ಬ್ರೇಕಿಂಗ್ ನ್ಯೂಸ್
19-09-25 10:21 pm Mangalore Correspondent ಕರಾವಳಿ
ಮಂಗಳೂರು, ಸೆ.19 : ಕೇಂದ್ರ ಸರಕಾರ ಕಡೆಗೂ ಜನಸಾಮಾನ್ಯರಿಗೆ ಭಾರವಾಗಿದ್ದ ಜಿಎಸ್ಟಿ ಹೊರೆಯನ್ನು ಇಳಿಸುವ ಸೂಚನೆ ನೀಡಿದೆ. ಆದರೆ ರಾಜ್ಯ ಸರಕಾರ ತೆರಿಗೆ ಹೊರೆ ಇಳಿಸುವ ಬದಲು ಮತ್ತೆ ಬರೆ ಎಳೆಯುವ ಮುನ್ಸೂಚನೆ ನೀಡಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಸೇವಾ ದರವನ್ನೂ ಹೆಚ್ಚಿಸಿ ಶಾಕ್ ನೀಡಿದೆ.
ಕರಾವಳಿಯ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೇವೆಗಳ ದರವನ್ನು ದುಪ್ಪಟ್ಟು ಮಾಡಲಾಗಿದೆ. ಅಕ್ಟೋಬರ್ 1ರಿಂದ ಸೇವಾ ದರವು ಪರಿಷ್ಕೃತವಾಗಲಿದೆ ಎಂದು ಕಟೀಲು ದೇವಸ್ಥಾನ ಮುಂಭಾಗದಲ್ಲಿ ಬೋರ್ಡ್ ಹಾಕಲಾಗಿದೆ. ಪಟ್ಟಿಯನ್ನು ನೋಡಿದರೆ ಒಂದೊಂದು ದರವನ್ನೂ ದುಪ್ಪಟ್ಟು ಮಾಡಿರುವುದು ಕಂಡುಬರುತ್ತದೆ.
120 ರೂ. ಇದ್ದ ಹೂವಿನ ಪೂಜೆಗೆ 220 ರೂ. ಮಾಡಿದ್ದಾರೆ. ದುರ್ಗಾ ನಮಸ್ಕಾರಕ್ಕೆ 60 ರೂ. ಇದ್ದುದನ್ನು 140 ಮಾಡಲಾಗಿದೆ. ಪಂಚ ಕಜ್ಜಾಯ 20 ರೂ.ನಿಂದ 40 ರೂ. ಮಾಡಲಾಗಿದೆ. ಸರ್ವ ಸೇವೆ ಒಂದು ಸಾವಿರದಿಂದ ಎರಡು ಸಾವಿರಕ್ಕೆ ಮಾಡಲಾಗಿದೆ. ರಂಗಪೂಜೆ ಸೇವೆಯನ್ನು 3 ಸಾವಿರ ರೂ.ನಿಂದ ಆರು ಸಾವಿರಕ್ಕೆ ಹೆಚ್ಚಿಸಲಾಗಿದೆ. ನಾಮಕರಣ ಚೀಟಿಗೆ 40 ರೂ. ಇದ್ದುದನ್ನು 200 ರೂ.ಗೆ ಹೆಚ್ಚಿಸಲಾಗಿದೆ. ಲಡ್ಡು ಪ್ರಸಾದ 20ರಿಂದ 60 ರೂ.ಗೆ ಹೆಚ್ಚಿಸಲಾಗಿದೆ.
ಏಕಾಏಕಿ ಮುಜರಾಯಿ ಇಲಾಖೆಯ ದೇವಸ್ಥಾನದಲ್ಲಿ ಸೇವಾ ದರಗಳನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಬಿಜೆಪಿ ಜಾಲತಾಣದಲ್ಲಿ ಟೀಕೆ ಮಾಡಿದೆ. ಸಿದ್ದರಾಮಯ್ಯ ಸರಕಾರದ ಬೆಲೆ ಏರಿಕೆ ಬಿಸಿ ದೇವಸ್ಥಾನದ ಸೇವೆಗೂ ತಟ್ಟಿದೆ. ಸರ್ಕಾರದ ಖಜಾನೆ ತುಂಬಿಸಲು ಹಿಂದು ದೇವಸ್ಥಾನಗಳಲ್ಲಿ ಬರೆ ಹಾಕಲಾಗಿದೆ ಎಂದು ಟೀಕಿಸಿ ಪೋಸ್ಟ್ ಮಾಡಿದೆ. ಈ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗಿದೆ.
Even as the Central Government hints at reducing GST to ease the burden on common citizens, the Karnataka State Government has come under fire for hiking service charges at temples under the Muzrai Department — sparking sharp criticism from opposition leaders and devotees alike.
17-12-25 12:45 pm
Bangalore Correspondent
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
17-12-25 01:38 pm
HK News Desk
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
17-12-25 05:23 pm
Udupi Correspondent
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
Bride Missing, Mangalore: ಬೇರೆ ಲವ್ ಇದೆಯೆಂದರೂ...
16-12-25 08:53 pm
ಕೇರಳಕ್ಕೆ ನಾಲ್ಕು ಲಕ್ಷ ಮೌಲ್ಯದ ಎಂಡಿಎಂ ಡ್ರಗ್ಸ್ ಸಾ...
16-12-25 05:24 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm