ಬ್ರೇಕಿಂಗ್ ನ್ಯೂಸ್
18-02-26 10:24 pm Mangaluru Staffer ಕರಾವಳಿ
ಮಂಗಳೂರು, ಫೆ.18: ಸೋಲಾರ್ ಪ್ಯಾನಲ್ಗಳಿಂದಲೇ ಕಟ್ಟಡವನ್ನು ನಿರ್ಮಾಣ ಮಾಡಿ, ಅದರಿಂದ ವಿದ್ಯುತ್ ಉತ್ಪಾದನೆ ಮಾಡುವ ಇಟಲಿ ಮೂಲದ ಮೀರ್ ಗ್ರೂಪ್ ಕಂಪನಿಯು ಭಾರತದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಲು ಮುಂದಾಗಿದ್ದು, ಇದೇ ಫೆ.21ರಂದು ಮಂಗಳೂರು ಎಸ್ಇಝೆಡ್ ವ್ಯಾಪ್ತಿಯಲ್ಲಿ ಘಟಕದ ಶಿಲಾನ್ಯಾಸ ನಡೆಯಲಿದೆ.
ಇದೇ ವೇಳೆ, ಫೆ.20ರಂದು ಮಂಗಳೂರಿನ ಟಿಎಂಎ ಪೈ ಕನ್ವೆನ್ಶನ್ ಸೆಂಟರ್ ನಲ್ಲಿ ಮೀರ್ ನೆಟ್ ಝೀರೋ -ವಿಶನ್ 2047 ಎನ್ನುವ ಪರಿಕಲ್ಪನೆಯಡಿ ಕಾರ್ಬನ್ ಮಾಲಿನ್ಯ ರಹಿತ ಭವಿಷ್ಯದ ನಗರಗಳು ಎಂಬ ವಿಚಾರದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದೆ. ಸಮಾವೇಶದಲ್ಲಿ ಇಟಲಿ ಸೇರಿದಂತೆ ವಿವಿಧ ದೇಶಗಳ ಖಾಸಗಿ ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಶ್ರೀಪಾದ್ ನಾಯ್ಕ್, ರಾಜ್ಯದ ಇಂಧನ ಸಚಿವ ಕೆ.ಜೆ.ಜಾರ್ಜ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕೆಆರ್ ಇಡಿಎಲ್ ಚೇರ್ಮನ್ ಟಿಡಿ ರಾಜೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಪಾಲ್ಗೊಳ್ಳಲಿದ್ದಾರೆ.

ಈ ಬಗ್ಗೆ ನಗರದಲ್ಲಿ ಮೀರ್ ಗ್ರೂಪ್ ಕಂಪನಿಯ ಗಲ್ಫ್ ವಿಭಾಗದ ಡೈರೆಕ್ಟರ್, ಮಂಗಳೂರಿನವರೇ ಆದ ನಿತಿಕ್ ರತ್ನಾಕರ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಉದ್ಯಮ ಹೂಡಿಕೆ ಕುರಿತಾಗಿ ಖಾಸಗಿ ಕಂಪನಿಯೊಂದು ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಮಾವೇಶ ಏರ್ಪಡಿಸಿದ್ದಲ್ಲದೆ, ವಿದೇಶಿ ಕಂಪನಿಗಳನ್ನು ಹೂಡಿಕೆ ಮಾಡುವಂತೆ ಆಕರ್ಷಿಸಲು ಮುಂದಾಗಿದೆ. ತನ್ನ 1500 ಕೋಟಿ ಹೂಡಿಕೆಯ ಜೊತೆಗೆ, ಇತರೇ ಕಂಪನಿಗಳನ್ನೂ ದೊಡ್ಡ ಮೊತ್ತದ ಹೂಡಿಕೆ ಮಾಡುವಂತೆ ಮಂಗಳೂರಿನಲ್ಲೇ ಸಮಾವೇಶ ಏರ್ಪಡಿಸಿದೆ.
ನೆಟ್ ಝೀರೋ ಇಕಾನಮಿ ಹೆಸರಲ್ಲಿ ಮಾಲಿನ್ಯ ರಹಿತ ನಗರಗಳನ್ನು ಸೃಷ್ಟಿಸಲು ರೋಮ್ ಟು ನ್ಯೂ ಡೆಲ್ಲಿ ಹೆಸರಲ್ಲಿ ವಿಭಿನ್ನ ರೀತಿಯ ಗೋಷ್ಟಿಗಳನ್ನು ಇಟ್ಟುಕೊಂಡಿದ್ದು, ದೇಶ- ವಿದೇಶದ ವಿಷಯ ತಜ್ಞರು, ವಿಜ್ಞಾನಿಗಳು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಸೋಲಾರ್ ಪ್ಯಾನಲ್ ಆಧರಿತ ಉತ್ಪನ್ನಗಳು, ಕಾರ್ಬನ್ ರಹಿತ ಅಭಿವೃದ್ಧಿ ಪರಿಕಲ್ಪನೆಗಳು, ಸೂರ್ಯ ಶಕ್ತಿಯನ್ನು ಬಳಸಿಕೊಂಡು ಉದ್ಯಮ ಸೃಷ್ಟಿ, ಇಟಾಲಿಯನ್ ಡಿಸೈನ್ ಬಗ್ಗೆ ಇಂಜಿನಿಯರಿಂಗ್, ಸೋಲಾರ್ ಇಂಟಗ್ರೇಶನ್ ಮತ್ತು ಗ್ಲಾಸ್ ಟೆಕ್ನಾಲಜಿ, ಪರ್ಯಾಯ ಇಂಧನಗಳ ಕುರಿತಾಗಿ ಗೋಷ್ಟಿ- ಚರ್ಚೆಗಳು ನಡೆಯಲಿವೆ.


ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳು, ಸುರತ್ಕಲ್ ಎನ್ಐಟಿಕೆ ಪ್ರಾಧ್ಯಾಪಕರು ಸೇರಿದಂತೆ ಅಲ್ಲಿನ ಮತ್ತು ಇತರೇ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಸೇರಿ 450ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರ ಬ್ಯಾಕ್ ಟು ಊರು ಪರಿಕಲ್ಪನೆಯಡಿ ವಿದೇಶದಲ್ಲಿ ಕಂಪನಿಗಳನ್ನು ಕಟ್ಟಿರುವ ಮಂಗಳೂರು ಮೂಲದ ಉದ್ಯಮಿಗಳು ಮರಳಿ ಊರಿಗೆ ಬಂದು ಉದ್ಯಮಗಳನ್ನು ಬೆಳೆಸಲು ಮುಂದಾಗಿದ್ದು ಇದೇ ಆಧಾರದಲ್ಲಿ ಮೀರ್ ಗ್ರೂಪ್ ಒಂದು ವರ್ಷದ ಹಿಂದೆಯೇ ಮಂಗಳೂರು ಎಸ್ಇಝೆಡ್ ಜೊತೆಗೆ 1500 ಕೋಟಿ ಮೊತ್ತದ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿತ್ತು. ಇದಕ್ಕಾಗಿ ಎಸ್ಇಝೆಡ್ ನಲ್ಲಿ 40 ಎಕ್ರೆ ಜಾಗವನ್ನು ಕಂಪನಿಗೆ ಕೊಡಲಾಗಿದೆ. ಒಂದು ವರ್ಷ ಕಾಲ ಭಾರತ ಸರಕಾರದ ಜೊತೆಗಿನ ಒಪ್ಪಂದ ಮತ್ತು ಇನ್ನಿತರ ಒಪ್ಪಂದಗಳ ಬಳಿಕ ಇದೀಗ ಫೆ.21ರಂದು ಮಂಗಳೂರು ಬಿಷಪ್ ಮೂಲಕ ಉತ್ಪಾದನಾ ಘಟಕಕ್ಕೆ ಶಿಲಾನ್ಯಾಸ ನಡೆಸುತ್ತಿದೆ.
ಸುದ್ದಿಗೋಷ್ಟಿಯಲ್ಲಿ ಮೀರ್ ಗ್ರೂಪ್ ಸಿಇಓ ರಫೇಲೆ ಮರಾಝೋ, ಮೀರ್ ಗ್ರೂಪ್ ಸಂಸ್ಥೆಯ ಸಾಯಿ ಚಂದು, ಲಾಂಡ್ರಿಯಾ ಲಾ ಮರ್ಸಾ, ಗೌರವ್ ಹೆಗ್ಡೆ, ಸಿಎ ನಿತಿನ್ ಶೆಟ್ಟಿ ಉಪಸ್ಥಿತರಿದ್ದರು.
Join our WhatsApp Group for regular news updates and exclusive stories from Headline Karnataka:
https://t.ly/yCmFN
13-05-26 10:18 pm
HK News Desk
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
13-05-26 06:42 pm
HK News Staffer
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
ವಿಜಯ್ ಗೆಲುವು ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ ಸಿಎಂ...
12-05-26 05:15 pm
13-05-26 11:02 pm
HK News Desk
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
ಇಸ್ರೇಲ್ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯ...
12-05-26 12:05 am
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
13-05-26 09:25 pm
HK News Desk
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm
ಕುತ್ತಾರು ಜಂಕ್ಷನ್ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣಕ...
13-05-26 12:39 pm
ಚಂದನವನಕ್ಕೆ ಆಘಾತ; ಮಿಲನ, ಹಿಟ್ಲರ್ ಕಲ್ಯಾಣ ಖ್ಯಾತಿಯ...
13-05-26 11:44 am