ಡಿ.3ರಂದು ಕೊಣಾಜೆಯಲ್ಲಿ ನಾರಾಯಣ ಗುರು-ಗಾಂಧೀಜಿ 'ಸಂವಾದ ಶತಾಬ್ಧಿ" ಕಾರ್ಯಕ್ರಮ ; ಉದ್ಘಾಟನೆಗೆ ಸಿಎಂ ಸಿದ್ಧರಾಮಯ್ಯ, ಲಾಂಛನ ಬಿಡುಗಡೆಗೊಳಿಸಿದ ಸ್ಪೀಕರ್ ಯುಟಿ ಖಾದರ್ 

19-11-25 10:46 pm       Mangalore Correspondent   ಕರಾವಳಿ

ನಾರಾಯಣ ಗುರುಗಳು ಮತ್ತು ಮಹಾತ್ಮ ಗಾಂಧೀಜಿಯವರ ಸಂವಾದದ‌ ಶತಮಾನೋತ್ಸವ ಮತ್ತು ಶ್ರೀ ನಾರಾಯಣ ಗುರುಗಳ ಮಹಾ ನಿರ್ವಾಣ ಶತಮಾನೋತ್ಸವದ ಅಂಗವಾಗಿ ವರ್ಕಳ ಶಿವಗಿರಿ ಮಠ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಆಶ್ರಯದಲ್ಲಿ ಕೊಣಾಜೆ ಮಂಗಳೂರು ವಿವಿಯ ಮೈದಾನದಲ್ಲಿ ಡಿ.03 ರಂದು ನಡೆಯಲಿರುವ ಶತಮಾನದ ಮಹಾ ಪ್ರಸ್ಥಾನ ನಾರಾಯಣ ಗುರು-ಗಾಂಧೀಜಿ "ಸಂವಾದ ಶತಾಬ್ಧಿ" ಕಾರ್ಯಕ್ರಮದಲ್ಲಿ....

ಉಳ್ಳಾಲ, ನ.19 : ನಾರಾಯಣ ಗುರುಗಳು ಮತ್ತು ಮಹಾತ್ಮ ಗಾಂಧೀಜಿಯವರ ಸಂವಾದದ‌ ಶತಮಾನೋತ್ಸವ ಮತ್ತು ಶ್ರೀ ನಾರಾಯಣ ಗುರುಗಳ ಮಹಾ ನಿರ್ವಾಣ ಶತಮಾನೋತ್ಸವದ ಅಂಗವಾಗಿ ವರ್ಕಳ ಶಿವಗಿರಿ ಮಠ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಆಶ್ರಯದಲ್ಲಿ ಕೊಣಾಜೆ ಮಂಗಳೂರು ವಿವಿಯ ಮೈದಾನದಲ್ಲಿ ಡಿ.03 ರಂದು ನಡೆಯಲಿರುವ ಶತಮಾನದ ಮಹಾ ಪ್ರಸ್ಥಾನ ನಾರಾಯಣ ಗುರು-ಗಾಂಧೀಜಿ "ಸಂವಾದ ಶತಾಬ್ಧಿ" ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪಾಲ್ಗೊಳ್ಳಲಿದ್ದು ಆ ಪ್ರಯುಕ್ತ ಕೊಣಾಜೆ ವಿವಿ ಮೈದಾನದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಕಾರ್ಯಕ್ರಮದ ಲಾಂಛನವನ್ನು ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಖಾದರ್ ಅವರು ಅಂದು ನಾರಾಯಣ ಗುರುಗಳು ಮತ್ತು ಗಾಂಧೀಜಿಯವರು ನಡೆಸಿದ ಸಂವಾದ ಮಹತ್ವ ಪಡೆದಂತೆ ಇಲ್ಲಿ ನಡೆಯುವ ಕಾರ್ಯಕ್ರಮವು ಭವಿಷ್ಯದ ಅತ್ಯುತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆಯಾಗಲಿರುವುದಲ್ಲದೆ, ಇತಿಹಾಸ ನಿರ್ಮಿಸಬಲ್ಲ ದೊಡ್ಡ ಮಟ್ಟದ ಕಾರ್ಯಕ್ರಮ ಇದಾಗಲಿದೆ.ಹಿಂದೆ ದೇಶದ ಪರಿಸ್ಥಿತಿಯೇ ಬೇರೆ ಇದ್ದು,ಆ ಸಮಯದಲ್ಲಿ ನಾರಾಯಣ ಗುರುಗಳು ಮತ್ತು ಗಾಂಧೀಜಿಯವರ ಭೇಟಿ ಮಹತ್ವದಾಗಿತ್ತು.ಬಡವರ,ಹಿಂದುಳಿದವರ ಮಕ್ಕಳು ಶಾಲೆಗೆ ಹೋಗುವ ಪರಿಸ್ಥಿತಿ ಅಂದು ಇರಲಿಲ್ಲ.ಇಂದು ಬಡವರ ಮಕ್ಕಳು ಶಾಲೆಗೆ ಹೋಗುತ್ತಿರುವುದು ಗಾಂಧಿ ಮತ್ತು ಗುರುಗಳು ಸಮಾಜಕ್ಕೆ ಕೊಟ್ಟ ಕೊಡುಗೆಯಾಗಿದೆ.

ಈಗಾಗಲೇ ಇಟಲಿಯ ರೋಮಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವನ್ನು ಪೋಪ್ ಉದ್ಘಾಟಿಸಿದ್ದರೆ, ರಾಷ್ಟ್ರೀಯ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಇದೀಗ ಕೊಣಾಜೆಯ ಮಣ್ಣಿನಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ‌ ನಡೆಯುತ್ತಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಗಾಂಧೀಜಿ ಮತ್ತು ನಾರಾಯಣ ಗುರುಗಳು ದೇಶದ ಸಂಪತ್ತಾಗಿದ್ದಾರೆಯೇ ಹೊರತು ಅವರು ಯಾರೊಬ್ಬರ ಸೊತ್ತು ಆಗಿಲ್ಲ.ಸಂವಾದ ಶತಾಬ್ಧಿ ಕಾರ್ಯಕ್ರಮ ಯಶಸ್ಸಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು.ಸಾಮಾಜಿಕ ನ್ಯಾಯ, ಸಮಾನ ಬದುಕು, ಸಂವಿಧಾನದ ಮಹತ್ವ ಪಸರಿಸುವ ಕಾರ್ಯಕ್ರಮ‌ ಇದಾಗಿದೆ ಎಂದರು.

ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ,ತಿರುವನಂತಪುರ ಶಿವಗಿರಿ ಮಠದ ಜ್ಞಾನತೀರ್ಥ ಸ್ವಾಮೀಜಿ,ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್,ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ಕಾರ್ಯಕ್ರಮ ಉಸ್ತುವಾರಿಗಳಾದ ರಕ್ಷಿತ್ ಶಿವರಾಮ್, ಪಿ.ವಿ.ಮೋಹನ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.

To commemorate 100 years of the historic dialogue between Sri Narayana Guru and Mahatma Gandhi, and also to mark the centenary of Sri Narayana Guru’s Mahasamadhi, a state-level event titled “Narayana Guru–Gandhiji Dialogue Centenary” will be held on December 3 at the Mangalore University Grounds in Konaje. The programme is being organized jointly by the Varkala Sivagiri Math and the Sri Narayana Guru Study Chair of Mangalore University.