ಬ್ರೇಕಿಂಗ್ ನ್ಯೂಸ್
06-02-26 09:01 pm Mangalore Correspondent ಕರಾವಳಿ
ಮಂಗಳೂರು, ಫೆ.6 : ಧರ್ಮಸ್ಥಳಕ್ಕೆ ತೆರಳಿದ್ದ ವ್ಯಕ್ತಿಯೊಬ್ಬ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಲ್ಲಿ ನೀವು ಇದೇ ಶಿವರಾತ್ರಿಗೆ ನಿಮ್ಮ ಪಟ್ಟವನ್ನು ಬಿಟ್ಟುಕೊಡಬೇಕು ಎಂದು ಹೇಳಿ ಆವಾಜ್ ಹಾಕಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ವಾಟ್ಸಪ್ ಮತ್ತು ಇನ್ ಸ್ಟಾ ಗ್ರಾಮಿನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೂ ಕಾರಣವಾಗಿದೆ. ವ್ಯಕ್ತಿಯೊಬ್ಬ ವೀರೇಂದ್ರ ಹೆಗ್ಗಡೆಯವರ ಬೂಡಿನ ಮನೆಯ ಒಳಗಡೆ ಇತರೇ ಭಕ್ತರಂತೆ ಸರದಿಯಲ್ಲಿ ಹೋಗಿದ್ದು ಈ ವೇಳೆ ತನ್ನಲ್ಲಿರುವ ಮೊಬೈಲ್ ಕ್ಯಾಮರಾವನ್ನು ರೆಕಾರ್ಡ್ ನಲ್ಲಿ ಇಟ್ಟಿದ್ದು ಕಂಡುಬರುತ್ತದೆ. ಆನಂತರ ತನ್ನ ಸರದಿ ಬಂದಾಗ, ಹೆಗ್ಗಡೆಯವರನ್ನು ಕುರಿತಾಗಿ ನೇರ ಪ್ರಶ್ನೆ ಮಾಡಿದ್ದಾನೆ.

ಈ ಕ್ಷೇತ್ರದಲ್ಲಿ ಧರ್ಮ ಇದೆಯೆಂದು ನೀವು ಹೇಳುತ್ತೀರಾ ಎಂದು ಪ್ರಶ್ನೆ ಮಾಡಿರುವ ಆ ವ್ಯಕ್ತಿ, ಆನಂತರ ಹತ್ತು ವರ್ಷಗಳ ಹಿಂದೂ ಇಲ್ಲಿಗೆ ಬಂದು ಪ್ರಶ್ನಿಸಿದ್ದೆ. ನಿಮಗೆ ನೆನಪಿದೆಯಾ ಎಂದು ಕೇಳುತ್ತಾನೆ. ನೆನಪು ಇದೆ ಎಂದು ಹೆಗ್ಗಡೆ ಹೇಳಿದಾಗ, ನೀವು ಈಗಲೂ ಈ ಕ್ಷೇತ್ರದಲ್ಲಿ ಧರ್ಮ ಇದೆ ಎಂದು ಹೇಳುತ್ತೀರಾ.. ನೀವು ಧರ್ಮ ಇದೆಯೆಂದು ಅಣ್ಣಪ್ಪನ ಎದುರಲ್ಲಿ ಹೇಳುತ್ತೀರಾ. ಮುಂದಿನ ಮಕರ ಸಂಕ್ರಾಂತಿಯಂದು ದೈವದ ಮುಂದೆ ಬರಲು ರೆಡಿ ಇದ್ದೀರಾ ಎಂದು ಪ್ರಶ್ನೆ ಮಾಡುತ್ತಾನೆ. ನಾನು ಕದ್ರಿ ದೇವಸ್ಥಾನದ ಅಂಗಣಕ್ಕೂ ಬೈಕಿನಲ್ಲಿ ಹೋಗಿದ್ದೆ. ಆನಂತರ, ಒಳಗಡೆ ಹೋಗಿ ದೇವಸ್ಥಾನದ ಶಿಖರಕ್ಕೆ ಹತ್ತಿದ್ದೇನೆ. ಧರ್ಮಸ್ಥಳಕ್ಕೂ ಕದ್ರಿಯೇ ಮೂಲ. ನೀವು ಈ ಕ್ಷೇತ್ರವನ್ನು ಬಿಟ್ಟು ಕೊಡಬೇಕು ಎಂದು ಹೇಳುತ್ತಾನೆ.
ಇದಲ್ಲದೆ, ನಿಮ್ಮ ಜೊತೆಗೆ ಒಬ್ಬನೇ ಮಾತನಾಡಬೇಕೆಂಬ ಬಯಕೆ ಇದೆ, ಸಿಬಂದಿ ಯಾರೂ ಜೊತೆಗೆ ಇರಬಾರದು ಎಂದು ಹೇಳುತ್ತಾನೆ. ಅದಕ್ಕೆ ಹೆಗ್ಗಡೆಯವರು ಅದು ಆಗಲ್ಲ, ಇಲ್ಲಿಯೇ ಪ್ರಶ್ನೆ ಕೇಳಿ ಎನ್ನುತ್ತಾರೆ. ಹೆಗ್ಗಡೆಯವರ ಪರಿಚಾರಕರು, ಸಿಬಂದಿಗಳ ಎದುರಲ್ಲೇ ಈ ವ್ಯಕ್ತಿ ಪ್ರಶ್ನೆ ಮಾಡಿದ್ದು, ಆನಂತರ ಅಣ್ಣಪ್ಪ ನೋಡಿಕೊಳ್ಳುತ್ತಾನೆ ಎಂದು ಹೇಳುತ್ತ ಹೊರ ನಡೆದಿದ್ದಾನೆ. ಇದರ ವಿಡಿಯೋವನ್ನು ಸೌಜನ್ಯಾ ಹೋರಾಟಗಾರರು ತಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಹಾಕಿದ್ದು ಭಾರೀ ವೈರಲ್ ಆಗಿದೆ. ಈ ರೀತಿ ಮಾತನಾಡಿ ವಿಡಿಯೋ ಮಾಡಿರುವ ವ್ಯಕ್ತಿ ಮಂಗಳೂರಿನ ಉಳ್ಳಾಲದ ನಿವಾಸಿಯೆಂದು ತಿಳಿದುಬಂದಿದೆ.
A video has gone viral on social media showing a man confronting Dharmasthala Dharmadhikari Dr. D. Veerendra Heggade and asking him to relinquish his position by Shivaratri.
28-02-26 11:49 am
HK News Desk
ರಾಜ್ಯದಲ್ಲಿ ಆಸ್ತಿ ಖರೀದಿದಾರರಿಗೆ ಮತ್ತೊಂದು ಶಾಕ್ !...
27-02-26 10:17 pm
ಧಾರವಾಡ ಪ್ರತಿಭಟನೆ ಎಫೆಕ್ಟ್ ; ರಾಜ್ಯದಲ್ಲಿ 60 ಸಾವಿ...
26-02-26 10:01 pm
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
28-02-26 01:08 pm
HK News Desk
ದೆಹಲಿ ಅಬಕಾರಿ ನೀತಿ ಹಗರಣ ; ಕೇಜ್ರಿವಾಲ್, ಸಿಸೋಡಿಯಾ...
27-02-26 03:55 pm
ಲಂಚ ಆರೋಪದಲ್ಲಿ ಸಿಕ್ಕಿಬಿದ್ದ ಗಣಿ ಉಪ ನಿರ್ದೇಶಕರ ಮನ...
27-02-26 06:14 am
ಮಾರ್ಚ್ 11ರಿಂದ ಅನಿರ್ದಿಷ್ಟ ಮುಷ್ಕರ ; ರಾಜ್ಯಾದ್ಯಂತ...
25-02-26 10:10 pm
ಮಧ್ಯಪ್ರದೇಶದಲ್ಲಿ ಹೊಸ ರೀತಿಯ ಮತಾಂತರ ಜಾಲ ; ಹಿಂದು...
25-02-26 03:38 pm
27-02-26 08:59 pm
Mangalore Correspondent
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
Leopard Mangalore, MLA Vedavyas Kamath: ಕದ್ರಿ...
27-02-26 08:40 pm
Justice Veerappa, Udupi: ಉಪ ಲೋಕಾಯುಕ್ತ ನ್ಯಾ.ವೀ...
27-02-26 08:36 pm
Kuntikana Kidnap, False: ಕುಂಟಿಕಾನದಲ್ಲಿ ಮಕ್ಕಳು...
27-02-26 05:00 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm