Panambur Accident, Mangalore, Three dead: ಪಣಂಬೂರು ಬಳಿ ಮತ್ತೊಂದು ಭೀಕರ ಅಪಘಾತ ; ಟ್ಯಾಂಕರ್ ನಡುವೆ ಆಟೋ ಅಪ್ಪಚ್ಚಿ, ಉಳ್ಳಾಲದ ಬೀಡಿ ಕಾರ್ಮಿಕರು ಸೇರಿ ಮೂವರು ಸಾವು 

15-11-25 02:47 pm       Mangalore Correspondent   ಕರಾವಳಿ

ಮಂಗಳೂರು ಹೊರವಲಯದ ಪಣಂಬೂರು ಜಂಕ್ಷನ್ ಬಳಿ ಸರಣಿ ಅಪಘಾತ ನಡೆದಿದ್ದು ಎರಡು ಟ್ಯಾಂಕರ್ ಗಳ ನಡುವೆ ಸಿಲುಕಿದ ಆಟೋ ಅಪ್ಪಚ್ಚಿಯಾಗಿ ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಮತ್ತು ಆಟೋ ಚಾಲಕ ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ್ದಾರೆ. 

ಮಂಗಳೂರು, ನ.15 : ಮಂಗಳೂರು ಹೊರವಲಯದ ಪಣಂಬೂರು ಜಂಕ್ಷನ್ ಬಳಿ ಸರಣಿ ಅಪಘಾತ ನಡೆದಿದ್ದು ಎರಡು ಟ್ಯಾಂಕರ್ ಗಳ ನಡುವೆ ಸಿಲುಕಿದ ಆಟೋ ಅಪ್ಪಚ್ಚಿಯಾಗಿ ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಮತ್ತು ಆಟೋ ಚಾಲಕ ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ್ದಾರೆ. 

ಕೊಣಾಜೆ ಮೊಂಟೆಪದವಿನ ನಿವಾಸಿಗಳಾದ ಅಬುಬಕ್ಕರ್ (65), ಇಬ್ರಾಹಿಂ (68) ಮತ್ತು ಉಳ್ಳಾಲದ ಆಟೋ ಚಾಲಕ ಮೊಯ್ದೀನ್ ಕುಂಞ (25) ಮೃತರು. ಇವರು ಬೀಡಿ ಕಾರ್ಮಿಕರಾಗಿದ್ದು ಉಳ್ಳಾಲದಿಂದ ಬೈಕಂಪಾಡಿಗೆ ಬೀಡಿ ಕೊಟ್ಟು ಆಟೋದಲ್ಲಿ ಮತ್ತೆ ಉಳ್ಳಾಲದತ್ತ ಮರಳುತ್ತಿದ್ದರು. 

ರಾಷ್ಟ್ರೀಯ ಹೆದ್ದಾರಿಯ ಪಣಂಬೂರು ಸಿಗ್ನಲ್ ನಲ್ಲಿ ವಾಹನಗಳು ಸರತಿಯಲ್ಲಿದ್ದ ವೇಳೆ ಎರಡು ಟ್ಯಾಂಕ‌ರ್, ಆಟೋ ರಿಕ್ಷಾ ಮತ್ತು ಕಾರು ಅಪಘಾತಕ್ಕೀಡಾಗಿದೆ. ಆಟೋ ರಿಕ್ಷಾ ಒಂದು ಟ್ಯಾಂಕರಿನ ಹಿಂದೆ ನಿಂತಿತ್ತು. ಈ ವೇಳೆ, ಹಿಂದಿನಿಂದ ಮತ್ತೊಂದು ಟ್ಯಾಂಕರ್ ವೇಗವಾಗಿ ಬಂದು ಡಿಕ್ಕಿಯಾಗಿದ್ದು ನಡುವೆ ಸಿಲುಕಿದ ಆಟೋ ಅಪ್ಪಚ್ಚಿಯಾಗಿದೆ.‌ ರಿಕ್ಷಾದಲ್ಲಿದ್ದ ಇಬ್ಬರು ಪ್ರಯಾಣಿಕರು ಮತ್ತು ರಿಕ್ಷಾ ಚಾಲಕ ಕುಳಿತಲ್ಲೇ ದುರಂತ ಸಾವನ್ನಪ್ಪಿದ್ದಾರೆ. ಸುರತ್ಕಲ್ ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಟ್ಯಾಂಕರ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. 

ಇಂದು ನಸುಕಿನಲ್ಲಿ ಬಿಸಿ ರೋಡ್ ಬಳಿ ಭೀಕರ ಅಪಘಾತಕ್ಕೀಡಾಗಿ ಬೆಂಗಳೂರು ಮೂಲದ ಮೂವರು ಮೃತಪಟ್ಟಿದ್ದರು. ಇದೀಗ ಮತ್ತೊಂದು ದುರಂತ ಎದುರಾಗಿದೆ.

A tragic chain collision near Panambur Junction on the outskirts of Mangaluru claimed three lives after an auto-rickshaw got sandwiched between two tanker lorries.