Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ ಬೈಕಿಗೆ ಕಾರು ಡಿಕ್ಕಿ ; ಚೇಳಾರಿನ ವ್ಯಕ್ತಿ ಸ್ಥಳದಲ್ಲೇ ಸಾವು, ಇನ್ನೊಬ್ಬ ಬಾಲಕ ಗಂಭೀರ, ಕಾರು ಚಾಲಕ ಅರೆಸ್ಟ್ 

02-09-25 04:44 pm       Mangalore Correspondent   ಕರಾವಳಿ

ಸುರತ್ಕಲ್ ಬಳಿಯ ಮುಕ್ಕ ಜಂಕ್ಷನ್‌ನಲ್ಲಿ ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಹಿಂಬದಿ ಸವಾರ ಗಂಭೀರ ಗಾಯಗೊಂಡಿದ್ದಾರೆ. ಚೇಳ್ಯಾರು ನಿವಾಸಿ ಬೈಕ್ ಸವಾರ ಕರುಣಾಕರ್ ಶೆಟ್ಟಿ(61) ಸ್ಥಳದಲ್ಲೇ ಮೃತಪಟ್ಟವರು.‌ 

ಮಂಗಳೂರು, ಸೆ.2 : ಸುರತ್ಕಲ್ ಬಳಿಯ ಮುಕ್ಕ ಜಂಕ್ಷನ್‌ನಲ್ಲಿ ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಹಿಂಬದಿ ಸವಾರ ಗಂಭೀರ ಗಾಯಗೊಂಡಿದ್ದಾರೆ. ಚೇಳ್ಯಾರು ನಿವಾಸಿ ಬೈಕ್ ಸವಾರ ಕರುಣಾಕರ್ ಶೆಟ್ಟಿ(61) ಸ್ಥಳದಲ್ಲೇ ಮೃತಪಟ್ಟವರು.‌ 

ಉತ್ತರ ಕರ್ನಾಟಕ ಮೂಲದ ಹನುಮಂತು ಎಂಬವರ ಪುತ್ರ ವಿಶ್ವನಾಥ್(16) ಗಾಯಗೊಂಡ ಬಾಲಕ. ಈತ ಪ್ರಸ್ತುತ ಚೇಳಾಯರು ನಿವಾಸಿಯಾಗಿದ್ದು, ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರುಣಾಕರ್ ಶೆಟ್ಟಿ ಭಾನುವಾರ ರಾತ್ರಿ ಪಕ್ಕದ ಮನೆಯ ವಿಶ್ವನಾಥನನ್ನು ಕರೆದುಕೊಂಡು ದ್ವಿಚಕ್ರ ವಾಹನದಲ್ಲಿ ಮುಕ್ಕಕ್ಕೆ ಹೋಗಿದ್ದರು. ಹಿಂತಿರುಗಿ ಬರುತ್ತಿದ್ದಾಗ ಮುಕ್ಕ ಜಂಕ್ಷನ್ ಬಳಿ ಹೆದ್ದಾರಿ ದಾಟುತ್ತಿದ್ದಾಗ, ಹಳೆಯಂಗಡಿಯಿಂದ ಸುರತ್ಕಲ್ ಕಡೆಗೆ ಹೋಗುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಿಂರ ಕರುಣಾಕರ ಶೆಟ್ಟಿ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಕುಳಿತಿದ್ದ ವಿಶ್ವನಾಥ್ ಕೈಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರು ಚಾಲಕ ಹಳೆಯಂಗಡಿಯ ಮುಹಮ್ಮದ್ ತೌಫೀಕ್‌ನನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A fatal accident occurred near Mukka Junction on Sunday night when a car collided with a two-wheeler, killing the rider on the spot and seriously injuring a minor pillion rider. The accident took place while the duo was returning home. The deceased has been identified as Karunakar Shetty (61), a resident of Chelairu.