ಬ್ರೇಕಿಂಗ್ ನ್ಯೂಸ್
27-09-25 01:33 pm Mangalore Correspondent ಕರಾವಳಿ
ಪುತ್ತೂರು, ಸೆ.27 : ಪುತ್ತೂರಿನಲ್ಲಿ ಸಹಪಾಠಿ ವಿದ್ಯಾರ್ಥಿನಿಗೆ ಮಗು ಕರುಣಿಸಿದ ಪ್ರಕರಣದಲ್ಲಿ ಕಡೆಗೂ ಡಿಎನ್ಎ ವರದಿ ಬಂದಿದೆ. ಆರೋಪಿಯೆಂದು ಗುರುತಿಸಲ್ಪಟ್ಟ ಶ್ರೀಕೃಷ್ಣ ರಾವ್ ಮಗುವಿನ ತಂದೆ ಎಂಬುದು ಸಾಬೀತಾಗಿದ್ದು ಇದನ್ನು ಪುತ್ತೂರು ಠಾಣೆಯ ಪೊಲೀಸರು ಕೂಡ ತಿಳಿಸಿದ್ದಾರೆ ಎಂದು ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ತಿಳಿಸಿದ್ದಾರೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್, ಎಲ್ಲ ಪಕ್ಷಗಳ ನಾಯಕರು, ಆರೆಸ್ಸೆಸ್ ನಾಯಕರನ್ನು ಭೇಟಿಯಾಗಿದ್ದೇನೆ. ನಾನಾ ರೀತಿಯ ಆರೋಪಗಳನ್ನು ಹೊರಿಸಿ ಬಡ ಕುಟುಂಬವನ್ನು ಒಂಟಿಯನ್ನಾಗಿ ಮಾಡಲಾಗಿತ್ತು. ಆದರೆ ಬಡ ಹುಡುಗಿಯ ಜೀವನ, ಮಗುವಿನ ಭವಿಷ್ಯದ ಬಗ್ಗೆ ಯಾರೂ ಚಿಂತೆ ಮಾಡಲಿಲ್ಲ. ಅದಕ್ಕಾಗಿ ಆ ಮಗುವಿನ ತಂದೆ ಯಾರೆಂದು ತಿಳಿಯಲು ಡಿಎನ್ಎ ಟೆಸ್ಟ್ ಮಾಡಲಾಯಿತು. ಈಗ ಪಾಸಿಟಿವ್ ವರದಿ ಬಂದಿದೆ.
ನಮಗೇನೂ ಆರೋಪಿ ವಿರುದ್ಧ ಕಾನೂನು ಹೋರಾಟ ನಡೆಸಬೇಕೆಂದು ಇಲ್ಲ. ಅವರಿಬ್ಬರು ಸಂತೋಷದಲ್ಲಿ ಜೀವನ ಮಾಡಲಿ ಎನ್ನುವುದಷ್ಟೆ ನಮ್ಮ ಬಯಕೆ. ಕಾನೂನು ಪ್ರಕಾರ ಯಾವುದೇ ಕಾರಣಕ್ಕು ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ಸದ್ಯ ಪ್ರಕರಣ ಕೋರ್ಟಿನಲ್ಲಿದ್ದು ಒಳ್ಳೆಯ ರೀತಿಯಲ್ಲಿ ಮುಗಿಸಬೇಕಿದೆ. ಶ್ರೀಕೃಷ್ಣನ ತಂದೆ ಜಗನ್ನಿವಾಸ ರಾವ್ ಭೇಟಿಯಾಗಲು ಭಾರೀ ಪ್ರಯತ್ನ ಪಟ್ಟೆ. ಆದರೆ ಅವರು ಭೇಟಿಗೆ ಅವಕಾಶ ಕೊಟ್ಟಿಲ್ಲ.
ಪ್ರಕರಣದಲ್ಲಿ ಆಗಬಾರದ ಘಟನೆಯೇನೂ ಆಗಿದ್ದಲ್ಲ. ಸಹಜವಾಗಿ ಸಹಪಾಠಿಗಳಾಗಿದ್ದವರು ಪ್ರೀತಿಸಿ ಏನೋ ಆಸೆ ಆಕಾಂಕ್ಷೆಯಿಂದ ಮಾಡಿಕೊಂಡಿದ್ದಾರೆ. ಇದನ್ನು ಇಷ್ಟು ದೊಡ್ಡಕ್ಕೆ ಮಾಡುವ ಅಗತ್ಯವೇ ಇರಲಿಲ್ಲ. ಹಿಂದುತ್ವಕ್ಕೆ ಪುತ್ತೂರು ಶಕ್ತಿಕೇಂದ್ರ. ವಿಶ್ವಕರ್ಮ ಸಮಾಜವೂ ಹಿಂದುತ್ವದ ಪ್ರತೀಕ. ವಿಶ್ವಕರ್ಮ ಸಮಾಜವೇ ಹಿಂದುತ್ವದ ಸಾಂಸ್ಕೃತಿಕ ರೂಪ. ಇದಕ್ಕಾಗಿ ಹಿಂದುತ್ವದ ಸಂಘಟನೆಗಳಿಗೆ, ಪುತ್ತೂರಿನ ಶಾಸಕರಿಗೆ, ಎಲ್ಲ ನಾಯಕರಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ. ಇದನ್ನು ಒಳ್ಳೆಯ ರೀತಿಯಲ್ಲಿ ಮುಕ್ತಾಯ ಮಾಡಲು ಸಹಕರಿಸಬೇಕು. ಈ ಬಗ್ಗೆ ವಿಶ್ವಕರ್ಮ ಸಮಾಜ ಹೋರಾಟ ಮಾಡುವುದು ಹಿಂದುತ್ವಕ್ಕೆ ಅವಮಾನ ಅಂದುಕೊಳ್ಳುತ್ತೇನೆ, ಹಾಗಂತ ನ್ಯಾಯ ದೊರಕದಿದ್ದರೆ ನಮ್ಮ ಸಮಾಜ ವಿರಮಿಸುವುದೂ ಇಲ್ಲ ಎಂದು ಕೆಪಿ ನಂಜುಂಡಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿದ್ದ ವಿದ್ಯಾರ್ಥಿನಿಯ ತಾಯಿ ಮಾತನಾಡಿ, ಈಗ ಡಿಎನ್ಎ ವರದಿ ಬಂದಿದೆ, ಹಿಂದೆ ಅವನ ಮಗುವಲ್ಲ, ನಾವು ಒಪ್ಪುವುದಿಲ್ಲ ಎಂದು ಹೇಳುತ್ತಿದ್ದರು. ಈಗ ಪ್ರೂವ್ ಆಗಿದ್ಯಲ್ಲ. ನಾವು ಪುತ್ತೂರು ಮಹಾಲಿಂಗೇಶ್ವರನಲ್ಲಿ ವಿಶ್ವಾಸ ಇಟ್ಟಿದ್ದೇವೆ ಎಂದರು.
In the case where a student gave birth allegedly fathered by her classmate, the DNA test report has now confirmed the truth. The report has established that the accused, Shrikrishna Rao, is indeed the father of the child. Police at Puttur station have also acknowledged the findings, said K.P. Nanjundi, State President of the Vishwakarma community.
18-10-25 09:11 pm
HK News Desk
ಎಂಟು ದಿನಗಳಿಂದ ಲವರ್ ಜೊತೆಗೆ ರೂಮ್ ಮಾಡಿದ್ದ ಪುತ್ತೂ...
18-10-25 08:50 pm
ಅಳಂದ ಮತಗಳವು ಪ್ರಕರಣ ; ಬಿಜೆಪಿ ಮಾಜಿ ಶಾಸಕ ಗುತ್ತೇದ...
17-10-25 08:39 pm
ಆರೆಸ್ಸೆಸ್ ಚಟುವಟಿಕೆ ಕಡಿವಾಣಕ್ಕೆ ಕೌಂಟರ್ ; ಸಾರ್ವಜ...
17-10-25 05:27 pm
ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗೆ ಬ್ರೇಕ...
16-10-25 09:04 pm
18-10-25 07:34 pm
HK News Desk
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
18-10-25 11:01 pm
Mangalore Correspondent
Kantara Controversy, Mangalore: ದೈವದ ಹೆಸರಲ್ಲಿ...
18-10-25 07:26 pm
Ullal, Someshwara, Pillar: ಸೋಮೇಶ್ವರ ಪಿಲಾರಿನಲ್...
17-10-25 09:36 pm
1971ರ ಭಾರತ - ಪಾಕ್ ಯುದ್ಧದಲ್ಲಿ ಹೆಲಿಕಾಪ್ಟರ್ ನಿಂದ...
16-10-25 10:37 pm
ತಲೆಮರೆಸಿಕೊಂಡ ಆರೋಪಿಗಳ ಬೆನ್ನುಬಿದ್ದ ಮಂಗಳೂರು ಪೊಲೀ...
16-10-25 08:26 pm
18-10-25 10:49 pm
Mangalore Correspondent
Auto Driver Assaulted, Traffic Police in Putt...
18-10-25 03:48 pm
Fake Gold Scam, Belthangady Anugraha Society:...
18-10-25 03:27 pm
Illegal Arms Case, Mahesh Shetty Timarodi: ಅಕ...
18-10-25 01:52 pm
ಪ್ರೀತಿ ನಿರಾಕರಿಸಿದ ಕಾಲೇಜು ಯುವತಿಯನ್ನು ನಡುರಸ್ತೆಯ...
17-10-25 03:27 pm