ಬ್ರೇಕಿಂಗ್ ನ್ಯೂಸ್
25-10-25 08:08 pm Mangalore Correspondent ಕರಾವಳಿ
ಮಂಗಳೂರು, ಅ.25 : ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ನಿರಾಕರಿಸಿ ವಿವಾದ ಎದ್ದಿರುವಾಗಲೇ ಅಲ್ಲಿ ರೂಟ್ ಮಾರ್ಚ್ ನವೆಂಬರ್ 2ರಂದು ಆಗಿಯೇ ಆಗುತ್ತದೆ ಎಂದು ಹಿರಿಯ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಗುಡುಗಿದ್ದಾರೆ.
ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಕಲ್ಲಡ್ಕ ಭಟ್, ಮುಂದಿನ ತಿಂಗಳು ಎರಡನೇ ತಾರೀಕಿಗೆ ಚಿತ್ತಾಪುರದಲ್ಲಿ ಸಂಘದ ಪಥ ಸಂಚಲನ ನಡೆದೇ ನಡೆಯುತ್ತೆ. ಅದನ್ನು ಹೊಡೆದು ಬಡಿದು ನಿಲ್ಲಿಸಲು ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.
ದೇಶದ ಯಾವುದೇ ಕಡೆ ಸಮಸ್ಯೆ ಬಂದಾಗ ರಕ್ಷಣೆಗೆ ಹೋದದ್ದು ಆರೆಸ್ಸೆಸ್ ಸ್ವಯಂಸೇವಕರು. ಈ ವಿಷಯ ಇಡೀ ದೇಶಕ್ಕೆ ಗೊತ್ತಿದೆ. ಕಾಂಗ್ರೆಸ್ ನವರು ಸಹ ಒಳಗಿಂದೊಳಗೆ ಇದನ್ನು ಹೇಳ್ತಾರೆ. ಈ ಪ್ರಿಯಾಂಕ ಖರ್ಗೆಗೂ ಇದು ತಿಳಿಯದ ವಿಷಯ ಅಲ್ಲ.
ಆದರೆ ಪ್ರಿಯಾಂಕಾ ಖರ್ಗೆಯವರಿಗೆ ನೆನಪಿಲ್ಲ ಅನಿಸತ್ತೆ. ಈ ಖರ್ಗೆಯ ಅಪ್ಪ ಮಲ್ಲಿಕಾರ್ಜುನ ಖರ್ಗೆಯವರಿಗೆ ಸ್ವಲ್ಪ ನೆನಪಿರಬಹುದು. ಅವರ ಹಿರಿಯರನ್ನು, ಕುಟುಂಬವನ್ನು ಹೈದರಾಬಾದ್ನ ರಝಕಾರ್ ಎಂಬ ಮುಸಲ್ಮಾನರು ನಾಶ ಮಾಡಿದ್ದರು. ಹೌದಾ ಅಲ್ವಾ ಅಂತಾ ಅವರನ್ನೇ ಕೇಳಿ ಒಮ್ಮೆ. ಇವರಿಗೆ ಅದೆಲ್ಲ ಮರೆತು ಹೋಗಿದೆ.
ಸಮಾಜವನ್ನು ರಕ್ಷಣೆ ಮಾಡುವ ಕೆಲಸ ಆರೆಸ್ಸೆಸ್ ಮಾಡ್ತಿದೆ. ಸಮಾಜವನ್ನು ಒಡೆಯಬೇಕೆಂಬ ಉದ್ದೇಶದಲ್ಲಿ ಇವತ್ತು ಮುಖ್ಯಮಂತ್ರಿ ಜಾತಿಗಣತಿ ಮಾಡುತ್ತಿದ್ದಾರೆ. ಸಮಾಜವನ್ನು ಒಡೆಯುವ ದೊಡ್ಡ ಪ್ರಯತ್ನ ಇದರ ಹಿಂದಿದೆ. ಮುಸಲ್ಮಾನರಲ್ಲಿ 111 ಜಾತಿ ಇದೆ, ಆದ್ರೆ ಅವರಲ್ಲಿ ಜಾತಿ ಯಾವುದೆಂದು ಕೇಳ್ತಾ ಇಲ್ಲ ಯಾಕೆ. ಹಿಂದೂ ಸಮಾಜವನ್ನು ಮಾತ್ರ ಒಡೆಯುವ ಕೆಲಸ ಮಾಡ್ತಿದಾರೆ ಎಂದು ಹೇಳಿದರು.
RSS leader Kalladka Prabhakar Bhat has strongly asserted that the RSS route march in Chittapur will go ahead as planned on November 2, despite opposition from Minister Priyank Kharge. Speaking at a private event in Puttur, Bhat questioned whether anyone could “stop it by force,” declaring that “the march will happen at any cost.”
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
21-07-26 09:03 pm
HK News Staffer
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
ಕೇರಳದಲ್ಲಿ ಫುಟ್ಬಾಲ್ ಜ್ವರ ; ಮಧ್ಯರಾತ್ರಿ ಫೈನಲ್ ವೀ...
19-07-26 09:37 pm
21-07-26 11:02 pm
HK News Desk
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
22-07-26 10:55 am
HK News Staffer
₹200 ಕೋಟಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ...
22-07-26 10:53 am
Lavanya Murder case: ಲಾವಣ್ಯ ಹತ್ಯೆ ಪ್ರಕರಣ ; ಒಂ...
21-07-26 08:03 pm
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm
Ravi Shetty, Accident, Mangalore: ನಿಯಂತ್ರಣ ತಪ...
21-07-26 12:18 pm