ಬ್ರೇಕಿಂಗ್ ನ್ಯೂಸ್
            
                        04-07-25 11:46 am Mangalore Correspondent ಕರಾವಳಿ
            ಉಳ್ಳಾಲ, ಜು.4 : ಕುಡಿದ ಮತ್ತಿನಲ್ಲಿ ಮನೆಗೆ ಬಂದು ತಂದೆ ಮತ್ತು ಸಹೋದರನಲ್ಲಿ ಗಲಾಟೆ ಮಾಡಿದ ವ್ಯಕ್ತಿಯೋರ್ವ ಮನೆಯ ಬಾಲ್ಕನಿಗೆ ಅಳವಡಿಸಿದ್ದ ಅಲ್ಯುಮಿನಿಯಮ್ ಗಾಜಿಗೆ ಆವೇಶದಿಂದ ಕೈಯನ್ನ ಬಡಿದ ಪರಿಣಾಮ ರಕ್ತಸ್ರಾವದಿಂದ ಸಾವನ್ನಪ್ಪಿದ ಘಟನೆ ನಿನ್ನೆ ರಾತ್ರಿ ಉಳ್ಳಾಲ ಠಾಣೆ ವ್ಯಾಪ್ತಿಯ ಮಾಡೂರು ಅರಸುನಗರ ಎಂಬಲ್ಲಿ ನಡೆದಿದೆ.
ಮಾಡೂರು ಅರಸುನಗರ ನಿವಾಸಿ ನಿತೇಶ್ ನಾಯಕ್(36) ಸಾವನ್ನಪ್ಪಿದ ವ್ಯಕ್ತಿ. ನಿತೇಶ್ ಅವರು ತಂದೆ ಸತೀಶ್ ನಾಯಕ್ ಮತ್ತು ಸಹೋದರ ದುರ್ಗೇಶ್ ಜೊತೆ ಮಾಡೂರು ಅರಸುನಗರದಲ್ಲಿ ವಾಸವಾಗಿದ್ದು ತಂದೆ ಮಕ್ಕಳು ಕರಿದ ತಿಂಡಿ ತಿನಿಸುಗಳನ್ನ ತಯಾರಿಸಿ ಅಂಗಡಿಗಳಿಗೆ ವಿತರಿಸುವ ಉದ್ಯಮ ನಡೆಸುತ್ತಿದ್ದರು.

ನಿತೇಶ್ ಅವರಿಗೆ ಮದುವೆಯಾಗಿದ್ದು 2023 ರಲ್ಲಿ ಪತ್ನಿಯಿಂದ ವಿಚ್ಚೇದನ ಪಡಿದಿದ್ದರು ಎನ್ನಲಾಗಿದೆ. ನಿತೇಶ್ ನಿತ್ಯವೂ ಮದ್ಯಪಾನ ಮಾಡಿ ಬಂದು ಮನೆಯಲ್ಲಿ ತಂದೆ ಮತ್ತು ಅಣ್ಣನಲ್ಲಿ ಗಲಾಟೆ ನಡೆಸಿ ಕಿಟಕಿಗಳ ಗಾಜನ್ನು ಪುಡಿ ಮಾಡುತ್ತಿದ್ದರಂತೆ. ನಿನ್ನೆ ರಾತ್ರಿಯೂ ಸುಮಾರು 9 ಗಂಟೆ ವೇಳೆ ಮನೆಯಲ್ಲಿ ಗಲಾಟೆ ನಡೆದಿದೆ. ನಿತೇಶ್ ತಾಯಿ, ತಂದೆ, ಅಣ್ಣ ಮನೆಯಲ್ಲಿದ್ದ ವೇಳೆ ಗಲಾಟೆ ನಡೆದಿದ್ದು, ಈ ವೇಳೆ ನಿತೇಶ್ ಮನೆಯ ಬಾಲ್ಕನಿಗೆ ಅಳವಡಿಸಿದ್ದ ಅಲ್ಯುಮಿನಿಯಮ್ ಪಾರ್ಟಿಷನ್ ನ ಗಾಜಿಗೆ ಬಲವಾಗಿ ಕೈಯಿಂದ ಹೊಡೆದಿದ್ದು ರಕ್ತ ಸ್ರಾವವಾಗಿದೆ. ಮನೆ ಮಂದಿ ಎಂದಿನಂತೆ ಇರುವ ಗಲಾಟೆ ಎಂದು ಗ್ರಹಿಸಿ ಕೋಣೆಯೊಳಗೆ ಸೇರಿದ್ದಾರೆ.
ಕೆಲಹೊತ್ತಿನ ಬಳಿಕ ನಿತೇಶ್ ರಕ್ತಸ್ರಾವವಾಗಿ ಪ್ರಾಣ ಸಂಕಟದಿಂದ ಚೀರಾಡಿದ್ದು ಆತನ ಕೂಗು ಕೇಳಿಸಿ ಮನೆಯ ಕೆಳ ಅಂತಸ್ತಿನಲ್ಲಿ ವಾಸವಿದ್ದ ನಿತೇಶ್ ನ ಚಿಕ್ಕಪ್ಪನ ಮಗಳು ಮೇಲಕ್ಕೆ ಓಡಿ ಬಂದಿದ್ದಾರೆ. ರಕ್ತದ ಮಡುವಿನಲ್ಲಿದ್ದ ನಿತೇಶನ್ನು ಸ್ಥಳೀಯ ಬಜರಂಗದಳದ ಮುಖಂಡ ಅರ್ಜುನ್ ಮಾಡೂರು ಮತ್ತು ಸ್ನೇಹಿತರು ಆಂಬುಲೆನ್ಸಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿತೇಶ್ ಸಾವನ್ನಪ್ಪಿದ್ದಾರೆ.
ವಿಧಿ ವಿಜ್ಞಾನ ತಂಡ ಮತ್ತು ಉಳ್ಳಾಲ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
            
            
            In a tragic incident reported from Arasunagara in Madur, Ullal police limits, a 36-year-old man died due to excessive bleeding after slamming his hand on a glass partition in a fit of rage during a drunken altercation with his father and brother on Wednesday night.
    
            
             04-11-25 04:38 pm
                        
            
                  
                Bangalore Correspondent    
            
                    
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             04-11-25 06:15 pm
                        
            
                  
                Mangalore Correspondent    
            
                    
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
ಹಿಂದುಗಳು, ಬಿಜೆಪಿಗರೆಂದು ತಾರತಮ್ಯಗೈದರೆ ಕ್ಷೇತ್ರದ...
03-11-25 10:47 pm
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm