ಬ್ರೇಕಿಂಗ್ ನ್ಯೂಸ್
09-06-23 10:52 pm Mangalore Correspondent ಕ್ರೈಂ
ಮಂಗಳೂರು, ಜೂನ್ 9: ಗಾಂಜಾ ವ್ಯಾಪಾರ- ವಹಿವಾಟಿನಲ್ಲಿ ತೊಡಗಿಕೊಂಡಿದ್ದ ಬಂಟ್ವಾಳ ಮೂಲದ ಯುವಕನನ್ನು ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಗುಡ್ಡದಲ್ಲಿ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಯುವಕನನ್ನು ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಅಬ್ಬಾಸ್ ಎಂಬವರ ಪುತ್ರ ಫವಾಸ್ ಎಂದು ಗುರುತಿಸಲಾಗಿದೆ. ಮೂಡಿಗೆರೆ ಬಳಿಯ ಬಣಕಲ್ ಗುಡ್ಡದಲ್ಲಿ ಅರೆಸುಟ್ಟ ಶವ ಪತ್ತೆಯಾಗಿದ್ದು, ಫವಾಸ್ ನದ್ದೇ ಶವ ಎಂದು ಪತ್ತೆ ಮಾಡಲಾಗಿದೆ. ಫವಾಸ್ ಈ ಹಿಂದೆ ಮದುವೆಯಾಗಿದ್ದು, ಆನಂತರ ಪತ್ನಿಯನ್ನು ಬಿಟ್ಟು ಹೋಗಿದ್ದ. ಗಾಂಜಾ ಪೆಡ್ಲಿಂಗ್, ಅದೇ ವಹಿವಾಟಿನಲ್ಲಿ ವ್ಯಸ್ತನಾಗಿದ್ದ ಫವಾಸ್ ಮನಗೆ ಬರುವುದನ್ನೇ ಕಡಿಮೆ ಮಾಡಿದ್ದ.

ಫವಾಸ್ ಡ್ರಗ್ಸ್ ಸೇವನೆ ಮಾಡುತ್ತಿದ್ದ ಕಾರಣಕ್ಕೆ ಮನೆಯ ಗೌರವ ಹಾಳಾಗುತ್ತೆ ಎಂದು ಮನೆಯವರು ಕೂಡ ದೂರ ಮಾಡಿದ್ದರು. ಡ್ರಗ್ಸ್ ಮತ್ತು ಗಾಂಜಾ ಗ್ಯಾಂಗಿನಲ್ಲಿ ಗುರುತಿಸಿಕೊಂಡಿದ್ದಕ್ಕೆ ಫವಾಸ್ ಬಗ್ಗೆ ಕುಟುಂಬಸ್ಥರು ಅಸಮಾಧಾನದಲ್ಲಿದ್ದರು. ಅಕ್ರಮವಾಗಿ ಗಾಂಜಾ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರಿಂದ ಮಂಗಳೂರು, ಬಂಟ್ವಾಳದಲ್ಲಿ ಪೊಲೀಸರಿಗೆ ನೋಟೆಡ್ ಆಗಿಯೂ ಇದ್ದ. ಹತ್ತು ದಿನಗಳ ಹಿಂದೆ ಫವಾಸ್ ನನ್ನು ತಂಡವೊಂದು ಅಪಹರಿಸಿದೆ ಎನ್ನಲಾಗುತ್ತಿದ್ದು ಆನಂತರ ನಾಪತ್ತೆಯಾಗಿದ್ದ. ಗಾಂಜಾ ವಹಿವಾಟಿನಲ್ಲಿ ಹಣಕಾಸು ವಿಷಯದಲ್ಲಿ ವೈಷಮ್ಯದಿಂದ ತಂಡ ಅಪಹರಿಸಿತ್ತು ಎನ್ನಲಾಗಿದೆ.
ಈ ನಡುವೆ, ಮೂಡಿಗೆರೆ ಬಳಿಯ ಬಣಕಲ್ ಗುಡ್ಡದಲ್ಲಿ ಪೆಟ್ರೋಲ್ ಹಾಕಿ ಸುಟ್ಟ ಶವ ಪತ್ತೆಯಾಗಿದ್ದು ಫವಾಸ್ ನದ್ದೇ ಎಂದು ಪೊಲೀಸರು ಗುರುತು ಹಚ್ಚಿದ್ದಾರೆ. ಫವಾಸ್ ಕೊಲೆ ಪ್ರಕರಣದಲ್ಲಿ ವಗ್ಗ ಮತ್ತು ಕಾವಳಕಟ್ಟೆಯ ಯುವಕರು ಇದ್ದಾರೆ ಎಂಬುದನ್ನು ಪೊಲೀಸರು ಶಂಕಿಸಿದ್ದಾರೆ. ಫವಾಸ್ ಜೊತೆಗೆ ಗಾಂಜಾ ವಹಿವಾಟಿನಲ್ಲಿ ಗುರುತಿಸಿದ್ದ ಗೆಳೆಯರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
Mangalore Bantwal Youth involved in Ganja gang murdered, body found at Bankal, gutted with fire. The deceased has been identified as Abbas from Ira, Bantwal.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
12-01-26 05:01 pm
Mangaluru Staffer
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm