Cm Siddaramaiah Mangalore: ಆಹ್ವಾನ ಇಲ್ಲದೆ ನಾನೇಕೆ ದೆಹಲಿಗೆ ಹೋಗಲಿ, ಆಹ್ವಾನ ಬಂದರಷ್ಟೇ ಹೋಗುತ್ತೇನೆ ; ಡಿಸಿಎಂ ದೆಹಲಿ ತೆರಳಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ  

03-12-25 10:35 pm       Mangalore Correspondent   ಕರಾವಳಿ

ಔಪಚಾರಿಕವಾಗಿ ಆಹ್ವಾನ ನೀಡದ ಹೊರತು ನವದೆಹಲಿಗೆ ತೆರಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಬುಧವಾರ ನವದೆಹಲಿಗೆ ತೆರಳಿದ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, ಸಿದ್ದರಾಮಯ್ಯ ಮೇಲಿನಂತೆ ಉತ್ತರ ನೀಡಿದ್ದಾರೆ. 

ಮಂಗಳೂರು, ಡಿ.3 : ಔಪಚಾರಿಕವಾಗಿ ಆಹ್ವಾನ ನೀಡದ ಹೊರತು ನವದೆಹಲಿಗೆ ತೆರಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಬುಧವಾರ ನವದೆಹಲಿಗೆ ತೆರಳಿದ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, ಸಿದ್ದರಾಮಯ್ಯ ಮೇಲಿನಂತೆ ಉತ್ತರ ನೀಡಿದ್ದಾರೆ. 

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ವದಂತಿ ಹರಡಿರುವ ಮಧ್ಯೆಯೇ ಸಿಎಂ ಸಿದ್ದರಾಮಯ್ಯ ಮಂಗಳೂರಿಗೆ ಆಗಮಿಸಿದ್ದರು. ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ದರೂ, ಡಿಸಿಎಂ ಮತ್ತೆ ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ. 

ಅತ್ತ ಡಿಸಿಎಂ ದೆಹಲಿಗೆ ತೆರಳಿದರೆ, ಸಿದ್ದರಾಮಯ್ಯ ಅವರು ನಾರಾಯಣ ಗುರುಗಳು ಮಹಾತ್ಮ ಗಾಂಧಿಯವರೊಂದಿಗೆ ಭೇಟಿಯಾದ ಶತಮಾನೋತ್ಸವ  ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿದ್ದರು. ಕಾರ್ಯಕ್ರಮ ಬಳಿಕ ಕಾವೇರಿ ಅತಿಥಿ ಗೃಹಕ್ಕೆ ತೆರಳುವ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಡಿಸಿಎಂ ಯಾರದ್ದೋ ಆಹ್ವಾನದ ಮೇರೆಗೆ ಹೋಗಿರಬಹುದು.‌ ನಾನು ಆಹ್ವಾನ ಇಲ್ಲದೆ ದೆಹಲಿಗೆ ತೆರಳಲ್ಲ ಎಂದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಜೊತೆಗೆ ಚರ್ಚೆ ನಡೆಸಿದ್ದೀರಾ ಎಂಬ ಪ್ರಶ್ನೆಗೆ, ರಾಜಕೀಯದ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ತಿಳಿಸಿದರು. 

ಶಿವಕುಮಾರ್ ದೆಹಲಿಗೆ ಹೋಗುತ್ತಿದ್ದಾರೆ ಎಂದು ವರದಿಗಾರರು ಗಮನಸೆಳೆದಾಗ, 'ಅವರನ್ನು ಹೋಗಲು ಬಿಡಿ. ಯಾರಾದರೂ ಅವರಿಗೆ ಬೇಡ ಎಂದು ಹೇಳಿದ್ದಾರೆಯೇ? ಎಂದರು. ನೀವು ಹೋಗುವಿರೇ ಎಂದು ಕೇಳಿದಾಗ, 'ನನಗೆ ಆಹ್ವಾನ ಬಂದಾಗ ಮಾತ್ರ ನಾನು ಹೋಗುತ್ತೇನೆ. ನನಗೆ ಆಹ್ವಾನ ಬಂದಿಲ್ಲ, ಆದ್ದರಿಂದ ನಾನು ಹೋಗುತ್ತಿಲ್ಲ' ಎಂದರು. ದೆಹಲಿಯಲ್ಲಿ ಸಭೆ ನಡೆಸಲು ಪಕ್ಷದ ಹೈಕಮಾಂಡ್‌ನಿಂದ ಯಾವುದೇ ನಿರ್ದೇಶನವಿದ್ದರೆ, ಅದನ್ನು ವೇಣುಗೋಪಾಲ್ ಮೂಲಕ ತಿಳಿಸಲಾಗುವುದು ಎಂದು ಅವರು ಹೇಳಿದರು.

Karnataka Chief Minister Siddaramaiah stated that he will not travel to New Delhi without a formal invitation from the party high command. His remarks came after Deputy Chief Minister D.K. Shivakumar left for Delhi, sparking fresh curiosity amid ongoing rumours of a possible leadership change in the state.