ಬ್ರೇಕಿಂಗ್ ನ್ಯೂಸ್
27-10-21 04:44 pm Mangalore Reporter ಕರಾವಳಿ
ಮಂಗಳೂರು, ಅ.27: ಎಂಆರ್ ಪಿಎಲ್ ಪೆಟ್ರೋಲಿಯಂ ಸ್ಥಾವರದಿಂದ ಹೊರಬಿಡುವ ತ್ಯಾಜ್ಯ ಸ್ಥಳೀಯ ಜಲಮೂಲಗಳನ್ನು ಹಾಳುಗೆಡವುತ್ತಿರುವ ಬಗ್ಗೆ ಮಾಧ್ಯಮಗಳ ವರದಿಯನ್ನು ಆಧರಿಸಿ ಕರ್ನಾಟಕ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಮಾಲಿನ್ಯ ರಹಿತ ನೀರು ಮತ್ತು ಪರಿಸರ ಮೂಲಭೂತ ಹಕ್ಕಾಗಿದ್ದು, ಅದನ್ನು ಸಂರಕ್ಷಿಸುವುದು ಆಡಳಿತದ ಜವಾಬ್ದಾರಿ ಎಂದಿರುವ ಲೋಕಾಯುಕ್ತ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನೇ ಹೊಣೆಯಾಗಿಸಿ ಕೇಸು ದಾಖಲಿಸಿದೆ. ಅಲ್ಲದೆ, ಈ ಬಗ್ಗೆ ನ.2ರ ಒಳಗೆ ಕೈಗೊಂಡಿರುವ ಕ್ರಮಗಳು ಮತ್ತು ಸೂಕ್ತ ಸಾಕ್ಷ್ಯ ಸಹಿತ ವರದಿಯನ್ನು ನೀಡುವಂತೆ ಆದೇಶ ಮಾಡಿದೆ.
ಎಂಆರ್ ಪಿಎಲ್ ಘಟಕದಿಂದ ಹೊರಬರುವ ಕಪ್ಪು ಆಯಿಲ್ ಮಿಶ್ರಿತ ತ್ಯಾಜ್ಯ ಸ್ಥಳೀಯ ಜಲಮೂಲಗಳನ್ನು ಸೇರುತ್ತಿದೆ. ಅಲ್ಲದೆ, ಇದೇ ನೀರು ಫಲ್ಗುಣಿ ನದಿಯನ್ನು ಸೇರುತ್ತಿದ್ದು, ಸಾರ್ವಜನಿಕರಿಗೆ ಗಂಭೀರ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಈ ಕುರಿತ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ, ಲೋಕಾಯುಕ್ತ ಸುಮೋಟೋ ಕೇಸು ದಾಖಲಿಸಿದೆ. ಜಲಮೂಲಗಳು, ನದಿ, ತೋಡಿನಲ್ಲಿ ಹರಿಯುವ ನೀರಿನ ಸಂರಕ್ಷಣೆ ಅತ್ಯಂತ ಮಹತ್ವದ್ದಾಗಿದ್ದು, ಮನುಷ್ಯರು, ಇತರ ಜೀವಿಗಳು, ಹಕ್ಕಿಗಳ ಆರೋಗ್ಯದ ದೃಷ್ಟಿಯಿಂದ ನೀರನ್ನು ಮಲಿನವಾಗದಂತೆ ಕಾಪಾಡಬೇಕಿದೆ.


ನೈರ್ಮಲ್ಯಯುತ ಪರಿಸರ ಮತ್ತು ಮಾಲಿನ್ಯ ರಹಿತ ನೀರನ್ನು ಪಡೆಯುವುದು ಸಂವಿಧಾನದ ಆರ್ಟಿಕಲ್ 21ರ ಪ್ರಕಾರ ಮನುಷ್ಯನ ಮೂಲಭೂತ ಹಕ್ಕು. ಹೀಗಾಗಿ ಮಾಲಿನ್ಯ ರಹಿತ ಪರಿಸರವನ್ನು ಕಾಪಾಡುವುದು ಸರಕಾರದ ಕರ್ತವ್ಯ ಮತ್ತು ಹೊಣೆಯಾಗಿರುತ್ತದೆ ಎಂದು ಹೇಳಿರುವ ಲೋಕಾಯುಕ್ತ ನ್ಯಾಯಮೂರ್ತಿ, ಈ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿ 23 ಪುಟಗಳ ನೋಟೀಸನ್ನು ಜಿಲ್ಲಾಧಿಕಾರಿಗೆ ನೀಡಿದ್ದಾರೆ. ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ತಹಸೀಲ್ದಾರ್ ಮತ್ತು ಎಂಆರ್ ಪಿಎಲ್ ಆಡಳಿತ ನಿರ್ದೇಶಕರಿಗೂ ಲೋಕಾಯುಕ್ತ ನೋಟೀಸ್ ಜಾರಿ ಮಾಡಿದೆ.
ಇತ್ತೀಚೆಗೆ ಎಂಆರ್ ಪಿಎಲ್ ತ್ಯಾಜ್ಯ ತೋಕೂರು ಭಾಗದ ತೋಡುಗಳಲ್ಲಿ ಮತ್ತು ಪರಿಸರದ ಕೃಷಿ, ಗದ್ದೆಗಳಲ್ಲಿ ಕಂಡುಬಂದಿರುವ ಬಗ್ಗೆ ಡಿವೈಎಫ್ಐ ಕಾರ್ಯಕರ್ತರು ಸರಕಾರದ ಗಮನ ಸೆಳೆಯುವ ಸಲುವಾಗಿ ಪ್ರತಿಭಟನೆ ನಡೆಸಿದ್ದರು. ಪರಿಸರ ನಿಯಂತ್ರಣ ಮಂಡಳಿ ಕಚೇರಿಯ ಮುಂದೆಯೂ ಪ್ರತಿಭಟನೆ ನಡೆಸಿದ್ದರು. ಆದರೆ, ಸ್ಥಳೀಯ ಅಧಿಕಾರಿ ವರ್ಗವಾಗಲೀ, ಜನಪ್ರತಿನಿಧಿಗಳಾಗಲೀ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು.
The Lokayukta, which has registered a suo motu complaint against Dakshina Kannada (DK) district deputy commissioner (DC), has served notices to the deputy commissioner and several other officials. It has taken serious view of the fact that effluents from the industrial area at Jokatte are flowing into the rivulet and River.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm