ಬ್ರೇಕಿಂಗ್ ನ್ಯೂಸ್
05-06-25 03:05 pm HK News Desk ಕರಾವಳಿ
ಮಂಗಳೂರು, ಜೂನ್ 5: ಅರ್ ಸಿಬಿ ರಾಜ್ಯದ ಅಥವಾ ರಾಷ್ಟ್ರದ ಟೀಂ ಅಲ್ಲ. ಯಾವುದೋ ಒಂದು ಭಾವನೆ ಮತ್ತು ಹರ್ಷೋದ್ಘಾರದಲ್ಲಿ ವಿಜಯೋತ್ಸವ ಮಾಡುವಾಗ ಘಟನೆ ನಡೆದಿದೆ. ಏನಾಗಿದೆ ಏನಾಗಿಲ್ಲ ಅನ್ನೋದನ್ನ ಮುಖ್ಯಮಂತ್ರಿಗಳು ಹೇಳಬೇಕಾಗುತ್ತದೆ. ಐಪಿಎಲ್ ನಡೆಸೋರು ಕರೋಡ್ ಪತಿಗಳಲ್ಲ, ಸಾವಿರಾರು ಕೋಟಿ ಮಾಲೀಕರು. ಪ್ರಾಣ ಕಳೆದುಕೊಂಡವರಿಗೆ ಬಿಸಿಸಿಐ ಕಡೆಯಿಂದ ಒಂದೊಂದು ಕೋಟಿ ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಈ ಬಗ್ಗೆ ಸರ್ಕಾರಕ್ಕೆ ಒತ್ತಡ ಮಾಡ್ತೀನಿ, ರಾಜ್ಯ ಸರ್ಕಾರದಿಂದಲೇ ಬಿಸಿಸಿಐನಿಂದ ಒಂದು ಕೋಟಿ ಕೊಡಿಸಬೇಕು. ಎಲ್ಲರೂ ದುಃಖದಲ್ಲಿದ್ದಾರೆ, ಹಾಗಾಗಿ ಏನೂ ಹೇಳಲು ಹೋಗಲ್ಲ. ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ದುಃಖ ತಡೆದುಕೊಳ್ಳಲು ಭಗವಂತ ಶಕ್ತಿ ಕೊಡಲಿ. ಸರ್ಕಾರ ಏನ್ ಮಾಡಿದೆ, ಏನ್ ಮಾಡಿಲ್ಲ ಅಂತ ನಾನು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಹೇಳಲು ಆಗಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು ಈ ಬಗ್ಗೆ ತಿಳುವಳಿಕೆ ಕೊಡಬೇಕು.
ಚಿನ್ನಸ್ವಾಮಿ ಕ್ರೀಡಾಂಗಣದ ಕೆಪಾಸಿಟಿ ಇರೋದು 35 ಸಾವಿರ ಜನ ಮಾತ್ರ. ಉಚಿತ ಅಂದ ತಕ್ಷಣ ಮೂರು ಲಕ್ಷ ಜನ ಅಲ್ಲಿಗೆ ಬಂದಿದಾರೆ. ಸಾವಿರಕ್ಕೆ ಒಂದು ಪೊಲೀಸ್ ನಮ್ಮಲ್ಲಿರೋದು, ಎಲ್ಲೋ ಒಂದು ಕಡೆ ಹೆಚ್ಚು ಕಮ್ಮಿ ಆಗಿದೆ. ಸಾವು ಹೊರಗಡೆ ಆದಾಗ ಒಳಗಡೆ ಸೆಲೆಬ್ರೇಷನ್ ನಿಲ್ಲಿಸಬೇಕಾಗಿತ್ತು. ಅಭಿಮಾನಿಗಳು ಬರೋವಾಗ ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಯೋಚನೆ ಮಾಡಬೇಕಾಗಿತ್ತು.
ಹೈಕೋರ್ಟ್ ಗೆ ಸುಮೊಟೋ ಕೇಸ್ ಮಾಡುವ ಎಲ್ಲಾ ಹಕ್ಕಿದೆ, ಅದೇ ಥರ ಎಲ್ಲದರಲ್ಲೂ ಮಾಡಿದರೆ ಒಳ್ಳೆಯದು. ಹನ್ನೊಂದು ಜನರ ಸಾವಿಗೆ ಯಾರು ಹೊಣೆ ಅಂತ ಸರ್ಕಾರ ಹೇಳಬೇಕು. ಇದು ಸರ್ಕಾರ ನಡೆಸಿರೋ ಕ್ರಿಕೆಟ್ ಅಲ್ಲ. ವಿಧಾನಸೌಧ ಬಳಿ ಯಾವುದೇ ಘಟನೆ ಆಗಿಲ್ಲ. ಇನ್ಜು ಸ್ಟೇಡಿಯಂನವರು ಕಾರ್ಯಕ್ರಮ ನಡೆಸುವಾಗ ಸ್ವಲ್ಪ ಯೋಚನೆ ಮಾಡಿ ನಡೆಸಬೇಕಿತ್ತು. ಅಮಾಯಕರು, ಯುವಕರು, ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಹೊಣೆ ಹೊರಬೇಕು ಎಂದು ಹೇಳಿದರು.
B K Hariprasad in Mangalore Demands Rs 1 Crore Compensation from BCCI for Each Victim of IPL Celebration Tragedy
22-07-26 06:00 pm
HK News Staffer
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
22-07-26 02:32 pm
HK News Staffer
ನೀಟ್ ಅಕ್ರಮ; ಮೋದಿ ರಾಜಿನಾಮೆ ಒತ್ತಾಯಿಸಿ ಪ್ರಧಾನಿ ನ...
21-07-26 09:03 pm
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
22-07-26 09:18 pm
HK News Desk
2,000 ರೂ. ಆಸೆಗೆ ಬಿದ್ದು ಬ್ಯಾಂಕ್ ಅಕೌಂಟ್ ಹಸ್ತಾಂತ...
21-07-26 11:02 pm
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
22-07-26 10:24 pm
HK News Desk
ಎಸ್ಐಆರ್ ಪರಿಷ್ಕರಣೆ ನೆಪದಲ್ಲಿ ಎಪಿಕೆ ಫೈಲ್ ಕಳುಹಿಸಿ...
22-07-26 09:03 pm
ಬಂಟ್ವಾಳ ; ಮಳೆ-ಗಾಳಿಗೆ ಶಾಲಾ ಬಸ್ಸಿಗೆ ಉರುಳಿ ಬಿದ್ದ...
22-07-26 07:37 pm
Mysuru Murder, Suicide: ನಾನಿಲ್ಲದೆ ನನ್ನ ಹೆಂಡತಿ...
22-07-26 04:21 pm
ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ವ್ಯಕ್ತಿಯಿಂದ ಕಳ್ಳತ...
22-07-26 10:55 am