ಬ್ರೇಕಿಂಗ್ ನ್ಯೂಸ್
16-03-26 07:20 pm HK News Staffer ಕರಾವಳಿ
ಮಂಗಳೂರು, ಮಾರ್ಚ್ 16: ಮೂಡುಬಿದ್ರೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಮೂಡುಬಿದ್ರೆಯ ಮಹಿಳೆಯೊಬ್ಬರು ಸುದೀರ್ಘ ಎಂಟು ಪುಟಗಳ ದೂರು ಪತ್ರವನ್ನು ರಾಜ್ಯ ಮಹಿಳಾ ಆಯೋಗ, ಗೃಹ ಸಚಿವರಿಗೆ ಮತ್ತು ಡಿಜಿಪಿಗೆ ರವಾನಿಸಿದ್ದು, ಹಲವಾರು ವಿಚಾರಗಳ ಬಗ್ಗೆ ಆರೋಪ ಮಾಡಿದ್ದಾರೆ.
ತಾಕೊಡೆ ಗ್ರಾಮದ ಕ್ರಿಸ್ತಿಯನ್ ಸಮುದಾಯದ ಪತಿ ಮತ್ತು ಪತ್ನಿಯನ್ನು ಠಾಣೆಗೆ ಕರೆಸಿ ಚಿತ್ರಹಿಂಸೆ ನೀಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಮಂಗಳೂರು ಕಮಿಷನರ್ ಅವರಿಗೆ ದೂರು ನೀಡುತ್ತೇವೆಂದರಿತು ಸಂದೇಶ್ ಅವರು ತನ್ನ ಪತಿಗೆ ಕರೆ ಮಾಡಿ, ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ, ಪತಿಯ ವಿರುದ್ಧ ನೆರೆಮನೆಯವರಿಂದ ದೂರು ಪಡೆದು ಪ್ರಕರಣ ದಾಖಲಿಸಿ ಚಿತ್ರಹಿಂಸೆ ನೀಡಿದ್ದಲ್ಲದೆ, ಚಾರ್ಜ್ ಶೀಟ್ ಹಾಕಿದ್ದರು. ಇದು ಸುಳ್ಳು ದೂರು ಆಗಿದ್ದರೂ ಬಿ ರಿಪೋರ್ಟ್ ಹಾಕಬೇಕಿದ್ದರೆ ತನ್ನ ಜೊತೆ ಲೈಂಗಿಕವಾಗಿ ಸಹಕರಿಸಬೇಕೆಂದು ಒತ್ತಾಯಿಸಿದ್ದರು. ಬಳಿಕ ಇನ್ಸ್ ಪೆಕ್ಟರ್ ಅವರ ಕಾರು ಚಾಲಕ ಅಕ್ಬರ್ ತನ್ನ ಮನೆಗೆ ಬಂದು ಇದೇ ಮಾತನ್ನು ಹೇಳಿದ್ದರು.


2025ರ ಆಗಸ್ಟ್ 18ರಂದು ನನ್ನನ್ನು ಠಾಣೆಗೆ ಕರೆಸಿ ರಾತ್ರಿ ವರೆಗೂ ನಿಲ್ಲಿಸಿದ್ದರು. ಪತಿಯನ್ನು ಬಂಧಿಸಿದ್ದಕ್ಕೆ ವಕೀಲರ ಜೊತೆಗೆ ತೆರಳಿದ್ದರೂ, ಠಾಣೆಯ ಒಳಗೆ ಬಿಡದೆ ಹೊರಗೆ ನಿಲ್ಲಿಸಿದ್ದಲ್ಲದೆ, ಮಹಿಳಾ ಪೊಲೀಸರನ್ನೂ ಹತ್ತಿರಕ್ಕೆ ಕಳಿಸದೆ ಅಮಾನವೀಯವಾಗಿ ವರ್ತಿಸಿದ್ದಾರೆ. ಅಲ್ಲದೆ, ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬ್ಲಾಕ್ಮೇಲ್ ಮಾಡಿದ್ದರು. ನನ್ನ ವಿರುದ್ಧ ಹೋದ ಹಲವರ ಕಿಡ್ನಿ ತೆಗೆಸಿದ್ದೇನೆ, ನಿನ್ನ ಪತಿಯನ್ನೂ ಹಾಗೇ ಮಾಡುತ್ತೇನೆಂದು ಬೆದರಿಸಿದ್ದಾರೆ. ಬಳಿಕ ಪತಿಯ ಕೇಸನ್ನು ಬಿಟ್ಟುಬಿಡಲು 25 ಲಕ್ಷ ಲಂಚ ಕೇಳಿದ್ದು ಒಂದೋ ನನ್ನ ಜೊತೆಗೆ ಸಹಕರಿಸು, ಇಲ್ಲದಿದ್ದರೆ ಹಣ ರೆಡಿ ಮಾಡು ಎಂದು ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದಾರೆ.
ಇದಲ್ಲದೆ, ಇನ್ಸ್ ಪೆಕ್ಟರ್ ಸಂದೇಶ್ ಹಲವು ಮಹಿಳೆಯರ ಜೊತೆಗೆ ಸಂಬಂಧ ಇರಿಸಿಕೊಂಡಿದ್ದು ಠಾಣೆಗೆ ಬಂದ ಅಸಹಾಯಕ ಮಹಿಳೆಯರನ್ನು ಬ್ಲಾಕ್ಮೇಲ್ ಮಾಡಿ ದೌರ್ಜನ್ಯ ಎಸಗಿದ್ದಾರೆ. ಒಬ್ಬರು ಮಹಿಳೆಯ ಜೊತೆಗೆ ಪೊಲೀಸ್ ಯೂನಿಫಾರ್ಮ್ ನಲ್ಲೇ ಡ್ಯಾನ್ಸ್ ಮಾಡಿರುವ ವಿಡಿಯೋ ಇದೆಯೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಮಾಹಿತಿ ಪ್ರಕಾರ, ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಆಂತರಿಕ ತನಿಖೆ ನಡೆಸಿದ್ದು, ಸೂಕ್ತ ಸಾಕ್ಷ್ಯ ಲಭಿಸಿಲ್ಲ ಎಂದು ಮೌನವಾಗಿದ್ದರು. ಆದರೆ, ಇದೀಗ ಬೆಂಗಳೂರಿನ ಮಹಿಳೆಯೊಬ್ಬರ ಮೂಲಕ ದೂರು ಪತ್ರವನ್ನು ಗೃಹ ಸಚಿವರು, ಮಹಿಳಾ ಆಯೋಗಕ್ಕೆ ನೀಡಿದ್ದಾರೆ. ಟಿವಿ ಮಾಧ್ಯಮಗಳಲ್ಲಿ ಸಂದೇಶ್ ವಿರುದ್ಧ ಆರೋಪದ ಹೇಳಿಕೆ ನೀಡಿದ್ದಾರೆ.
13-05-26 10:18 pm
HK News Desk
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
13-05-26 06:42 pm
HK News Staffer
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
ವಿಜಯ್ ಗೆಲುವು ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ ಸಿಎಂ...
12-05-26 05:15 pm
13-05-26 11:02 pm
HK News Desk
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
ಇಸ್ರೇಲ್ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯ...
12-05-26 12:05 am
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
13-05-26 09:25 pm
HK News Desk
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm
ಕುತ್ತಾರು ಜಂಕ್ಷನ್ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣಕ...
13-05-26 12:39 pm
ಚಂದನವನಕ್ಕೆ ಆಘಾತ; ಮಿಲನ, ಹಿಟ್ಲರ್ ಕಲ್ಯಾಣ ಖ್ಯಾತಿಯ...
13-05-26 11:44 am