ಬ್ರೇಕಿಂಗ್ ನ್ಯೂಸ್
23-06-25 06:07 pm Mangalore Correspondent ಕರಾವಳಿ
ಮಂಗಳೂರು, ಜೂನ್ 23 : ಇತ್ತೀಚೆಗೆ ಮಂಗಳೂರಿನಲ್ಲಿ ಕೋಮು ದ್ವೇಷಕ್ಕೆ ಕಾರಣವಾದ ಸುಹಾಸ್ ಶೆಟ್ಟಿ ಮತ್ತು ಅಶ್ರಫ್ ಕೊಲೆ ಪ್ರಕರಣದಲ್ಲಿ ಬಹಳಷ್ಟು ಜನರು ಆರೋಪಿಗಳ ಬಂಧನದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಅವರನ್ನು ಯಾಕೆ ಬಂಧಿಸಿಲ್ಲ, ಇವರನ್ನು ಯಾಕೆ ಬಂಧನ ಮಾಡಿದ್ದೀರಿ ಎಂಬ ಪ್ರಶ್ನೆಗಳನ್ನು ಮಾಡುತ್ತಾರೆ. ಯಾರನ್ನು ಬಂಧಿಸುವುದಕ್ಕೂ ಸಾಕ್ಷ್ಯಾಧಾರಗಳು ಬೇಕಾಗುತ್ತವೆ. ಆರೋಪಿ ಕೃತ್ಯ ಎಸಗಿದ್ದಕ್ಕೆ ಅಥವಾ ಸಹಕಾರ ನೀಡಿದ್ದಕ್ಕೆ ಏನಾದರರೂ ಸಾಕ್ಷ್ಯಗಳಿದ್ದರೆ ಬಂಧನ ಮಾಡುತ್ತೇವೆ. ಯಾರೋ ಹೇಳಿದ್ರು ಅಂದ ಕೂಡಲೇ ಇನ್ಯಾರನ್ನೋ ಬಂಧನ ಮಾಡುವುದಕ್ಕಾಗಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಕಮಿಷನರ್ ಕಚೇರಿಯಲ್ಲಿ ಪತ್ರಕರ್ತರನ್ನು ಕರೆದು ಸಂವಾದ ರೂಪದಲ್ಲಿ ಗೋಷ್ಟಿ ನಡೆಸಿದ ಪೊಲೀಸ್ ಕಮಿಷನರ್, ಎರಡೂ ಪ್ರಕರಣದಲ್ಲಿ ಸಾಂದರ್ಭಿಕ ಸಾಕ್ಷ್ಯಗಳ ಫೋಟೋ, ವಿಡಿಯೋ ಮತ್ತು ಆಡಿಯೋಗಳನ್ನು ಪ್ರದರ್ಶಿಸಿ ನಾವು ಕಾನೂನು ಪ್ರಕಾರ ಕೆಲಸ ಮಾಡುತ್ತೇವೆ. ಅಶ್ರಫ್ ಪ್ರಕರಣದಲ್ಲಿ ಇಬ್ಬರಿಗೆ ಜಾಮೀನು ಸಿಗ್ತು ಅಂದ ಕೂಡಲೇ ಅಲ್ಲಿ ಪೊಲೀಸರು ಸೆಟ್ಟಿಂಗ್ ಮಾಡಿದ್ದಾರೆ ಅಂತ ಭಾವಿಸಿ ಆರೋಪ ಮಾಡುವುದಲ್ಲ. ಖಚಿತ ಸಾಕ್ಷ್ಯಗಳಿದ್ದರೆ ಶಿಕ್ಷೆ ಖಚಿತವಾಗುತ್ತದೆ. ಅದಕ್ಕಾಗಿ ಸಾರ್ವಜನಿಕರಲ್ಲಿ ಯಾರಲ್ಲಾದ್ರೂ ಸಾಕ್ಷ್ಯಗಳಿದ್ದರೆ ತಂದುಕೊಡಿ. ಅಥವಾ ಒಬ್ಬರ ಬಗ್ಗೆ ಸಂಶಯ ಪಡುವುದಿದ್ದರೂ ಆಧಾರಗಳಿದ್ದರೆ ಅದನ್ನು ಹಾಜರುಪಡಿಸಿ. ಇನ್ನೆರಡು ದಿನ ನೀವು ಕೊಡುವ ಸಾಕ್ಷ್ಯಗಳಿಗಾಗಿಯೇ ಕಾದಿರುತ್ತೇನೆ ಎಂದು ಹೇಳಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆ ಘಟನೆ ನಡೆದಾಗ ಎರಡು ಕಡೆ ಅಪಘಾತಗಳಾಗಿದ್ದವು. ಮೊದಲೊಂದು ಅಪಘಾತವಾದ ಸಂದರ್ಭದಲ್ಲಿ ಅದನ್ನು ನೋಡಲು ಜನರು ಸೇರಿದ್ದರು. ಅದೇ ಸಂದರ್ಭದಲ್ಲಿ ಪಕ್ಕದಲ್ಲಿ ಸುಹಾಸ್ ಶೆಟ್ಟಿ ಕಾರಿಗೆ ತಾಗಿಸಿ ಕೊಲೆ ಕೃತ್ಯ ಮಾಡಲಾಗಿತ್ತು. ಅದರ ಮಾತ್ರಕ್ಕೆ ಅಲ್ಲಿ ಸೇರಿದ್ದವರೆಲ್ಲ ಸುಹಾಸ್ ಶೆಟ್ಟಿ ಕೊಲೆ ಕೃತ್ಯಕ್ಕಾಗಿ ಸೇರಿದವರು ಅಂತ ಭಾವಿಸುವುದು ತಪ್ಪಾಗುತ್ತದೆ. ಕೊಲೆ ಕೃತ್ಯದ ಸಂದರ್ಭದಲ್ಲಿ ಅಲ್ಲಿದ್ದ ಬುರ್ಖಾ ಧರಿಸಿದವರಿದ್ದರನ್ನು ಯಾಕೆ ಬಂಧಿಸಿಲ್ಲ ಎನ್ನುವ ಪ್ರಶ್ನೆಯೂ ಬಂದಿದೆ. ನಾವು ಎಲ್ಲ ಆಯಾಮಗಳಿಂದಲೂ ತನಿಖೆ ಮಾಡುತ್ತಿದ್ದೇವೆ, ಬುರ್ಖಾಧಾರಿಗಳಿಗೂ ಆರೋಪಿಗಳಿಗೂ ಏನು ಸಂಬಂಧ ಅಂತ ನೋಡುತ್ತೇವೆ, ಎನ್ಐಎ ಬಂದರೂ ಅದನ್ನೇ ಮಾಡೋದು ಎಂದರು.
ರವೀಂದ್ರ ಅಲ್ಲಿ ಇದ್ದ, ಅಂದ ಮಾತ್ರಕ್ಕೆ...
ಅಶ್ರಫ್ ಕೊಲೆ ಪ್ರಕರಣದಲ್ಲಿ ಕಾರ್ಪೊರೇಟರ್ ಒಬ್ಬರ ಪತಿ ರವೀಂದ್ರ ನಾಯಕ್ ಎಂಬವರು ಶಾಮೀಲಾಗಿದ್ದರು ಎಂದು ಕೆಲವರು ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಅವರನ್ನು ಕರೆದು ಸಾಕ್ಷ್ಯಗಳಿದ್ದರೆ ಒಪ್ಪಿಸಿ ಎಂದರೆ ಅವರಲ್ಲಿ ಇಲ್ಲ. ಪೊಲೀಸರ ಬಗ್ಗೆ ಸಂಶಯಪಟ್ಟು ಪೋಸ್ಟ್ ಗಳನ್ನು ಹಾಕುತ್ತಾರೆ, ಸಾಕ್ಷ್ಯ ಏನಾದ್ರೂ ಇದೆಯಾ ಎಂದು ಕೇಳಿದರೆ ಪೊಲೀಸರು ಕಿರುಕುಳ ಕೊಟ್ಟರು ಅಂತ ಆರೋಪಿಸುತ್ತಾರೆ. ಪೊಲೀಸರ ಕೆಲಸವನ್ನು ನೀವು ಮಾಡುವುದಾದರೆ ನಾವು ಯಾಕಿರೋದು. ನೀವು ಪೊಲೀಸ್ ಕೆಲಸ ಮಾಡುವುದು ಬೇಡ. ಯಾರೇ ಆರೋಪಿಗಳಿದ್ದರೂ ಬಂಧನ ಮಾಡುತ್ತೇವೆ, ನೀವು ಸಾಕ್ಷ್ಯ ತಂದುಕೊಡಿ. ನಾವು ಪ್ರಕರಣದಲ್ಲಿ 110 ಮಂದಿಯನ್ನು ವಿಚಾರಣೆ ಮಾಡಿದ್ದೇವೆ. ಯಾರು ಕೂಡ ರವೀಂದ್ರ ನಾಯಕ್ ಹಲ್ಲೆ ಕೃತ್ಯದಲ್ಲಿ ಭಾಗಿಯಾಗಿದ್ದನ್ನು ಹೇಳಿಲ್ಲ. ಸ್ಥಳದಲ್ಲಿ ಇದ್ದ ಎಂಬುದನ್ನು ಹೇಳಿದ್ದಾರೆ. ಅಲ್ಲಿದ್ದ ಎಲ್ಲರ ಫೋನ್ ಡಿಟೇಲ್ಸ್ ಸಂಗ್ರಹಿಸಿದ್ದೇವೆ. ಯಾರು ಕೃತ್ಯದಲ್ಲಿ ನೇರ ಭಾಗಿಯಾಗಿದ್ದಾರೆ ಅವರನ್ನು ಬಂಧಿಸಿದ್ದೇವೆ. ಸಹಕಾರ ಯಾರು ನೀಡಿದ್ದಾರೆ, ಪ್ರಕರಣ ದಿಕ್ಕು ತಪ್ಪಿಸಲು ಯಾರು ಪ್ರಯತ್ನಿಸಿದ್ದಾರೆ ಎನ್ನುವ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ರವೀಂದ್ರ ಸಿಕ್ಕಿಲ್ಲ, ಸಿಕ್ಕಿದ ಕೂಡಲೇ ವಶಕ್ಕೆ ಪಡೆಯುತ್ತೇವೆ ಎಂದಿದ್ದಾರೆ.
ಸಜಿತ್ ಶೆಟ್ಟಿ ಎಂಬ ಕಾಂಗ್ರೆಸ್ ಕಾರ್ಯಕರ್ತ ಫೇಸ್ಬುಕ್ ನಲ್ಲಿ ತನಗೆ ಪೊಲೀಸರು ಮಾನಸಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ, ಆತ ಏನಾದ್ರೂ ಪೊಲೀಸರು ಹೊಡೆದಿದ್ದಾರೆ ಅಂತ ಹೇಳಿದ್ದಾನೆಯೇ. ನೀವು ಸರಿಯಾಗಿ ಆತನ ವಿಡಿಯೋ ಕೇಳಿಸಿಕೊಳ್ಳಿ. ನಾವು ವಿಚಾರಣೆ ಮಾಡಿದ್ದೇವೆ, ಯಾರನ್ನು ಬೇಕಾದ್ರೂ ವಿಚಾರಣೆ ಮಾಡಬಹುದು. ಹಲವರು ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಅವರಿಗೆಲ್ಲ ನೋಟೀಸ್ ನೀಡಿದ್ದು, ವಿಚಾರಣೆಗೆ ಬರದಿದ್ದರೆ ಎಳೆದು ತರುವುದಕ್ಕೆ ಗೊತ್ತಿದೆ ಎಂದರು.
ಹಿಂದಿನ ಪೊಲೀಸ್ ಕಮಿಷನರ್ ರವೀಂದ್ರ ನಾಯಕ್ ಬಗ್ಗೆ ಹೇಳಿದ್ದಾರೆ ಎಂಬ ಪ್ರಶ್ನೆ ಬಂದಿದ್ದಕ್ಕೆ, ಅವರು ಹೇಳಿರುವ ವಿಡಿಯೋವನ್ನು ಪ್ರಸಾರ ಮಾಡಿದ ಕಮಿಷನರ್, ಇಲ್ಲಿ ಏನು ಹೇಳಿದ್ದಾರೆ ಕೇಳಿಸಿಕೊಳ್ಳಿ. ಪಾತ್ರದ ಬಗ್ಗೆ ತನಿಖೆ ಮಾಡುತ್ತೇವೆ ಎಂದಿದ್ದಾರೆ. ನಾವು ಕೂಡ ಅದನ್ನು ಮಾಡುತ್ತಿದ್ದೇವೆ ಎಂದರು. ದ್ವೇಷ ಭಾಷಣದ ಬಗ್ಗೆ ಪ್ರಸ್ತಾಪಿಸಿದ ಕಮಿಷನರನ್, ದ್ವೇಷ ಭಾಷಣಕ್ಕೆ ಜಾಮೀನು ನೀಡಬಹುದು, ಅಗತ್ಯ ಬಿದ್ದರೆ ವಶಕ್ಕೆ ಪಡೆಯಬಹುದು. ಅದು ತನಿಖಾಧಿಕಾರಿಗೆ ಬಿಟ್ಟದ್ದು. ಪದೇ ಪದೇ ಅಂತಹ ಭಾಷಣ ಮಾಡಿದರೆ ಜಡ್ಜ್ ಜಾಮೀನು ನೀಡದೆ ಇರಬಹುದು. ಕಾನೂನು ಹೇಗೆ ಬಳಸಿಕೊಳ್ಳಬೇಕೆಂದು ಗೊತ್ತಿದೆ. ವೇದಿಕೆಯಲ್ಲಿ ನಿಂತು ಪ್ರಚೋದನೆ ಮಾಡಿದರೆ ಅಲ್ಲಿಂದಲೇ ಎಳೆದು ತರುವುದಕ್ಕೂ ಗೊತ್ತಿದೆ ಎಂದರು.
In response to rising public criticism and social media speculation regarding the recent murders of Suhas Shetty and Ashraf in Mangaluru, Police Commissioner Sudheer Reddy has made a strong appeal for responsible action and urged people to provide concrete evidence before demanding arrests. Speaking at an interactive press meet held at the Commissioner’s office, Reddy clarified that arrests in criminal cases must be based on credible evidence and not social media posts or public sentiment.
22-06-25 07:52 pm
HK News Desk
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
24-06-25 01:02 am
HK News Desk
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
Yoga Haram Muslims; ಯೋಗವನ್ನು ಒಪ್ಪುತ್ತೇವೆ, ಸೂರ...
22-06-25 04:57 pm
23-06-25 11:01 pm
Mangalore Correspondent
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
Journalist Vijay Kotian, Brand Mangalore Awar...
23-06-25 09:48 pm
Mangalore, Lokayukta Raid, MCC: ಮಂಗಳೂರು ಪಾಲಿಕ...
23-06-25 06:56 pm
Sudheer Kumar Reddy, Mangalore; ಸಾಕ್ಷ್ಯಗಳಿದ್ದ...
23-06-25 06:07 pm
23-06-25 08:51 pm
HK News Desk
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm