ಬ್ರೇಕಿಂಗ್ ನ್ಯೂಸ್
09-03-26 07:29 pm HK News Staffer ಕರಾವಳಿ
ಮಂಗಳೂರು, ಮಾ.9: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳುವ ವಿಮಾನಗಳ ಸಂಚಾರ ಇನ್ನೂ ಸರಿಯಾಗಿಲ್ಲ. ಮಾರ್ಚ್ 9ರ ಸೋಮವಾರವೂ ಹಲವು ಅಂತರಾಷ್ಟ್ರೀಯ ವಿಮಾನಗಳ ಸೇವೆಯನ್ನು ರದ್ದುಪಡಿಸಿತ್ತು. ಇದರಿಂದ ದುಬೈ, ಜೆದ್ದಾ ಮತ್ತು ದಮಾಮ್ಗೆ ಪ್ರಯಾಣಿಸುವ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಪೈಕಿ ಸೋಮವಾರ ಬೆಳಗ್ಗೆ 5:20ಕ್ಕೆ ತೆರಳಬೇಕಿದ್ದ ಮಂಗಳೂರು–ಜೆದ್ದಾ (ಐಎಕ್ಸ್ 845) ವಿಮಾನ ಹಾಗೂ ಸಂಜೆ 18:20ಕ್ಕೆ ಜೆದ್ದಾ–ಮಂಗಳೂರು (ಐಎಕ್ಸ್ 846) ವಿಮಾನ ಪ್ರಯಾಣ ರದ್ದುಗೊಂಡಿದೆ. ಅದೇ ರೀತಿ ಮಧ್ಯಾಹ್ನ 13:20ಕ್ಕೆ ತೆರಳಬೇಕಿದ್ದ ಮಂಗಳೂರು–ದುಬೈ (ಐಎಕ್ಸ್ 831) ಹಾಗೂ ರಾತ್ರಿ 22:10ಕ್ಕೆ ದುಬೈ–ಮಂಗಳೂರು (ಐಎಕ್ಸ್ 832) ವಿಮಾನ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ.
ರಾತ್ರಿ 20:15ಕ್ಕೆ ಹೋಗಬೇಕಿದ್ದ ಮಂಗಳೂರು–ದುಬೈ (ಐಎಕ್ಸ್ 813) ಮತ್ತು ಮಾ.10ರಂದು ಬೆಳಗ್ಗೆ 4:55ಕ್ಕೆ ದುಬೈ–ಮಂಗಳೂರು (ಐಎಕ್ಸ್ 814) ವಿಮಾನಗಳೂ ರದ್ದಾಗಿವೆ. ಮಾ.9ರಂದು ರಾತ್ರಿ 23:10ಕ್ಕೆ ತೆರಳಬೇಕಿದ್ದ ಮಂಗಳೂರು– ದಮಾಮ್ (ಐಎಕ್ಸ್ 847) ಮತ್ತು ಮಾ.10ರಂದು ಬೆಳಗ್ಗೆ 9:25ಕ್ಕೆ ದಮಾಮ್–ಮಂಗಳೂರು ವಿಮಾನ ಸೇವೆಯೂ ಸ್ಥಗಿತಗೊಂಡಿದೆ. ಇದಲ್ಲದೆ ಮಾ.9ರಂದು ರಾತ್ರಿ 23:20ಕ್ಕೆ ಹೊರಡಬೇಕಿದ್ದ ಮಂಗಳೂರು–ದುಬೈ (ಎಯುಎಚ್) (ಐಎಕ್ಸ್ 815) ಮತ್ತು ಮಾ.10ರಂದು ಬೆಳಗ್ಗೆ 8:15ಕ್ಕೆ ದುಬೈ (ಎಯುಎಚ್)–ಮಂಗಳೂರು (ಐಎಕ್ಸ್ 816) ವಿಮಾನಗಳನ್ನೂ ರದ್ದುಗೊಳಿಸಲಾಗಿದೆ.
ಇದರ ಜೊತೆಗೆ ಇಂಡಿಗೊ ವಿಮಾನಗಳಲ್ಲೂ ವ್ಯತ್ಯಯ ಉಂಟಾಗಿದೆ. ಮಾ.9ರಂದು ಬೆಳಗ್ಗೆ 5:20ಕ್ಕೆ ದುಬೈ–ಮಂಗಳೂರು (6ಇ 1437) ಮತ್ತು ರಾತ್ರಿ 21:15ಕ್ಕೆ ಮಂಗಳೂರು–ದುಬೈ (6ಇ 1438) ವಿಮಾನಗಳು ರದ್ದಾಗಿವೆ. ಜೊತೆಗೆ ಸಂಜೆ 19:35ಕ್ಕೆ ಹೊರಡಬೇಕಿದ್ದ ಬೆಂಗಳೂರು–ಮಂಗಳೂರು (6ಇ 578) ವಿಮಾನವೂ ಕಾರ್ಯ ನಿರ್ವಹಿಸುವುದಿಲ್ಲ ಎಂದು ಮಂಗಳೂರು ವಿಮಾನ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ. ವಿಮಾನಗಳ ಸಂಚಾರ ರದ್ದುಗೊಂಡಿದ್ದರಿಂದ ವಿದೇಶಿ ಪ್ರಯಾಣಕ್ಕೆ ಕಾಯುತ್ತಿದ್ದ ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ಮಧ್ಯಪ್ರಾಚ್ಯ ದೇಶಗಳಿಗೆ ತೆರಳಬೇಕಿದ್ದ ಹಾಗೂ ಅಲ್ಲಿಂದ ಬರಬೇಕಿದ್ದ ಒಟ್ಟು 19 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ಗೆ ವಿವಿಧ ದೇಶಗಳಿಂದ ಆಗಮಿಸಬೇಕಿದ್ದ 9 ವಿಮಾನಗಳನ್ನು ರದ್ದುಗೊಳಿಸಿದ್ದರೆ, ಬೆಂಗಳೂರಿನಿಂದ ಹೊರ ದೇಶಗಳಿಗೆ ತೆರಳಬೇಕಿದ್ದ 10 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪರದಾಡುವ ಸ್ಥಿತಿಯಾಗಿದೆ.
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
21-07-26 09:03 pm
HK News Staffer
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
ಕೇರಳದಲ್ಲಿ ಫುಟ್ಬಾಲ್ ಜ್ವರ ; ಮಧ್ಯರಾತ್ರಿ ಫೈನಲ್ ವೀ...
19-07-26 09:37 pm
21-07-26 09:41 pm
HK News Staffer
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
ಎಸ್ಐಆರ್ ನಡುವೆ ಶಾಶ್ವತ ನಿವಾಸಿ ಪತ್ರ ಜಾರಿ ಅಕ್ರಮ ಬ...
17-07-26 07:58 pm
21-07-26 08:03 pm
Mangaluru Staffer
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm
Ravi Shetty, Accident, Mangalore: ನಿಯಂತ್ರಣ ತಪ...
21-07-26 12:18 pm
ಉಕ್ರೇನ್ ಸರಕು ಹಡಗಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ ;...
21-07-26 11:47 am
ತ್ರಿಪುರಾ ಡಿಜಿಪಿ ಅನುರಾಗ್ ಧನಕರ್ ಕಚೇರಿಯಲ್ಲಿ ಗುಂಡ...
20-07-26 10:17 pm