ಮುಸ್ಲಿಂ ಮಹಿಳೆಯರಿಗೆ ಅವಮಾನ ಆರೋಪ ; ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪುತ್ತೂರಿನಲ್ಲಿ ಎಫ್ಐಆರ್ 

26-10-25 02:12 pm       Mangalore Correspondent   ಕರಾವಳಿ

ಪುತ್ತೂರು ತಾಲೂಕಿನ ಇರ್ದೆ ಬಳಿಯ ಉಪ್ಪಳಿಗೆಯಲ್ಲಿ ನಡೆದ ದೀಪಾವಳಿ ಕಾರ್ಯಕ್ರಮದಲ್ಲಿ ಹಿಂದು- ಮುಸ್ಲಿಂ ಮಹಿಳೆಯರಿಗೆ ಅವಮಾನಿಸಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಆರೆಸ್ಸೆಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಈಶ್ವರಿ ಪದ್ಮುಂಜ ಎಂಬವರು ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. 

ಪುತ್ತೂರು, ಅ.26 : ಪುತ್ತೂರು ತಾಲೂಕಿನ ಇರ್ದೆ ಬಳಿಯ ಉಪ್ಪಳಿಗೆಯಲ್ಲಿ ನಡೆದ ದೀಪಾವಳಿ ಕಾರ್ಯಕ್ರಮದಲ್ಲಿ ಹಿಂದು- ಮುಸ್ಲಿಂ ಮಹಿಳೆಯರಿಗೆ ಅವಮಾನಿಸಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಆರೆಸ್ಸೆಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಈಶ್ವರಿ ಪದ್ಮುಂಜ ಎಂಬವರು ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. 

ಉಪ್ಪಳಿಗೆ ಎಂಬಲ್ಲಿ ಆಯೋಜಿಸಿದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲ್ಲಡ್ಕ ಡಾ.ಪ್ರಭಾಕರ ಭಟ್ ಅವರು ಸಾರ್ವಜನಿಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ, ಮಹಿಳೆಯರನ್ನು ಅವಮಾನಿಸುವ ಮತ್ತು ವಿಭಿನ್ನ ಧಾರ್ಮಿಕ ಸಮುದಾಯಗಳ ನಡುವೆ ದ್ವೇಷ ಪ್ರಚೋದಿಸುವ ರೀತಿಯ ಭಾಷಣ ಮಾಡಿದ್ದಾರೆ ಎಂದು ಈಶ್ವರಿ ಪದ್ಮುಂಜ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಭಾಷಣದಲ್ಲಿ ಪ್ರಭಾಕರ ಭಟ್ ಅವರು, ಹಿಂದುಗಳು ಕನಿಷ್ಠ ಮೂವರು ಮಕ್ಕಳನ್ನು ಮಾಡಬೇಕು. ಇಲ್ಲದಿದ್ದರೆ ಮುಂದಕ್ಕೆ ತೊಂದರೆ ಇದೆ. ಮುಸ್ಲಿಂ ಮಹಿಳೆಯರು ನಾಯಿ ತರ ಮಕ್ಕಳನ್ನು ಹೆರುತ್ತಲೇ ಇರುತ್ತಾರೆ. ಇದನ್ನು ನಾವು ಲೆಕ್ಕ ಇಡುವುದಿಲ್ಲ. ಆದರೆ ಈ ರೀತಿ ಸಂಖ್ಯೆ ಹೆಚ್ಚಿಸಿಕೊಳ್ಳುವುದು ಧಾರ್ಮಿಕ ಅಸಮಾನತೆಗೆ ಕಾರಣವಾಗಲಿದೆ. ಅಲ್ಲದೆ, ಚಿತ್ತಾಪುರದಲ್ಲಿ ನವೆಂಬ‌ರ್ 2ರಂದು ಪಥ ಸಂಚಲನ ನಡೆದೇ ನಡೆಯುತ್ತದೆ. ಯಾರೋ ಹೊಡೆದು ಬಡಿದು ನಿಲ್ಲಿಸೋಕೆ ಆಗುತ್ತಾ.‌ ದೇಶದ ಯಾವುದೇ ಕಡೆ ತೊಂದರೆಯಾದರೆ ಆರೆಸ್ಸೆಸ್ ಸಹಾಯಕ್ಕೆ ಬರೋದು. ಅದು ಕಾಂಗ್ರೆಸಿಗರಿಗೂ ಗೊತ್ತಿದೆ. ಇದನ್ನೆಲ್ಲ ವಿರೋಧಿಸುವ ಖರ್ಗೆ ಕುಟುಂಬವನ್ನು ಹೈದ್ರಾಬಾದಿನ ರಜಾಕಾರ ಮುಸ್ಲಿಮರು ನಾಶ ಮಾಡಿದ್ದನ್ನು ನೆನಪಿಸಿಕೊಳ್ಳಲಿ. ತಿಳಿಯದಿದ್ದರೆ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ಕೇಳಿ ತಿಳಿದುಕೊಳ್ಳಲಿ ಎಂದು ಹೇಳಿದ್ದರು.

An FIR has been registered against senior RSS leader Kalladka Dr. Prabhakar Bhat at the Puttur Rural Police Station following a complaint by Eshwari Padmunja. The complaint alleges that Bhat made derogatory remarks about Hindu and Muslim women and delivered a hate speech during a Deepavali event held at Uppalige near Irde in Puttur taluk.