ಬ್ರೇಕಿಂಗ್ ನ್ಯೂಸ್
03-09-25 10:52 pm Mangalore Correspondent ಕರಾವಳಿ
ಮಂಗಳೂರು, ಸೆ.3 : 43 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕಳೆದ ಒಂದು ವರ್ಷದಿಂದ ಅತಿಯಾದ ಋತುಸ್ರಾವ ಮತ್ತು ಹೊಟ್ಟೆಯ ಭಾಗದಲ್ಲಿ ತೀವ್ರ ನೋವಿನ ಲಕ್ಷಣಗಳನ್ನು ಹೊಂದಿದ್ದರು. ತಪಾಸಣೆಯ ವೇಳೆ ಆಕೆಗೆ ಎಂಡೊಮೆಟ್ರಿಯೋಸಿಸ್ ಸೋಂಕು ಇರುವುದು ಪತ್ತೆಯಾಗಿತ್ತು. ಇದಕ್ಕಾಗಿ ಹಲವು ಆಸ್ಪತ್ರೆಗಳನ್ನು ಸಂದರ್ಶಿಸಿದ್ದರೂ ಗುಣ ಕಂಡಿರಲಿಲ್ಲ. ಒಂದು ವಾರದಿಂದ ಹೊಟ್ಟೆಯ ಭಾಗದಲ್ಲಿ ತೀವ್ರ ನೋವು, ಜ್ವರದಿಂದ ಬಳಲಿ ಅತ್ತಾವರದ ಕೆಎಂಸಿ ಆಸತ್ರೆಗೆ ಬಂದಿದ್ದರು.
ಸ್ಕ್ಯಾನಿಂಗ್ ಮತ್ತು ಎಂಆರ್ ಐ ಪರೀಕ್ಷೆ ನಡೆಸಿದಾಗ ಅಂಡಾಶಯದಲ್ಲಿ ಬೈಲ್ಯಾಟರಲ್ ಎಂಡೋಮೆಟ್ರಿಯೋಟಿಕ್ ಗಂಟುಗಳು ಇರುವುದು ಹಾಗೂ ಅಕ್ಯೂಟ್ ಪೆಲ್ವಿಕ್ ಇನ್ಫ್ಲಮೇಟರಿ ಕಾಯಿಲೆಯ ಲಕ್ಷಣಗಳು ಪತ್ತೆಯಾಗಿದ್ದವು. ಆಕೆಗೆ ಇಂಟಾವೇನಸ್ ಆ್ಯಂಟಿಬಯಾಟಿಕ್ ಔಷಧ ನೀಡಿ ಒಂದು ವಾರ ನಿಗಾ ಇರಿಸಲಾಯಿತು. ಆದರೆ ಜ್ವರ ಮತ್ತು ನೋವು ಕಡಿಮೆಯಾಗದಿದ್ದರಿಂದ ಪ್ರಸೂತಿ ವಿಭಾಗದ ತಜ್ಞರು ಶಸ್ತ್ರಚಿಕಿತ್ಸೆ ಅಗತ್ಯವೆಂದು ನಿರ್ಧರಿಸಿದರು. ಹಿರಿಯ ಪ್ರಸೂತಿ ತಜ್ಞೆ ಡಾ| ನೀನಾ ಮಹಾಲೆ ಮತ್ತು ಹಿರಿಯ ಜನರಲ್ ಸರ್ಜನ್ ಡಾ| ಪೂರ್ಣಚಂದ್ರ ತೇಜಸ್ವಿ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದು ಹೊಟ್ಟೆಯ ಭಾಗದಲ್ಲಿ ಕೀವು ತುಂಬಿರುವುದು, ಪೆಲ್ವಿಕ್ ಭಾಗದಲ್ಲಿ ಬಾವು ಹಾಗೂ ಗರ್ಭಕೋಶ, ಎರಡೂ ಫಾಲೋಪಿಯನ್ ನಾಳಗಳು ಮತ್ತು ಅಂಡಾಶಯಗಳು ಹೊಟ್ಟೆಗೆ ಅಂಟಿಕೊಂಡಿರುವುದು ತಿಳಿದುಬಂತು. ಇದು ಬಹಳ ಸಂಕೀರ್ಣ ಪ್ರಕರಣವಾಗಿದ್ದು, ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು.
ಪೆಲ್ವಿಸ್ ಭಾಗದ ಅಂಗಾಂಗಗಳು ರೋಗಪೀಡಿತವಾಗಿ ಪರಸ್ಪರ ಅಂಟಿಕೊಂಡಿದ್ದರೂ ಅವುಗಳನ್ನು ಯಶಸ್ವಿಯಾಗಿ ಬೇರ್ಪಡಿಸುವಲ್ಲಿ ಶಸ್ತ್ರಚಿಕಿತ್ಸಾ ತಜ್ಞರ ತಂಡ ಯಶಸ್ವಿಯಾಯಿತು. ಪೋಸ್ಟ್ ಆಪರೇಟಿವ್ ವಾರ್ಡ್ ನಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರ ವಿಭಾಗದ ಘಟಕ ಮುಖ್ಯಸ್ಥ ಡಾ.ಅಪರ್ಣಾ ಭಟ್, ಡಾ.ನೀನಾ ಮಹಾಲೆ ಮತ್ತು ಡಾ.ಸೌದಾ ಅವರ ನೇತೃತ್ವದಲ್ಲಿ ನಿಕಟ ನಿಗಾದಡಿ ಚಿಕಿತ್ಸೆ ನೀಡಲಾಯಿತು. ರೋಗಿ ಬಳಿಕ ಉತ್ತಮವಾಗಿ ಚೇತರಿಸಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ತಂಡ ಪ್ರಯತ್ನ, ವೈದ್ಯಕೀಯ ನೈಪುಣ್ಯ ಮತ್ತು ಶಸ್ತ್ರಚಿಕಿತ್ಸೆ ಕೌಶಲಗಳು ಇಂತಹ ಕ್ಲಿಷ್ಟಕರ ಪ್ರಕರಣಗಳನ್ನು ನಿಭಾಯಿಸುವಲ್ಲಿ ಬಹಳ ನಿರ್ಣಾಯಕ ಎಂಬುದನ್ನು ಅತ್ತಾವರ ಕೆಎಂಸಿಯಲ್ಲಿ ನಡೆಸಲಾಗಿರುವ ಈ ಚಿಕಿತ್ಸೆ ಸಾಬೀತುಪಡಿಸಿದೆ.
A 43-year-old woman suffering from a rare gynecological condition has successfully undergone a complex surgery at KMC Hospital, Attavar. The patient had been experiencing heavy menstrual bleeding and severe abdominal pain for nearly a year. Medical investigations revealed that she was suffering from endometriosis.
31-10-25 08:10 pm
HK News Desk
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
30-10-25 03:20 pm
HK News Desk
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
31-10-25 10:47 pm
Mangalore Correspondent
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
ಅನಧಿಕೃತ ಪಾರ್ಕಿಂಗ್ ವಿರುದ್ಧ ಮಂಗಳೂರು ಪೊಲೀಸರ ಕಾರ್...
31-10-25 09:00 pm
78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
31-10-25 10:57 pm
Mangalore Correspondent
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm
ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm