಆಗುತ್ತಾನಾ.. ರೌಡಿಶೀಟರ್, ಕೊಲೆ ಮಾಡಿದವರು, ಸುಲಿಗೆ ಮಾಡಿದವರನ್ನು ಹಿಂದು ಕಾರ್ಯಕರ್ತ ಅನ್ನುತ್ತೀರಾ.. ಕಾಂಗ್ರೆಸ್ ಸರ್ಕಾರ ಇರುವಾಗ ಮಾತ್ರ ಹಿಂದುಗಳಿಗೆ ತೊಂದರೆ ಆಗಿದ್ದಾ.. ಹಿಂದು ನಾಯಕ ಅನಿಸಿಕೊಳ್ಳಲು ರೌಡಿಶೀಟರ್, ಗಾಂಜಾ, ಅನೈತಿಕ ಚಟುವಟಿಕೆ ಮಾಡಿಕೊಂಡಿದ್ದವರೇ ಆಗಬೇಕಾ.. ಹೀಗೆಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪೊಲೀಸರು ಬಿಡುಗಡೆ ಮಾಡಿರುವ ಗಡೀಪಾರು ಪಟ್ಟಿಯಲ್ಲಿ ಕೇವಲ ಹತ್ತು ಕಿಮೀ ವ್ಯಾಪ್ತಿಯವರೇ ಹೆಚ್ಚಿದ್ದಾರೆ. ಇಡೀ ಕರಾವಳಿಗೆ ಹತ್ತು ಕಿಮೀ ವ್ಯಾಪ್ತಿಯ ಕೋಮು ಹಿಂಸೆಯ ಜನರಿಂದಾಗಿ ಕೆಟ್ಟ ಹೆಸರು ಬರ್ತಾ ಇದೆ. 30 ವರ್ಷಗಳ ಹಿಂದೆ ಬಿಜೆಪಿಯವರು ಬಿತ್ತಿದ ಕೋಮು ವೈಷಮ್ಯದ ಬೀಜ ಈಗ ಹೆಮ್ಮರವಾಗಿ ಬೆಳೆದಿದೆ. ಕೋಮು ಗಲಭೆ, ಕೋಮು ಸಂಘರ್ಷ, ಕೋಮು ಹತ್ಯೆ ಬೇರೆ ಬೇರೆ. ಇಲ್ಲಿ ಆಗುತ್ತಿರುವುದು ಕೋಮು ಹತ್ಯೆ ಮಾತ್ರ. ಆದರೆ ಇಡೀ ಕರಾವಳಿಗೆ ಇದರ ನೆಪದಲ್ಲಿ ಮಸಿ ಬಳಿಯಲಾಗುತ್ತಿದೆ. ಮಾಧ್ಯಮದಲ್ಲಿ ಇಡೀ ಕರಾವಳಿಯಲ್ಲಿ ಇಂಥದ್ದು ಆಗ್ತಾ ಇದೆಯೆಂದು ಬಣ್ಣ ಹಚ್ಚಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಕಾರವಾರದಿಂದ ಕಾಸರಗೋಡು ವರೆಗೆ ನಮ್ಮ ಕರಾವಳಿಯಿದ್ದು, ಮಂಗಳೂರಿನಲ್ಲಿ ಮಾತ್ರ ಈ ರೀತಿಯ ಕೋಮು ಹಿಂಸೆಯ ಕೃತ್ಯಗಳು ನಡೆಯುತ್ತಿವೆ. ಬೆಳ್ತಂಗಡಿ, ಸುಳ್ಯ, ಉಡುಪಿ, ಕಾರವಾರ ಬೇರೆಲ್ಲಿಯೂ ನಡೀತಾ ಇಲ್ಲ. ಮಂಗಳೂರಿನಲ್ಲು ಹತ್ತು ಕಿಮೀ ರೇಡಿಯಸ್ ವ್ಯಾಪ್ತಿಯಲ್ಲಿ ಇಂತಹ ಕೃತ್ಯಗಳು ಹೆಚ್ಚಿದ್ದು, ಇದನ್ನು ಪೊಲೀಸ್ ಇಲಾಖೆ ಮೂಲಕ ಹತ್ತಿಕ್ಕಬೇಕಾಗಿದೆ. ಈ ನಡುವೆ, ನಾವೆಲ್ಲ ಹಿಂದುಗಳಲ್ವಾ ಎನ್ನುವ ಪ್ರಶ್ನೆ ಕೇಳಬೇಕಾಗಿದೆ. ಇವರ ಪರಿವಾರದಲ್ಲಿ 50-60 ದಳಗಳಿವೆ, ಅವನ್ನು ಹೇಳಿಕೊಳ್ಳಲಿ. ಅದು ಬಿಟ್ಟು ಹಿಂದು ನಾಯಕ, ಹಿಂದು ಕಾರ್ಯಕರ್ತ ಎಂದು ಹೇಳಿಕೊಳ್ಳಲು ಇವರಿಗೆ ಅಧಿಕಾರ ಕೊಟ್ಟವರು ಯಾರು. ಇದಕ್ಕಾಗಿ ನಾವೊಂದು ಸಮಿತಿ ಮಾಡುತ್ತಿದ್ದೇವೆ. ಪ್ರತಿ ತಾಲೂಕಿನಲ್ಲಿ ಇದರ ಕಾರ್ಯಕ್ರಮ ಮಾಡುತ್ತೇವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸದಾಶಿವ ಉಳ್ಳಾಲ್, ಪದ್ಮರಾಜ್ ಆರ್ ಪೂಜಾರಿ, ಜಿ.ಎ ಬಾವ, ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಸಾಲಿಯಾನ್, ಶುಭೋದಯ ಆಳ್ವಾ, ಲಾರೆನ್ಸ್ ಡಿಸೋಜ, ಅನಿಲ್ ಪೂಜಾರಿ, ನೀರಜ್ ಪಾಲ್, ಮಹಮ್ಮದ್ ಅಲಿ ಪುತ್ತೂರು ಉಪಸ್ಥಿತರಿದ್ದರು
Mangalore Wearing Saffron Doesn’t Make One a Hindu Leader, Manjunath Bhandary Slams Rise of Criminal Elements in Coastal Communal Politics.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm