ಬ್ರೇಕಿಂಗ್ ನ್ಯೂಸ್
07-06-25 09:15 pm Mangalore Correspondent ಕರಾವಳಿ
ಮಂಗಳೂರು, ಜೂನ್ 7 : ಆರ್ ಸಿಬಿ ವಿಜಯೋತ್ಸವ ಸಂದರ್ಭ ಕಾಲ್ತುಳಿತ ಆಗುತ್ತಿದ್ದಾಗ ರಾಜ್ಯದ ಮುಖ್ಯಮಂತ್ರಿಯಾದವರು ದೋಸೆ ತಿನ್ನುತ್ತಿದ್ದರು ಅನ್ನುವ ಸುದ್ದಿ ಸತ್ಯವೇ ಆಗಿದ್ದರೆ, ದುರಂತದಲ್ಲಿ ಮಕ್ಕಳನ್ನು ಕಳಕೊಂಡ ಕುಟುಂಬದ ಶಾಪ ತಟ್ಟುತ್ತದೆ. ದೇವರು ಕೂಡ ಕ್ಷಮಿಸಲಿಕ್ಕಿಲ್ಲ. ಆದರೆ ಆ ರೀತಿ ಆಗಿರಲಿಕ್ಕಿಲ್ಲ ಎಂದು ಭಾವಿಸುತ್ತೇನೆ ಎಂಬುದಾಗಿ ಬಿಜೆಪಿ ಮುಖಂಡ ಸಿಟಿ ರವಿ ಹೇಳಿದ್ದಾರೆ.
ಬೆಂಗಳೂರಿನ ಕಾಲ್ತುಳಿತ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ದೋಸೆ ಸವಿಯುತ್ತಿದ್ದರು ಎನ್ನುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಸಿಟಿ ರವಿ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಯಾರೇ ಆಗಲಿ, ಇಂಥ ದುರಂತ ಆಗಿದ್ದಾಗ ದೋಸೆ ಸವಿಯುವಂಥ ಕೆಲಸ ಮಾನವೀಯತೆ ಇದ್ದವರು ಮಾಡಲಿಕ್ಕಿಲ್ಲ. ಅದು ಸತ್ಯವೇ ಆಗಿದ್ದರೆ ಇದಕ್ಕೂ ಆಫ್ರಿಕಾದಲ್ಲಿ ಮಕ್ಕಳ ಮೆದುಳನ್ನು ತಿನ್ನುವ ಇದಿ ಅಮೀನ್ ಗೂ ವ್ಯತ್ಯಾಸ ಇಲ್ಲ ಎಂದು ಟೀಕಿಸಿದ್ದಾರೆ.
ಆರ್ ಸಿಬಿ ಗೆಲುವಿನ ವಿಜಯೋತ್ಸವ ಆಚರಿಸಲು ಅದರ ಮಾಲೀಕರು ಕರ್ನಾಟಕದವರಾ. ಸಿಎಂ ಅಥವಾ ಅವರ ಕಡೆಯವರು ಇದರಲ್ಲಿ ಸೀಕ್ರೆಟ್ ಇನ್ವೆಸ್ಟ್ ಮಾಡಿದ್ದಾರೆಯೇ.. ಎಂದು ಪ್ರಶ್ನಿಸಿದ ಸಿಟಿ ರವಿ, ಅಷ್ಟು ತರಾತುರಿಯಲ್ಲಿ ವಿಜಯೋತ್ಸವ ಮಾಡುವುದಕ್ಕೇನು ದರ್ದು ಇತ್ತು. ಇವರ ಬೇಜಾವಾಬ್ದಾರಿ ತೋರಿಸದೇ ಇರುತ್ತಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವ ಸ್ಥಿತಿ ಬರುತ್ತಿತ್ತಾ.. ಹೊರಗಡೆ ಜೀವ ಹೋಗುತ್ತಾ ಇದ್ರೂ ಡಿಸಿಎಂ ಟ್ರೋಫಿ ಎತ್ತಿ ಕುಣೀತಾ ಇದ್ರಲ್ವಾ.. ಈ ಘಟನೆಗೆ ಯಾರು ರೆಸ್ಪಾನ್ಸಿಬಲ್. ಕಾಲ್ತುಳಿತ ಆದಾಗ ಗಾಯಾಳುಗಳನ್ನು ಪೊಲೀಸರು ಕೈಯಲ್ಲಿ ಎತ್ಕೊಂಡು ಹೋಗುವ ಸ್ಥಿತಿಯಾಗಿತ್ತಲ್ವೇ.. ಆಂಬುಲೆನ್ಸ್ ಇಟ್ಕೊಳ್ಳೋಕೂ ಯೋಗ್ಯತೆ ಇರಲಿಲ್ವಾ ಎಂದರು.
ಪೊಲೀಸ್ ಅಧಿಕಾರಿಗಳನ್ನು ಕಾರಣಕರ್ತರೆಂದು ಸಸ್ಪೆಂಡ್ ಮಾಡಿದ್ದೀರಿ. ಆರ್ ಸಿಬಿ ಗೆಲುವಿನ ವಿಜಯೋತ್ಸವ ಆಯೋಜಿಸಿದ್ದು ಕಮಿಷನರ್ ದಯಾನಂದ್. ಒಟ್ಟು ಕಾರ್ಯಕ್ರಮವನ್ನು ಅವರೇ ಮಾಡಿದ್ರು ಅಂತ ಹೊಣೆ ಎಲ್ಲ ಅವರ ತಲೆಗೆ ಕಟ್ಟಿದಂತೆ ಸಿಎಂ, ಡಿಸಿಎಂ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
Siddaramaiah, DK Shivakumar Must Take Responsibility for RCB Stampede, Not Blame Police, CT Ravi.
08-09-25 06:48 pm
Bangalore Correspondent
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
Fine, Violation, Home Minister: ಮುಖ್ಯಸ್ಥರಿಗೂ...
07-09-25 10:17 am
08-09-25 06:07 pm
HK News Desk
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm