ಬ್ರೇಕಿಂಗ್ ನ್ಯೂಸ್
11-06-25 01:34 pm Mangalore Correspondent ಕರಾವಳಿ
ಮಂಗಳೂರು, ಜೂನ್ 11 : ಈ ಸಲ ಮಳೆಯಿಂದಾಗಿ ಶಾಲಾರಂಭ ಆಗಿದ್ದೇ ನಾಲ್ಕು ದಿನಗಳ ಬಳಿಕ. ಆದರೆ ಇಲ್ಲೊಂದು ಶಾಲೆಗೆ ಶಾಲಾರಂಭದ ಭಾಗ್ಯವೇ ಒದಗಿಬಂದಿಲ್ಲ. ಕಟ್ಟಡ ನಿರ್ಮಾಣ ಕಾರ್ಯ ಮುಗಿದ ಬಳಿಕ ಶಾಲೆಗೆ ಬನ್ನಿ ಎಂದು ರಜೆ ಕೊಟ್ಟು ಮಕ್ಕಳನ್ನು ಮನೆಗೆ ಕಳುಹಿಸಲಾಗಿದ್ದು ಹೆತ್ತವರು ಟೆನ್ಷನ್ ಗೆ ಸಿಲುಕಿದ್ದಾರೆ. ಇದು ಉಳ್ಳಾಲ ತಾಲೂಕಿನ ಬೋಳಿಯಾರ್ ಗ್ರಾಮದ ಮೌಲಾನಾ ಆಝಾದ್ ಮಾದರಿ ಶಾಲೆಯ (ಆಂಗ್ಲ ಮಾಧ್ಯಮ) ಕಥೆ!
ರಾಜ್ಯ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಬೋಳಿಯಾರ್ ಗ್ರಾಮದ ಜಾರದಗುಡ್ಡದಲ್ಲಿ ಮೌಲಾನಾ ಆಝಾದ್ ಮಾದರಿ ಶಾಲೆ(ಆಂಗ್ಲ ಮಾಧ್ಯಮ) ಕಳೆದ ವರ್ಷ ಆರಂಭಿಸಲಾಗಿತ್ತು. ಇಲ್ಲಿ 6ರಿಂದ 10ನೇ ತರಗತಿಯ ವರೆಗೆ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ. ಬೋಳಿಯಾರ್ ಗ್ರಾಮದಲ್ಲಿ ಸೂಕ್ತ ಸರ್ಕಾರಿ ಜಮೀನಿನ ಕೊರತೆಯಿದ್ದ ಹಿನ್ನೆಲೆಯಲ್ಲಿ ಜಾರದಗುಡ್ಡ ಮಸೀದಿಯ ಅಧೀನದಲ್ಲಿದ್ದ ಜಮೀನಿನಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಕಟ್ಟಡ ನಿರ್ಮಾಣ ಕೆಲಸ ಆರಂಭಿಸಿದ್ದು ನಿರ್ಮಿತಿ ಕೇಂದ್ರದಿಂದ ಗುತ್ತಿಗೆ ಪಡೆದು ಉಪ ಗುತ್ತಿಗೆಗೆ ನೀಡಲಾಗಿತ್ತು. ಕಳೆದ ವರ್ಷ ಆರನೇ ತರಗತಿಗೆ ಪ್ರವೇಶ ಆರಂಭಿಸಿದಾಗ ಸ್ಥಳೀಯ ಹತ್ತು ಮಕ್ಕಳು ಸೇರ್ಪಡೆಗೊಂಡಿದ್ದರು.
ಆಶ್ರಯ ನೀಡಿದ್ದ ಸರ್ಕಾರಿ ಶಾಲೆಯಲ್ಲೂ ಸಮಸ್ಯೆ!
ಕಳೆದ ವರ್ಷ ಆರನೇ ತರಗತಿಗೆ ಹತ್ತು ಮಕ್ಕಳು ಪ್ರವೇಶ ಪಡೆದರೂ ವ್ಯವಸ್ಥೆ ಆಗಿರದ ಕಾರಣ ಸನಿಹದಲ್ಲೇ ಇರುವ ಸರ್ಕಾರಿ ಶಾಲೆಯ ಒಂದು ಕಟ್ಟಡದಲ್ಲಿ ತರಗತಿ ನಡೆಸಲಾಗಿತ್ತು. ಈ ವರ್ಷ ಕಟ್ಟಡ ಕಾಮಗಾರಿ ಮುಗಿಯಲಿದೆ ಎನ್ನುವ ನೆಲೆಯಲ್ಲಿ ಆರನೇ ತರಗತಿ ಜೊತೆ ಏಳು ಮತ್ತು ಎಂಟನೇ ತರಗತಿಗೂ ಪ್ರವೇಶ ನೀಡುವ ನಿಟ್ಟಿನಲ್ಲಿ ಇಲಾಖೆಯಿಂದ ವಿವಿಧ ಕಡೆಗಳಲ್ಲಿ ಫ್ಲೆಕ್ಸ್ ಅಳವಡಿಸಿ ಪ್ರಚಾರ ಮಾಡಲಾಗಿತ್ತು. ಇದರ ಫಲವಾಗಿ ಈ ವರ್ಷ ಮೂರು ತರಗತಿಗಳಿಗೆ 70 ಮಕ್ಕಳು ಸೇರ್ಪಡೆಗೊಂಡಿದ್ದಾರೆ.
ಆದರೆ ಕಟ್ಟಡ ಕಾಮಗಾರಿ ಆಮೆ ನಡಿಗೆಯಲ್ಲಿ ಸಾಗಿದೆ. ಇನ್ನೂ ಒಂದು ಮಹಡಿಯ ಕಟ್ಟಡ ಆಗಿದ್ದು ತಳ ಅಂತಸ್ತಿನಲ್ಲಿ ಮತ್ತು ಮೊದಲ ಅಂತಸ್ತಿನಲ್ಲಿ ತಲಾ ನಾಲ್ಕು ಕೊಠಡಿಗಳು ನಿರ್ಮಾಣ ಆಗುತ್ತಿದೆ. ಜೊತೆಗೆ ಅಡುಗೆ ಕೋಣೆ, ಶೌಚಗೃಹ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಈ ವರ್ಷವೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸರ್ಕಾರಿ ಶಾಲೆಯಲ್ಲೆ ತರಗತಿಗಳನ್ನು ನಡೆಸಲು ಯೋಚಿಸಲಾಗಿತ್ತು. ಆದರೆ ಈ ಶಾಲೆ ಹೆಂಚಿನದ್ದಾಗಿದ್ದು ಶಿಥಿಲಾವಸ್ಥೆಯಲ್ಲಿದೆ. ಮಳೆ ಬಂದಾಗ ಸೋರುತ್ತಿದೆ. ಅಲ್ಲದೆ, 70 ಮಕ್ಕಳಿಗೆ ಊಟೋಪಚಾರದ ವ್ಯವಸ್ಥೆ ಮಾಡಲು ವ್ಯವಸ್ಥೆ ಇಲ್ಲದ ಕಾರಣ ತರಗತಿಗಳನ್ನು ನಡೆಸಲು ಸಾಧ್ಯವಾಗದೆ ಮಕ್ಕಳಿಗೆ 15 ದಿನ ರಜೆ ನೀಡಿ ಮನೆಗೆ ಕಳಿಸಲಾಗಿದೆ. ಎಲ್ಲಾ ಕಡೆ ಶಾಲಾರಂಭಗೊಂಡರೂ ಮೌಲಾನಾ ಆಝಾದ್ ಮಾದರಿ ಶಾಲೆ ಆರಂಭಗೊಳ್ಳದ ಕಾರಣ ಮಕ್ಕಳ ಭವಿಷ್ಯ ಅತಂತ್ರವಾಗಿದ್ದು ಪೋಷಕರು ಚಿಂತಿತರಾಗಿದ್ದಾರೆ.
ಒಬ್ಬೊಬ್ಬರದ್ದು ಒಂದೊಂದು ಭರವಸೆ!
ಶಾಲಾರಂಭದ ಬಗ್ಗೆ ಪೋಷಕರು ಕೇಳುವ ಪ್ರಶ್ನೆಗಳಿಗೆ ಒಬ್ಬೊಬ್ಬರು ಒಂದೊಂದು ರೀತಿಯ ಭರವಸೆ ನೀಡುತ್ತಿದ್ದಾರೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್, ನಾಲ್ಕೈದು ದಿನಗಳಲ್ಲಿ ಶಾಲೆ ಆರಂಭಿಸುವುದಾಗಿ ತಿಳಿಸಿದ್ದಾರೆ. ಗುತ್ತಿಗೆ ಸಂಸ್ಥೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ, ಗುತ್ತಿಗೆದಾರ ಸರಿಯಾಗಿ ಕೆಲಸ ಮಾಡಿದರೆ ಒಂದೂವರೆ ತಿಂಗಳಲ್ಲಿ ಕೆಲಸ ಮುಗಿಯಲಿದೆ ಎಂದು ಗುತ್ತಿಗೆದಾರನತ್ತ ಬೆರಳು ತೋರಿಸಿದ್ದಾರೆ.
ಹೀಗಿದ್ದರೂ, ಕಟ್ಟಡ ಕಾಮಗಾರಿ ಮುಗಿಸಿ ಜೂನ್ 15ರ ವೇಳೆಗೆ ಶಾಲೆ ಆರಂಭಿಸುತ್ತೇವೆಂದು ಅಧಿಕಾರಿ ವರ್ಗ ಹೇಳುತ್ತಿದ್ದಾರೆ. ಆದರೆ ಕಾಮಗಾರಿ ನೋಡಿದಾಗ ತಳ ಅಂತಸ್ತಿನಲ್ಲೇ ಅರೆಬರೆ ಕಾಮಗಾರಿ ನಡೆದಿದೆ. ಕಿಟಕಿ, ಬಾಗಿಲು ಅಳವಡಿಸಿಲ್ಲ. ನೆಲಕ್ಕೆ ಅರೆಬರೆ ಟೈಲ್ಸ್ ಹಾಕಲಾಗಿದೆ, ವಿದ್ಯುತ್ ಸಂಬಂಧಿತ ಕೆಲಸ ಆಗಿಲ್ಲ, ಅಡುಗೆ ಕೋಣೆ, ಶೌಚಗೃಹ ಕೆಲಸವೂ ಅರ್ಧದಲ್ಲಿದೆ. ಇದರಿಂದಾಗಿ ಪೋಷಕರು ಭರವಸೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ವಿಳಂಬದ ಬಗ್ಗೆ ಈಗಾಗಲೇ ನಿರ್ಮಿತಿ ಕೇಂದ್ರದ ಇಂಜಿನಿಯರ್ ರನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದ್ದು ಜೂನ್ 15ಕ್ಕೆ ಮೊದಲು ಬಿಟ್ಟು ಕೊಡುವಂತೆ ಹೇಳಿದ್ದೇವೆ. ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ದೂರು ನೀಡಲಾಗುವುದು ಎಂದು ತಾಪಂ ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್ ಬೋಳಿಯಾರ್ ಹೇಳಿದ್ದಾರೆ.
While schools across Karnataka reopened last week, students of the Maulana Azad Model School (English Medium) in Boliyaar village, Ullal taluk, are still waiting for classes to begin. Owing to incomplete construction of the school building, the management has granted leave to the students, triggering concern among parents about their children's disrupted education
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm