ಬ್ರೇಕಿಂಗ್ ನ್ಯೂಸ್
11-10-25 10:24 pm Mangalore Correspondent ಕರಾವಳಿ
ಬೆಳ್ತಂಗಡಿ, ಅ.11 : ಧರ್ಮಸ್ಥಳ ಸ್ನಾನಘಟ್ಟದ ಬಳಿ ನೂರಾರು ಪೋಸ್ಟ್ ಮಾರ್ಟಂ ಮಾಡಿದ್ದೀನಿ ಎಂದಿರುವ ಎಫ್ಎಸ್ಎಲ್ ತಜ್ಞ ಡಾ. ಮಹಾಬಲ ಶೆಟ್ಟಿ ಅವರಿಗೆ ಝೆಡ್ ಪ್ಲಸ್ ಸೆಕ್ಯುರಿಟಿ ಕೊಡಲಿ. ಚಿನ್ನಯ್ಯಗೆ ಕೊಟ್ಟಿದ್ದೀರಿ, ನನಗೆ ಯಾಕೆ ಕೊಟ್ಟಿಲ್ಲ. ನನಗೂ ಮಟ್ಟಣ್ಣನವರ್ ನಿಂದ ಜೀವ ಭಯ ಇದೆ ಎಂದು ಹೇಳಿದ್ದಾರಂತೆ. ನಾನು ಕೂಡ ಪೊಲೀಸರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಮಹಾಬಲ ಶೆಟ್ಟಿ ಹಿಂದೆ ಮುಂದೆ ಎಲ್ಲ ಬ್ಲಾಕ್ ಕ್ಯಾಟ್ ಕಮಾಂಡೋ ಕೊಡಿಸಿ ಎಂದು ಸೌಜನ್ಯಾ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ವ್ಯಂಗ್ಯ ಮಾಡಿದ್ದಾರೆ.
ಮಹಾಬಲ ಶೆಟ್ಟಿಯವರು ಮೂರು ಸಾವಿರ ಪೋಸ್ಟ್ ಮಾರ್ಟಂ ಮಾಡಿದ್ದಾರಂತೆ. 32 ಸಾವಿರ ಬೋನ್ ಸರ್ಟಿಫಿಕೇಟ್ ಕೊಟ್ಟಿದ್ದಾರಂತೆ. ದಿನಕ್ಕೊಂದು ಇಂತ ಸರ್ಟಿಫಿಕೇಟ್ ಕೊಟ್ಟರೂ 82 ವರ್ಷ ಬೇಕಾಗುತ್ತದೆ. ಕೇಳಿಸಿಕೊಳ್ತಾರೆ ಅಂತ ವಟ್ರಾಸಿ ಹೇಳಿಬಿಡೋದಾ. ಸಂತೋಷ್ ರಾವ್ ಆರೋಪಿ ಅಂತ ಪ್ರಮಾಣ ಮಾಡ್ತಾರಂತೆ. ಇವರೊಬ್ಬ ವೈದ್ಯಕೀಯ ಎಕ್ಸ್ ಪರ್ಟ್ ಮಾತ್ರ. ವೈಜ್ಞಾನಿಕವಾಗಿ ಏನು ದಾಖಲೆ ಸಿಗುತ್ತೋ ಅದನ್ನು ಪರಿಶೀಲಿಸಿ ರಿಪೋರ್ಟ್ ಕೊಡೋದು ಕೆಲಸ. ಪ್ರಮಾಣ ಮಾಡಲಿಕ್ಕೇನಿದೆ ಇವರಿಗೆ. ಇವರು ಯಾರ ಪರವಾಗಿದ್ದಾರೆ ಅಂತ ಅವರ ಹೇಳಿಕೆಯಲ್ಲೇ ತಿಳಿಯುತ್ತದೆ.
ನಾನು ಕೇಳ್ತಿರೋದು, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ ಧರ್ಮಸ್ಥಳದಿಂದ ಬರೀ ಏಳು ಕಿಮೀ ಅಂತರದಲ್ಲಿ ಇರುವಾಗ ಯಾಕೆ 76 ಕಿಮೀ ದೂರದ ಖಾಸಗಿ ಆಸ್ಪತ್ರೆ ಒಯ್ಯಬೇಕಿತ್ತು ಅಂತ. ಇವರು ಇಷ್ಟೆಲ್ಲ ಪೋಸ್ಟ್ ಮಾರ್ಟಂ ಮಾಡಿದ್ದರೆ ಅದರ ಬಿಲ್ ಕೊಟ್ಟಿದ್ದು ಯಾರು ಅಂತ ಕೇಳಿದ್ದೇನೆ. ಅರೆ, ಈ ಪ್ರಶ್ನೆ ಕೇಳಬಾರದಾ.. ಇದನ್ನು ಕೇಳಿದ್ರೆ ನಾನು ಜೀವ ತೆಗೆಯುತ್ತೇನೆ, ಬೆದರಿಕೆ ಹಾಕ್ತೀನಿ ಅಂತಿದಾರೆ. ಪೋಸ್ಟ್ ಮಾರ್ಟಂ ಯಾಕೆ ಪ್ರತಿ ಬಾರಿಯೂ ಅಷ್ಟು ದೂರಕ್ಕೆ ಒಯ್ದು ಮಾಡುತ್ತಿದ್ದರು. ಇವರನ್ನೇ ಯಾಕೆ ಕರೀತಿದ್ರು ಅಂತ ಕೇಳುತ್ತೇನೆ. ಯಾಕೆ ಇವರನ್ನು ಪ್ರಶ್ನೆ ಮಾಡಬಾರದು ಎಂದು ಗಿರೀಶ್ ಮಟ್ಟಣ್ಣನವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡೋದು ಯಾಕೆ ಮಹಾಬಲ ಶೆಟ್ಟಿ. ಯಾರನ್ನೋ ಪ್ರಶ್ನೆ ಮಾಡಿದ್ರೆ ಇವರು ಯಾಕೆ ಉತ್ತರಿಸಬೇಕು ಎಂದು ಮಟ್ಟಣ್ಣನವರ್ ಪ್ರಶ್ನಿಸಿದರು. ಮಹೇಶ್ ಶೆಟ್ಟಿ ತಿಮರೋಡಿ ತಲೆಮರೆಸಿಕೊಳ್ಳಲು ಯಾರನ್ನೂ ರೇಪ್ ಮಾಡಿ ಹೋಗಿಲ್ಲ. ರೇಪ್ ಮಾಡಿದವರೇ ಓಡಿ ಹೋಗಿಲ್ಲ. ಅಕ್ರಮ ಶಸ್ತ್ರಾಸ್ತ್ರ ಕೇಸಲ್ಲಿ ಜಾಮೀನು ಏನೋ ಸಿಕ್ಕಿಲ್ಲ ಅಷ್ಟೇ. ನಿಜಕ್ಕಾದ್ರೆ ಅದರ ಬಗ್ಗೆ ಕೇಸನ್ನೇ ಮಾಡಬೇಕಿರಲಿಲ್ಲ. ಇವರು ಕೇಸ್ ಮಾಡಿದ್ದಾರೆ ಅಷ್ಟೇ ಎಂದು ಹೇಳಿದರು. ನಾವು ಎಲ್ಲದಕ್ಕೂ ದಾಖಲೆ ತೆಗೆದಿದ್ದೇವೆ, ಅವನ್ನು ಎಲ್ಲಿ ತಲುಪಿಸಬೇಕೋ ಅಲ್ಲಿಗೆ ತಲುಪಿಸಿದ್ದೇವೆ ಎಂದರು.
In Belthangady, activist Girish Mattannavar, known for his outspoken stance in the Soujanya case, took a jibe at forensic expert Dr. Mahabala Shetty, who recently claimed to have conducted hundreds of post-mortems near Dharmasthala.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm