ಬ್ರೇಕಿಂಗ್ ನ್ಯೂಸ್
18-02-26 11:24 pm Mangaluru Staffer ಕರಾವಳಿ
ಮಂಗಳೂರು, ಫೆ.18: ಕಳೆದ ಮಳೆಗಾಲದಲ್ಲಿ ಮನೆ ಕುಸಿದು ತನ್ನೆರಡು ಮಕ್ಕಳನ್ನು ಮತ್ತು ಎರಡೂ ಕಾಲುಗಳನ್ನು ಕಳಕೊಂಡ ಮಂಜನಾಡಿಯ ಅಶ್ವಿನಿ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ, ಸರ್ಕಾರದ ಪರಿಹಾರವೂ ಸಿಕ್ಕಿಲ್ಲ ಎಂದು ಆಕೆಯ ಕುಟುಂಬಸ್ಥರು ಹಾಗೂ ಸಾಮಾಜಿಕ ಕಾರ್ಯಕರ್ತರು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ ಭಟ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಗುಡ್ಡ ಕುಸಿತದಿಂದ ಸಾವು ಬದುಕಿನ ನಡುವೆ ಹೋರಾಡಿದ್ದ ಅಶ್ವಿನಿ ಎರಡು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದು ಎರಡು ಕಾಲುಗಳನ್ನೂ ಕಳಕೊಂಡಿದ್ದರು. ಸದ್ಯ, ತನ್ನದಲ್ಲದ ತಪ್ಪಿಗೆ ಇನ್ನೊಬ್ಬರ ಆಸರೆಯಲ್ಲಿ ಬದುಕುವ ಸ್ಥಿತಿಯಾಗಿದೆ. ಇವರ ಕುಟುಂಬಕ್ಕೆ ಅತ್ತ ಮನೆಯೂ ಸಿಕ್ಕಿಲ್ಲ, ಇತ್ತ ಪರಿಹಾರವೂ ಸಿಕ್ಕಿಲ್ಲ. ನ್ಯಾಯಕ್ಕಾಗಿ ಅಧಿಕಾರಿಗಳ ಬಳಿ ಅಲೆದು ಸುಸ್ತಾಗಿ ಈಗ ಮಂಗಳೂರಿಗೆ ಬಂದ ಮಾನವ ಹಕ್ಕು ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ ನೋವು ಹೇಳಿಕೊಂಡಿದ್ದಾರೆ.

2025ರ ಮೇ 30 ರಂದು ಉಳ್ಳಾಲ ತಾಲೂಕಿನ ಮಂಜನಾಡಿ ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು ದುರಂತ ಸಂಭವಿಸಿತ್ತು. ಮನೆಯ ಅಡಿಯಲ್ಲಿ ಸಿಲುಕಿದ್ದ ಅಶ್ವಿನಿ ಅವರ ಇಬ್ಬರು ಮಕ್ಕಳು ಮತ್ತು ಅತ್ತೆ ಸಾವನ್ನಪ್ಪಿದ್ದರು. ಮಾವ ಕಾಂತಪ್ಪ ಪೂಜಾರಿ ಅವರೂ ತೀವ್ರ ಏಟು ಬಿದ್ದು ಆಸ್ಪತ್ರೆ ಸೇರಿದ್ದರು. ತೀವ್ರ ಗಾಯಗೊಂಡಿದ್ದ ಅಶ್ವಿನಿ ಅವರ ಎರಡು ಕಾಲುಗಳನ್ನು ಆಸ್ಪತ್ರೆಯಲ್ಲಿ ಕತ್ತರಿಸಬೇಕಾಗಿ ಬಂದಿತ್ತು. ಸರ್ಕಾರ ನೈಸರ್ಗಿಪ ವಿಕೋಪ ಅಂತ ಎರಡು ಲಕ್ಷ ಪರಿಹಾರ ಕೊಟ್ಟು ಕೈತೊಳೆದುಕೊಂಡಿತ್ತು. ಆದ್ರೆ ಇದು ಪ್ರಾಕೃತಿಕ ವಿಕೋಪ ಅಲ್ಲ. ಮಾನವ ನಿರ್ಮಿತ ಕೃತ್ಯದ ಘಟನೆ ಅಂತ ಅಶ್ವಿನಿ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದ್ರೆ ಅಲ್ಲಿ ರಸ್ತೆ ಮಾಡಲು ಗುಡ್ಡ ಕಡಿಯಲಾಗಿದೆ ಎಂದು ನೆಪ ಹೇಳಿ ಜಿಪಂ ಎಂಜಿನಿಯರ್ ಗಳು ತಮ್ಮ ವರದಿಯನ್ನೇ ಬುಡಮೇಲು ಮಾಡಿದ್ದರು. ಮಾನವೀಯ ಗುಣವನ್ನೆ ಸಾಯುವಂತೆ ಮಾಡಿದ್ದರು.
ಆಬಳಿಕ ಪದೇ ಪದೇ ಆಂಬುಲೆನ್ಸ್ ನಲ್ಲಿ ಬಂದು ಜಿಲ್ಲಾಧಿಕಾರಿ ಮೊರೆ ಹೋದರೂ ನ್ಯಾಯ ಸಿಕ್ಕಿಲ್ಲ. ಕ್ಷೇತ್ರದ ಶಾಸಕ ಖಾದರ್ ಸ್ಪೀಕರ್ ಆಗಿದ್ದರೂ ನ್ಯಾಯದ ಕದ ತೆರೆಯಲಿಲ್ಲ. ಅಶ್ವಿನಿ ಅವರನ್ನು ವೀಲ್ ಚೇರ್ ನಲ್ಲಿ ಕೂರಿಸಿಕೊಂಡು ಬುಧವಾರ ಮಂಗಳೂರಿನ ಜಿಪಂ ಕಚೇರಿಗೆ ಬಂದಿದ್ದ ಕುಟುಂಬಸ್ಥರು ಮಾನವ ಹಕ್ಕು ಆಯೋಗದ ಅಧ್ಯಕ್ಷ ಶ್ಯಾಂ ಭಟ್ ಅವರನ್ನು ಭೇಟಿ ಮಾಡಿಸಿದ್ದಾರೆ. ಜಿಲ್ಲಾಡಳಿತ ಕೊಟ್ಟ ಪರಿಹಾರ ಅಶ್ವಿನಿಯ ಚಿಕಿತ್ಸೆಗೂ ಸಾಕಾಗಿಲ್ಲ. ಸದ್ಯಕ್ಕೆ ಈಕೆಯನ್ನು ತಾಯಿಯೇ ಆರೈಕೆ ಮಾಡಿ ನೋಡಿಕೊಳ್ಳುತ್ತಿದ್ದಾರೆ. ಮುಂದೆ ಅವರಿಂದ ಆಗದಿದ್ರೆ ಅಶ್ವಿನಿಗೆ ಭಿಕ್ಷೆ ಬೇಡುವ ಸ್ಥಿತಿ ಬರುತ್ತೆ. ಇತ್ತ ಇದ್ದ ಮನೆಯೂ ಇಲ್ಲ. ಆದ್ದರಿಂದ ಮಾನವ ಕೃತ ದುರಂತ ಆಗಿರುವುದರಿಂದ 5 ಕೋಟಿ ಗರಿಷ್ಠ ಪರಿಹಾರ ನೀಡಬೇಕು ಅನ್ನುವ ಬೇಡಿಕೆಯನ್ನು ಇಟ್ಟಿದ್ದಾರೆ. ಆಯೋಗದ ಅಧಿಕಾರಿಗಳು ಸರ್ಕಾರದ ಜೊತೆ ಮಾತುಕತೆ ಮಾಡುತ್ತೇವೆಂದು ಹೇಳಿ ತೆರಳಿದ್ದಾರೆ.
29-03-26 10:19 am
HK News Staffer
RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್...
28-03-26 08:39 pm
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
ಭಾರತದಲ್ಲಿ ಮತ್ತೆ ಲಾಕ್ಡೌನ್ ; ಜಾಲತಾಣದಲ್ಲಿ ಟ್ರೆಂ...
27-03-26 04:49 pm
ಶಾರ್ಟ್ ಕಟ್ ದಾರಿಯೆಂದು ತುಂಗಭದ್ರಾ ನದಿಗೆ ನುಗ್ಗಿಸಿ...
27-03-26 04:04 pm
28-03-26 04:06 pm
HK News Staffer
ನೇಪಾಳದಲ್ಲಿ ಝೆನ್ ಝೀ ಕ್ರಾಂತಿ ನಿಗ್ರಹಿಸಲು ಮುಂದಾಗಿ...
28-03-26 02:58 pm
ಟ್ರಂಪ್ ದಿಢೀರ್ ರಾಜಕೀಯ ಹೆಜ್ಜೆ ; ಯುದ್ಧ ಗಡುವು ಹತ್...
27-03-26 04:07 pm
ಗಲ್ಫ್ ಯುದ್ಧದ ಪರಿಣಾಮ ಊಹಿಸುವುದು ಕಷ್ಟ, ಕೋವಿಡ್ನಂ...
27-03-26 12:11 pm
ಅಮೆರಿಕ ಷರತ್ತಿಗೆ ಪಟ್ಟು ಬಿಡದ ಇರಾನ್ ; ಗಲ್ಫ್ ದೇಶಗ...
26-03-26 09:44 pm
30-03-26 06:09 pm
Mangaluru staffer
ಮಂಗಳೂರಿನಲ್ಲಿ ಆಟೋ ಎಲ್ಪಿಜಿ ಗ್ಯಾಸ್ ಅಭಾವ ; ಸ್ಟೇಶನ...
30-03-26 02:06 pm
ಕುಕ್ಕರ್ನಲ್ಲಿ ಐಇಡಿ ಇಟ್ಟು ಸ್ಫೋಟಿಸಿದ್ದೇನೆ, ನಾನು...
29-03-26 11:11 am
ಬೇಸಗೆ ಬಿರು ಬಿಸಿಲ ನಡುವೆ ಕರಾವಳಿಯಲ್ಲಿ ಹಲವೆಡೆ ಮಳೆ...
28-03-26 09:08 pm
ಮಂಗಳೂರು ವಿವಿಯಿಂದ ಶಿಕ್ಷಣ ಪ್ರೇಮಿ ಹರೇಕಳ ಹಾಜಬ್ಬ,...
27-03-26 03:38 pm
30-03-26 07:35 pm
HK News Desk
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm
ಟ್ಯಾಬ್ಲೆಟ್ ಆರಿಫ್ ಹತ್ಯೆ ; ಟೋಪಿ ನೌಫಾಲ್ ಸಾವನ್ನ ಸ...
29-03-26 10:22 pm
ಅರ್ಕುಳ ಬಳಿ ಹೆದ್ದಾರಿಯಲ್ಲಿ ಹಾಲಿನ ಟ್ಯಾಂಕರ್ ಗೆ ಹಿ...
29-03-26 07:49 pm
ಕಾರ್ಕಳದಲ್ಲಿ ಪೊಲೀಸರ ಮೇಲೆ ಕಾರು ಹರಿಸಲು ಯತ್ನ ; ಆರ...
29-03-26 06:03 pm