ಬ್ರೇಕಿಂಗ್ ನ್ಯೂಸ್
25-10-25 08:08 pm Mangalore Correspondent ಕರಾವಳಿ
ಮಂಗಳೂರು, ಅ.25 : ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ನಿರಾಕರಿಸಿ ವಿವಾದ ಎದ್ದಿರುವಾಗಲೇ ಅಲ್ಲಿ ರೂಟ್ ಮಾರ್ಚ್ ನವೆಂಬರ್ 2ರಂದು ಆಗಿಯೇ ಆಗುತ್ತದೆ ಎಂದು ಹಿರಿಯ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಗುಡುಗಿದ್ದಾರೆ.
ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಕಲ್ಲಡ್ಕ ಭಟ್, ಮುಂದಿನ ತಿಂಗಳು ಎರಡನೇ ತಾರೀಕಿಗೆ ಚಿತ್ತಾಪುರದಲ್ಲಿ ಸಂಘದ ಪಥ ಸಂಚಲನ ನಡೆದೇ ನಡೆಯುತ್ತೆ. ಅದನ್ನು ಹೊಡೆದು ಬಡಿದು ನಿಲ್ಲಿಸಲು ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.
ದೇಶದ ಯಾವುದೇ ಕಡೆ ಸಮಸ್ಯೆ ಬಂದಾಗ ರಕ್ಷಣೆಗೆ ಹೋದದ್ದು ಆರೆಸ್ಸೆಸ್ ಸ್ವಯಂಸೇವಕರು. ಈ ವಿಷಯ ಇಡೀ ದೇಶಕ್ಕೆ ಗೊತ್ತಿದೆ. ಕಾಂಗ್ರೆಸ್ ನವರು ಸಹ ಒಳಗಿಂದೊಳಗೆ ಇದನ್ನು ಹೇಳ್ತಾರೆ. ಈ ಪ್ರಿಯಾಂಕ ಖರ್ಗೆಗೂ ಇದು ತಿಳಿಯದ ವಿಷಯ ಅಲ್ಲ.
ಆದರೆ ಪ್ರಿಯಾಂಕಾ ಖರ್ಗೆಯವರಿಗೆ ನೆನಪಿಲ್ಲ ಅನಿಸತ್ತೆ. ಈ ಖರ್ಗೆಯ ಅಪ್ಪ ಮಲ್ಲಿಕಾರ್ಜುನ ಖರ್ಗೆಯವರಿಗೆ ಸ್ವಲ್ಪ ನೆನಪಿರಬಹುದು. ಅವರ ಹಿರಿಯರನ್ನು, ಕುಟುಂಬವನ್ನು ಹೈದರಾಬಾದ್ನ ರಝಕಾರ್ ಎಂಬ ಮುಸಲ್ಮಾನರು ನಾಶ ಮಾಡಿದ್ದರು. ಹೌದಾ ಅಲ್ವಾ ಅಂತಾ ಅವರನ್ನೇ ಕೇಳಿ ಒಮ್ಮೆ. ಇವರಿಗೆ ಅದೆಲ್ಲ ಮರೆತು ಹೋಗಿದೆ.
ಸಮಾಜವನ್ನು ರಕ್ಷಣೆ ಮಾಡುವ ಕೆಲಸ ಆರೆಸ್ಸೆಸ್ ಮಾಡ್ತಿದೆ. ಸಮಾಜವನ್ನು ಒಡೆಯಬೇಕೆಂಬ ಉದ್ದೇಶದಲ್ಲಿ ಇವತ್ತು ಮುಖ್ಯಮಂತ್ರಿ ಜಾತಿಗಣತಿ ಮಾಡುತ್ತಿದ್ದಾರೆ. ಸಮಾಜವನ್ನು ಒಡೆಯುವ ದೊಡ್ಡ ಪ್ರಯತ್ನ ಇದರ ಹಿಂದಿದೆ. ಮುಸಲ್ಮಾನರಲ್ಲಿ 111 ಜಾತಿ ಇದೆ, ಆದ್ರೆ ಅವರಲ್ಲಿ ಜಾತಿ ಯಾವುದೆಂದು ಕೇಳ್ತಾ ಇಲ್ಲ ಯಾಕೆ. ಹಿಂದೂ ಸಮಾಜವನ್ನು ಮಾತ್ರ ಒಡೆಯುವ ಕೆಲಸ ಮಾಡ್ತಿದಾರೆ ಎಂದು ಹೇಳಿದರು.
RSS leader Kalladka Prabhakar Bhat has strongly asserted that the RSS route march in Chittapur will go ahead as planned on November 2, despite opposition from Minister Priyank Kharge. Speaking at a private event in Puttur, Bhat questioned whether anyone could “stop it by force,” declaring that “the march will happen at any cost.”
16-12-25 12:57 pm
HK News Desk
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
Deputy Chief Minister, D.K. Shivakumar: ನೀವು...
14-12-25 03:19 pm
16-12-25 01:56 pm
HK News Desk
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
ಸಿಡ್ನಿಯ ಕಡಲತೀರದಲ್ಲಿ ರಕ್ತದೋಕುಳಿ ; ಸಾಮೂಹಿಕ ಗುಂಡ...
14-12-25 07:20 pm
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಯುಡಿಎಫ್ ಅತಿ ಹೆ...
13-12-25 08:34 pm
16-12-25 01:23 pm
Mangalore Correspondent
Mangalore RTO Bomb: ಮಂಗಳೂರು ಆರ್ಟಿಓ ಕಚೇರಿಗೆ ಬಾ...
15-12-25 05:40 pm
Mangalore Reels, Arrest, Police: ತಲವಾರು ಹಿಡಿದ...
14-12-25 05:48 pm
ಕೇಶವನ ಬದುಕು ಬದಲಿಸಿದ ರಕ್ತಬೀಜ ! ಅಸುರೀತನದ ಜೀವನಕ್...
13-12-25 11:02 pm
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
15-12-25 10:26 pm
Mangalore Correspondent
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am
ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಸ್ ಪೂರೈಕೆ ; ಸಾಗಣೆ ವ...
14-12-25 11:10 pm