ಬ್ರೇಕಿಂಗ್ ನ್ಯೂಸ್
26-10-25 04:42 pm Mangalore Correspondent ಕರಾವಳಿ
ಮಂಗಳೂರು, ಅ.26 : 11 ದಿನಗಳಿಂದ ಅರಬ್ಬೀ ಸಮುದ್ರ ಮಧ್ಯೆ ನಾಪತ್ತೆಯಾಗಿದ್ದ ಗೋವಾ ಮೂಲದ 31 ಮೀನುಗಾರರಿದ್ದ ಮೀನುಗಾರಿಕಾ ಬೋಟ್ ಒಂದನ್ನು ಭಾರತೀಯ ಕೋಸ್ಟ್ ಗಾರ್ಡ್ ಪಡೆ ಪತ್ತೆಹಚ್ಚಿದ್ದು, ಅವರನ್ನು ರಕ್ಷಿಸಿ ಸುರಕ್ಷಿತವಾಗಿ ಹೊನ್ನಾವರ ಬಂದರಿಗೆ ಕರೆತಂದಿದೆ.
ಮಂಗಳೂರು ಬಂದರಿನಿಂದ ನೂರು ನಾಟಿಕಲ್ ಮೈಲು ದೂರದಲ್ಲಿ ಗೋವಾ ಮೂಲದ ಬೋಟ್ ನಾಪತ್ತೆಯಾಗಿದ್ದಾಗಿ ಅ.24ರಂದು ಮಂಗಳೂರಿನ ಕೋಸ್ಟ್ ಗಾರ್ಡ್ ಪ್ರಧಾನ ಕಚೇರಿಗೆ ಮಾಹಿತಿ ಬಂದಿತ್ತು. ಇದರಂತೆ, ಐಸಿಜಿಎಸ್ ಕಸ್ತೂರ್ಬಾ ಗಾಂಧಿ ಹಡಗಿನಲ್ಲಿ ಕಾರ್ಯಾಚರಣೆ ನಡೆಸಿದ್ದು ಕೊನೆಯ ಬಾರಿಗೆ ಮಿಸ್ಸಿಂಗ್ ಆಗಿದೆ ಎನ್ನಲಾದ ಜಾಗಕ್ಕೆ ತೆರಳಿ ಶೋಧ ಕಾರ್ಯಾಚರಣೆ ನಡೆಸಿತ್ತು. ಆದರೆ ಅಲ್ಲಿ ಬೋಟ್ ಪತ್ತೆಯಾಗದ ಕಾರಣ ಹೆಲಿಕಾಪ್ಟರ್ ಸಹಾಯ ಕೇಳಲಾಗಿತ್ತು.




ಆನಂತರ, ಕೊಚ್ಚಿಯಿಂದ ಬಂದಿದ್ದ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಸಮುದ್ರ ಮೇಲ್ಭಾಗದಿಂದ ಹಾರಾಡುತ್ತಾ ಮೀನುಗಾರಿಕಾ ಬೋಟಿನ ಬಗ್ಗೆ ಶೋಧ ನಡೆಸಿತ್ತು. ಮಳೆಯಿಂದಾಗಿ ವಾತಾವರಣ ಹದಗೆಟ್ಟಿದ್ದರೂ ಹಡಗಿನ ಜೊತೆ ಸೇರಿ ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸಿದೆ. ಅ.25ರಂದು ಡೋರ್ನಿಯರ್ ಏರ್ ಕ್ರಾಫ್ಟ್ ನಾಪತ್ತೆಯಾಗಿದ್ದ ಮೀನುಗಾರಿಕಾ ಬೋಟನ್ನು ಸಮುದ್ರ ನಡುವೆ ಪತ್ತೆಹಚ್ಚಿದ್ದು ಕೂಡಲೇ ಕೋಸ್ಟ್ ಗಾರ್ಡ್ ಹಡಗಿಗೆ ಮಾಹಿತಿ ರವಾನಿಸಿತ್ತು.
ಐಸಿಜಿಎಸ್ ಕಸ್ತೂರ್ಬಾ ಗಾಂಧಿ ಹಡಗು ಕೂಡಲೇ ಆ ಸ್ಥಳಕ್ಕೆ ಧಾವಿಸಿದ್ದು ಬೋಟಿನಲ್ಲಿದ್ದ ಎಲ್ಲ ಮೀನುಗಾರರನ್ನು ರಕ್ಷಣೆ ಮಾಡಿದ್ದಲ್ಲದೆ, ಅವರಿಗೆ ಆಹಾರ ನೀರು ಪೂರೈಸಿ ಅಪಾಯದಿಂದ ಪಾರು ಮಾಡಿದೆ. ಸಂತ ಏಂಟನಿ ಹೆಸರಿನ ಗೋವಾ ಮೂಲದ ಮೀನುಗಾರಿಕಾ ಬೋಟನ್ನು ಬಳಿಕ ಹಗ್ಗ ಕಟ್ಟಿ ಹೊನ್ನಾವರ ಬಂದರಿಗೆ ಎಳೆದು ತರಲಾಯಿತು. ಅದರಲ್ಲಿದ್ದ ಎಲ್ಲ 31 ಮೀನುಗಾರರನ್ನೂ ರಕ್ಷಣೆ ಮಾಡಲಾಗಿದೆ.
ಹವಾವಾನ ವೈಪರೀತ್ಯದ ನಡುವೆಯೂ ಕೋಸ್ಟ್ ಗಾರ್ಡ್ ಪಡೆಯು ಹಡಗು ಮತ್ತು ಏರ್ ಕ್ರಾಫ್ಟ್ ಮೂಲಕ ಯಶಸ್ವೀ ಕಾರ್ಯಾಚರಣೆ ನಡೆಸಿದ್ದು ಸಮುದ್ರ ಮಧ್ಯೆ ಸಾವಿನ ದವಡೆಯಲ್ಲಿ ಸಿಕ್ಕಿಬಿದ್ದು ಒದ್ದಾಡಿದ್ದ ಮೀನುಗಾರರನ್ನು ರಕ್ಷಿಸಿ ಕರೆತಂದಿದೆ. ಮೀನುಗಾರಿಕಾ ಬೋಟಿನಲ್ಲಿ ತಾಂತ್ರಿಕ ತೊಂದರೆ ಉಂಟಾಗಿ ಗಾಳಿ, ಮಳೆಯ ನಡುವೆ ಮುಂದೆ ಚಲಿಸಲಾಗದೆ ಸಿಕ್ಕಿಬಿದ್ದಿತ್ತು.
The Indian Coast Guard successfully rescued 31 fishermen from a Goa-based fishing boat that had been missing in the Arabian Sea for 11 days. After receiving information on October 24 that the vessel was lost about 100
16-12-25 03:08 pm
Bangalore Correspondent
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
16-12-25 06:33 pm
HK News Desk
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
ಸಿಡ್ನಿಯ ಕಡಲತೀರದಲ್ಲಿ ರಕ್ತದೋಕುಳಿ ; ಸಾಮೂಹಿಕ ಗುಂಡ...
14-12-25 07:20 pm
16-12-25 10:25 pm
Mangalore Correspondent
Bride Missing, Mangalore: ಬೇರೆ ಲವ್ ಇದೆಯೆಂದರೂ...
16-12-25 08:53 pm
ಕೇರಳಕ್ಕೆ ನಾಲ್ಕು ಲಕ್ಷ ಮೌಲ್ಯದ ಎಂಡಿಎಂ ಡ್ರಗ್ಸ್ ಸಾ...
16-12-25 05:24 pm
ಕೊರಗ ಸಮುದಾಯದಲ್ಲಿ ಮೊಟ್ಟಮೊದಲ ವೈದ್ಯಕೀಯ ಪದವಿ ಪಡೆದ...
16-12-25 04:26 pm
ಆವರಣ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ...
16-12-25 01:23 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm